ಹೆಜ್ಬೊಲ್ಲಾ ಮುಖ್ಯಸ್ಥರ ಭಾಷಣ online desk
ವಿದೇಶ

ಇಸ್ರೇಲ್ ವಿರುದ್ಧ ಕಠಿಣ ಪ್ರತೀಕಾರ ಶತಸಿದ್ಧ; ಸ್ಫೋಟಿಸಿದ್ದಕ್ಕೆ ಶಿಕ್ಷೆಯಾಗಲಿದೆ: ಹೆಜ್ಬುಲ್ಲಾ ಮುಖ್ಯಸ್ಥ

ಸ್ಫೋಟಗಳಿಗೆ "ಕಠಿಣ ಪ್ರತೀಕಾರ ಮತ್ತು ನ್ಯಾಯಯುತ ಶಿಕ್ಷೆ" ಎದುರಿಸಬೇಕಾಗುತ್ತದೆ ಎಂದು ನಸ್ರಲ್ಲಾಹ್ ತಮ್ಮ ಭಾಷಣದಲ್ಲಿ ಹೇಳಿದ್ದಾರೆ.

ಲೆಬನಾನ್: ಲೆಬನಾನ್ ನಲ್ಲಿ ಪೇಜರ್, ವಾಕಿ-ಟಾಕಿಗಳ ಸ್ಫೋಟದಿಂದಾಗಿ ಹೆಜ್ಬೊಲ್ಲ ಸಂಘಟನೆಯ 37 ಮಂದಿ ಸಾವನ್ನಪ್ಪಿದ್ದು, 3,000 ಕ್ಕೂ ಹೆಚ್ಚಿನ ಮಂದಿ ಗಾಯಗೊಂಡಿದ್ದಾರೆ.

ಈ ಕೃತ್ಯದ ಹಿಂದೆ ಇಸ್ರೇಲ್ ಕೈವಾಡವಿರುವ ಶಂಕೆ ವ್ಯಕ್ತವಾಗಿದ್ದು, ಹೆಜ್ಬೊಲ್ಲಾ ಸಂಘಟನೆಯ ಮುಖ್ಯಸ್ಥ ನಸ್ರಲ್ಲಾಹ್ ಇಸ್ರೇಲ್ ಗೆ ಎಚ್ಚರಿಕೆ ರವಾನಿಸಿದ್ದಾರೆ.

ಸ್ಫೋಟಗಳಿಗೆ "ಕಠಿಣ ಪ್ರತೀಕಾರ ಮತ್ತು ನ್ಯಾಯಯುತ ಶಿಕ್ಷೆ" ಎದುರಿಸಬೇಕಾಗುತ್ತದೆ ಎಂದು ನಸ್ರಲ್ಲಾಹ್ ತಮ್ಮ ಭಾಷಣದಲ್ಲಿ ಹೇಳಿದ್ದಾರೆ.

ದಾಳಿಯನ್ನು ಸಂಭವನೀಯ "ಯುದ್ಧದ ಕ್ರಿಯೆ" ಎಂದು ಹೇಳಿರುವ ನಸ್ರಲ್ಲಾಹ್, ಇಸ್ರೇಲ್ "ಕಠಿಣ ಪ್ರತೀಕಾರ ಮತ್ತು ನ್ಯಾಯಯುತ ಶಿಕ್ಷೆಯನ್ನು ಎದುರಿಸಬೇಕಾಗುತ್ತದೆ ಎಂದು ಹೇಳಿದ್ದರೆ.

ದಾಳಿಗಳು "ಹತ್ಯಾಕಾಂಡ" ಆಗಿದ್ದು, "ಯುದ್ಧಾಪರಾಧ ಅಥವಾ ಯುದ್ಧದ ಘೋಷಣೆಯಾಗಿರಬಹುದು" ಎಂದು ಹೇಳಿರುವ, ನಸ್ರಲ್ಲಾಹ್ "ಎರಡು ನಿಮಿಷಗಳಲ್ಲಿ 5,000 ಕ್ಕಿಂತ ಕಡಿಮೆ ಜನರನ್ನು ಕೊಲ್ಲಲು ಇಸ್ರೇಲ್ ಬಯಸಿದೆ" ಎಂದು ಆರೋಪಿಸಿದರು.

ಗಾಜಾದಲ್ಲಿ ಕದನ ವಿರಾಮವನ್ನು ತಲುಪುವವರೆಗೆ ಇಸ್ರೇಲ್ ವಿರುದ್ಧ ಹಿಜ್ಬುಲ್ಲಾದ ಹೋರಾಟವನ್ನು ಮುಂದುವರಿಸುವುದಾಗಿ ನಸ್ರಲ್ಲಾ ಪ್ರತಿಜ್ಞೆ ಮಾಡಿದ್ದಾರೆ.

"ಈ ಎಲ್ಲಾ ರಕ್ತ ಚೆಲ್ಲಿದ" ಹೊರತಾಗಿಯೂ "ಗಾಜಾ ಮೇಲಿನ ಆಕ್ರಮಣವು ನಿಲ್ಲುವವರೆಗೂ ಲೆಬನಾನಿನ ಸಂಘಟನೆ ನಿಲ್ಲುವುದಿಲ್ಲ" ಎಂದು ಅವರು ಹೇಳಿದರು.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಪ್ರದೋಶ್ ಮಾಫಿ ಸಾಕ್ಷಿ ಅರ್ಜಿ ಅಂಗೀಕರಿಸಿದ ಕೋರ್ಟ್; 'ದಾಸ'ನಿಗೆ ಬಿಗ್ ಶಾಕ್!

Congress ಶಾಸಕ ಪ್ರದೀಪ್ ಈಶ್ವರ್ ವಿರುದ್ಧ ಜಾಮೀನು ರಹಿತ ಬಂಧನ ವಾರಂಟ್ ಜಾರಿ, ಬಂಧನ ಭೀತಿ!

ಜಾರ್ಖಂಡ್‌ ವಿದ್ಯಾರ್ಥಿಗಳ ಪ್ರತಿಭಟನೆ ವೇಳೆ ಹೋರಾಗಾರ್ತಿಗೆ 38 ಮಂದಿ ಲೈಂಗಿಕ ಕಿರುಕುಳ: ಎಫ್‌ಐಆರ್‌ ದಾಖಲು, ‘JMM ಗೂಂಡಾಗಳ’ ಕೃತ್ಯ ಎಂದ ಬಿಜೆಪಿ

SIR ವಿರುದ್ಧ 'ಚುನಾವಣಾ ಆಯೋಗ ಚಲೋ' ಘೋಷಿಸಿದ ಪ್ರಕಾಶ್ ರಾಜ್; ಆಯುಕ್ತರ ರಾಜೀನಾಮೆಗೆ ಆಗ್ರಹ

ನಾಳೆ ಜಗತ್ತಿನಾದ್ಯಂತ ಯಶ್ ನಟನೆಯ 'Toxic' ಚಿತ್ರ ಬಿಡುಗಡೆ; ಇಂದು ದಿಢೀರ್ ಕೋರ್ಟ್ ಮೆಟ್ಟಿಲೇರಿದ ನಿರ್ಮಾಪಕ!