ಢಾಕಾ ವಿವಿಯಲ್ಲಿ ನಿಯಂತ್ರಣ ತಪ್ಪಿದ ಎಸ್ಕಲೇಟರ್ 
ವಿದೇಶ

Video: ದಿಢೀರ್ ವೇಗವಾಗಿ ಚಲಿಸಿದ ಎಸ್ಕಲೇಟರ್, ಜೀವ ಉಳಿಸಿಕೊಳ್ಳಲು ವಿದ್ಯಾರ್ಥಿಗಳ ಪರದಾಟ

ನಮ್ಮ ಅನುಕೂಲಕ್ಕಾಗಿ ನಾವು ಮಾಲ್‌ಗಳು ಮತ್ತು ಮೆಟ್ರೋ ನಿಲ್ದಾಣಗಳಲ್ಲಿ ಎಸ್ಕಲೇಟರ್‌ಗಳನ್ನು ಬಳಸುತ್ತೇವೆ, ಆದರೆ ಈ ಯಂತ್ರವು ಇದ್ದಕ್ಕಿದ್ದಂತೆ ನಿಯಂತ್ರಣ ತಪ್ಪಿದರೆ ಹೇಗೆ?

ಢಾಕಾ: ಬಾಂಗ್ಲಾದೇಶ ರಾಜಧಾನಿ ಢಾಕಾದ ವಿಶ್ವವಿದ್ಯಾಲಯದಲ್ಲಿನ ಎಸ್ಕಲೇಟರ್ ದಿಢೀರ್ ವೇಗವಾಗಿ ಚಲಿಸಿದ್ದು, ಅಲ್ಲಿದ ವಿದ್ಯಾರ್ಥಿಗಳು ಜೀವಉಳಿಸಿಕೊಳ್ಳಲು ಪರದಾಡಿದ ವಿಡಿಯೋವೊಂದು ವ್ಯಾಪಕ ವೈರಲ್ ಆಗುತ್ತಿದೆ.

ಹೌದು.. ನಮ್ಮ ಅನುಕೂಲಕ್ಕಾಗಿ ನಾವು ಮಾಲ್‌ಗಳು ಮತ್ತು ಮೆಟ್ರೋ ನಿಲ್ದಾಣಗಳಲ್ಲಿ ಎಸ್ಕಲೇಟರ್‌ಗಳನ್ನು ಬಳಸುತ್ತೇವೆ, ಆದರೆ ಈ ಯಂತ್ರವು ಇದ್ದಕ್ಕಿದ್ದಂತೆ ನಿಯಂತ್ರಣ ತಪ್ಪಿದರೆ ಹೇಗೆ? ಬಾಂಗ್ಲಾದೇಶದ ರಾಜಧಾನಿ ಢಾಕಾದಲ್ಲಿ ಇದೇ ರೀತಿಯ ಭಯಾನಕ ದೃಶ್ಯ ಕಂಡುಬಂದಿದೆ.

ತಾಂತ್ರಿಕ ದೋಷದಿಂದಾಗಿ, ಬಿಆರ್‌ಎಸಿ ವಿಶ್ವವಿದ್ಯಾಲಯದ ಆವರಣದಲ್ಲಿನ ಎಸ್ಕಲೇಟರ್ ಇದ್ದಕ್ಕಿದ್ದಂತೆ ಅತ್ಯಂತ ಹೆಚ್ಚಿನ ವೇಗದಲ್ಲಿ ಚಲಿಸಲು ಪ್ರಾರಂಭಿಸಿತು, ಇದು ವಿದ್ಯಾರ್ಥಿಗಳಲ್ಲಿ ಭಯಭೀತತೆಯನ್ನು ಉಂಟುಮಾಡಿತು.

