ದಾಳಿಯಲ್ಲಿ ಮೃತಪಟ್ಟ ಮಗು 
ವಿದೇಶ

ಗಾಜಾ ಮೇಲೆ ಮತ್ತೆ ಇಸ್ರೇಲ್ ದಾಳಿ; ಒಂದೇ ಕುಟುಂಬದ 10 ಜನ ಸೇರಿ 23 ಮಂದಿ ಸಾವು

ಕಳೆದ ತಿಂಗಳು ಹಮಾಸ್ ಜೊತೆಗಿನ ತನ್ನ ಕದನ ವಿರಾಮ ಕೊನೆಗೊಳಿಸಿ ಮತ್ತೆ ಬಾಂಬ್ ದಾಳಿ ನಡೆಸುತ್ತಿರುವ ಇಸ್ರೇಲ್, ಇದೀಗ ಸಂಪೂರ್ಣ ಗಾಜಾ ಪಟ್ಟಿಯನ್ನು ತನ್ನ ವಶಕ್ಕೆ ಪಡೆಯಲು ಮುಂದಾಗಿದೆ.

ಗಾಜಾ ಪಟ್ಟಿ: ಇಸ್ರೇಲ್ ಪಡೆಗಳು ಗುರುವಾರ ರಾತ್ರಿಯಿಡೀ ಗಾಜಾ ಪಟ್ಟಿಯ ಮೇಲೆ ನಡೆಸಿದ ದಾಳಿಯಲ್ಲಿ ಒಂದೇ ಕುಟುಂಬದ 10 ಜನ ಸೇರಿದಂತೆ ಕನಿಷ್ಠ 23 ಜನ ಸಾವನ್ನಪ್ಪಿದ್ದಾರೆ ಎಂದು ಸ್ಥಳೀಯ ಆರೋಗ್ಯ ಅಧಿಕಾರಿಗಳು ತಿಳಿಸಿದ್ದಾರೆ.

ಏತನ್ಮಧ್ಯೆ, ಆರು ವಾರಗಳಿಂದ ಇಸ್ರೇಲ್ ವಿಧಿಸಿರುವ ಎಲ್ಲಾ ಆಹಾರ ಮತ್ತು ಇತರ ಸರಬರಾಜುಗಳ ದಿಗ್ಬಂಧನದಿಂದ ಹೆಚ್ಚುತ್ತಿರುವ ತೀವ್ರ ಪರಿಣಾಮದ ಬಗ್ಗೆ ವಿಶ್ವಸಂಸ್ಥೆ ಎಚ್ಚರಿಕೆ ನೀಡಿದೆ.

ಕಳೆದ ತಿಂಗಳು ಹಮಾಸ್ ಜೊತೆಗಿನ ತನ್ನ ಕದನ ವಿರಾಮ ಕೊನೆಗೊಳಿಸಿ ಮತ್ತೆ ಬಾಂಬ್ ದಾಳಿ ನಡೆಸುತ್ತಿರುವ ಇಸ್ರೇಲ್, ಇದೀಗ ಸಂಪೂರ್ಣ ಗಾಜಾ ಪಟ್ಟಿಯನ್ನು ತನ್ನ ವಶಕ್ಕೆ ಪಡೆಯಲು ಮುಂದಾಗಿದೆ.

ಇಂದು ಗಾಜಾ ಪಟ್ಟಿಯ ದಕ್ಷಿಣ ನಗರ ಖಾನ್ ಯೂನಿಸ್‌ನಲ್ಲಿ ನಡೆದ ದಾಳಿಯಲ್ಲಿ ಒಂದೇ ಕುಟುಂಬದ ಐದು ಮಕ್ಕಳು, ನಾಲ್ವರು ಮಹಿಳೆಯರು ಮತ್ತು ಒಬ್ಬ ಪುರುಷ ಸಾವನ್ನಪ್ಪಿದ್ದಾರೆ ಎಂದು ಶವಗಳನ್ನು ಸ್ವೀಕರಿಸಿದ ನಾಸರ್ ಆಸ್ಪತ್ರೆ ತಿಳಿಸಿದೆ.

ಇಂಡೋನೇಷ್ಯಾ ಆಸ್ಪತ್ರೆಯ ಪ್ರಕಾರ, ಉತ್ತರ ಗಾಜಾದಲ್ಲಿ ನಡೆದ ದಾಳಿಯಲ್ಲಿ ಒಂಬತ್ತು ಮಕ್ಕಳು ಸೇರಿದಂತೆ 13 ಜನರು ಸಾವನ್ನಪ್ಪಿದ್ದಾರೆ.

ನಾಗರಿಕರಿಗೆ ಹಾನಿಯಾಗುವುದನ್ನು ತಪ್ಪಿಸಲು ಇಸ್ರೇಲಿ ಮಿಲಿಟರಿ ಯತ್ನಿಸುತ್ತಿದೆ ಮತ್ತು ಅವರ ಸಾವಿಗೆ ಹಮಾಸ್ ಹೊಣೆ. ಏಕೆಂದರೆ ಅದು ವಸತಿ ಪ್ರದೇಶಗಳಲ್ಲಿ ಕಾರ್ಯನಿರ್ವಹಿಸುತ್ತಿದೆ ಎಂದು ಇಸ್ರೇಲ್ ಹೇಳಿದೆ.

OCHA ಎಂದು ಕರೆಯಲ್ಪಡುವ ವಿಶ್ವಸಂಸ್ಥೆಯ ಮಾನವೀಯ ಕಚೇರಿಯು, ಗಾಜಾದ 2 ಮಿಲಿಯನ್‌ಗಿಂತಲೂ ಹೆಚ್ಚು ಜನರು ಈಗ ಆಹಾರಕ್ಕಾಗಿ ಚಾರಿಟಿ ಅಡುಗೆಮನೆಗಳಲ್ಲಿ ಪ್ರತಿದಿನ ಉತ್ಪಾದಿಸುವ ಕೇವಲ 1 ಮಿಲಿಯನ್ ಸಿದ್ಧಪಡಿಸಿದ ಊಟವನ್ನು ಅವಲಂಬಿಸಿದ್ದಾರೆ ಎಂದು ಹೇಳಿದೆ.

"2023 ರ ಅಕ್ಟೋಬರ್‌ನಲ್ಲಿ ಯುದ್ಧ ಉಲ್ಬಣಗೊಂಡ ನಂತರ ಗಾಜಾ ಪಟ್ಟಿಯು ಈಗ 18 ತಿಂಗಳುಗಳಲ್ಲಿ ಅತ್ಯಂತ ಕೆಟ್ಟ ಮಾನವೀಯ ಬಿಕ್ಕಟ್ಟನ್ನು ಎದುರಿಸುತ್ತಿದೆ" ಎಂದು OCHA ಹೇಳಿದೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

'ಇಸ್ರೇಲ್‌ ಜೊತೆ ನಮ್ಮ ಸಂಬಂಧ 'ರಕ್ತ ಮತ್ತು ತ್ಯಾಗ'ದಲ್ಲಿ ಬರೆಯಲ್ಪಟ್ಟಿದೆ, ನಾನು ಹುಟ್ಟಿದ ವರ್ಷ ಭಾರತ ಇಸ್ರೇಲ್ ಗೆ ಮಾನ್ಯತೆ ನೀಡಿತು': ಪ್ರಧಾನಿ ಮೋದಿ-Video

ಹಗರಣ ರಹಿತ ಹುದ್ದೆ ಭರ್ತಿಗೆ ಕ್ರಮ: ಯುವಕರು ಧೈರ್ಯವಾಗಿರಿ, ನಿಮ್ಮ ಸಮಸ್ಯೆ ಬಗೆಹರಿಸುತ್ತೇವೆ, ಸದ್ಯದಲ್ಲೇ ಸಂದೇಶ ನೀಡುತ್ತೇವೆ; ಡಿ ಕೆ ಶಿವಕುಮಾರ್

ದಲಿತಾಸ್ತ್ರದ ಮೂಲಕ ಕಟ್ಟಿಹಾಕಲು ಸಿದ್ದು ಬಣ ಕಸರತ್ತು: ತೆರಮರೆಯಲ್ಲಿ ಡಿಕೆಶಿ ಬೆಂಬಲಿಗರ ಮಸಲತ್ತು; ಅಂತರ್ಯುದ್ಧದಲ್ಲಿ ಯಾರಿಗಿದೆ ಗೆಲ್ಲುವ ತಾಕತ್ತು?

Gold Rate Today: ಬೆಂಗಳೂರಿನಲ್ಲಿ ಇಂದಿನ ಚಿನ್ನ, ಬೆಳ್ಳಿ ದರ ಎಷ್ಟಿದೆ? ಇಲ್ಲಿದೆ ವಿವರ...

ಆರೋಗ್ಯ ಇಲಾಖೆಯಿಂದ ಉರ್ದು ಭಾಷೆ ಆಹ್ವಾನ ಪತ್ರಿಕೆ: ಜನರನ್ನು ದಾರಿ ತಪ್ಪಿಸಲೇಬೇಕು ಎಂಬ ಹಠಕ್ಕೆ ಬಿದ್ದಿದ್ದೀರಾ?

SCROLL FOR NEXT