ಢಾಕಾ ವಿಶ್ವವಿದ್ಯಾಲಯದಲ್ಲಿರುವ ಎಸ್ಕಲೇಟರ್ ದಿಢೀರ್ 3 -4 ಪಟ್ಟು ವೇಗವಾಗಿ ಚಲಿಸಿದ್ದು, ಈ ವೇಳೆ ಅದರ ಮೇಲೆ ನೂರಾರು ಮಂದಿ ವಿದ್ಯಾರ್ಥಿಗಳು ಇದ್ದರು. ಎಸ್ಕಲೇಟರ್ ವೇಗವಾಗಿ ಚಲಿಸುತ್ತಿದ್ದಂತೆಯೇ ಅದರ ಮೇಲಿದ್ದ ವಿದ್ಯಾರ್ಥಿಗಳು ಆತಂಕಕ್ಕೀಡಾದರು. ಈ ವೇಳೆ ಅಲ್ಪ ಪ್ರಮಾಣದ ಕಾಲ್ತುಳಿತ ಕೂಡ ಸಂಭವಿಸಿದೆ.

ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗುತ್ತಿರುವ ಈ ವೀಡಿಯೊದಲ್ಲಿ, ಎಸ್ಕಲೇಟರ್‌ನಲ್ಲಿ ಹಲವಾರು ವಿದ್ಯಾರ್ಥಿಗಳು ಇರುವುದು ಸ್ಪಷ್ಟವಾಗಿ ಕಂಡುಬರುತ್ತದೆ. ಇದ್ದಕ್ಕಿದ್ದಂತೆ, ಯಂತ್ರದ ವೇಗ ಸಾಮಾನ್ಯಕ್ಕಿಂತ ಹೆಚ್ಚಾಯಿತು. ಈ ವೇಳೆ ಎಸ್ಕಲೇಟರ್ ಮೇಲಿದ್ದ ವಿದ್ಯಾರ್ಥಿಗಳು ನಿಯಂತ್ರಣ ಕಳೆದುಕೊಂಡಿದ್ದಾರೆ. ಎಸ್ಕಲೇಟರ್ ತುದಿ ತಲುಪುತ್ತಿದ್ದಂತೆಯೇ ವಿದ್ಯಾರ್ಥಿಗಳು ಮೇಲೆ ಹಾರಿ ಪ್ರಾಣ ಉಳಿಸಿಕೊಂಡಿದ್ದಾರೆ.

ಈ ಭಯಾನಕ ಘಟನೆಯ ವೀಡಿಯೊವನ್ನು ಅದೇ ವಿಶ್ವವಿದ್ಯಾಲಯದ ವಿದ್ಯಾರ್ಥಿ ತಹ್ಮಿದ್ ಕಮಲ್ ಫೇಸ್‌ಬುಕ್‌ನಲ್ಲಿ ಪೋಸ್ಟ್ ಮಾಡಿದ್ದಾರೆ. ವೀಡಿಯೊವನ್ನು ಹಂಚಿಕೊಂಡ ಅವರು, "ಬಹುಶಃ ಅದಕ್ಕಾಗಿಯೇ ಇದನ್ನು ಸ್ವರ್ಗಕ್ಕೆ ಮೆಟ್ಟಿಲು ಎಂದು ಕರೆಯಲಾಗುತ್ತದೆ" ಎಂದು ವ್ಯಂಗ್ಯವಾಡಿದ್ದಾರೆ.

ಶೀರ್ಷಿಕೆ ಹಾಸ್ಯಮಯವಾಗಿದ್ದರೂ, ವೀಡಿಯೊದಲ್ಲಿ ಚಿತ್ರಿಸಲಾದ ಪರಿಸ್ಥಿತಿ ಅತ್ಯಂತ ಅಪಾಯಕಾರಿಯಾಗಿತ್ತು. ಅದೃಷ್ಟವಶಾತ್, ಯಾವುದೇ ಗಂಭೀರ ಗಾಯಗಳು ವರದಿಯಾಗಿಲ್ಲ, ಆದರೆ ವಿದ್ಯಾರ್ಥಿಗಳು ಭಯಭೀತರಾಗಿದ್ದರು.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

T20 ವಿಶ್ವಕಪ್ 2026: ಮಂಡಿಯೂರಿದ PCB; ಬಾಂಗ್ಲಾದೇಶ ಕ್ರಿಕೆಟ್ ಮಂಡಳಿ ಮೇಲಿನ ನಿರ್ಬಂಧ ತಳ್ಳಿಹಾಕಿದ ICC; ನಿಗದಿಯಂತೆ India vs Pak ಮ್ಯಾಚ್

BCCI ಆಟಗಾರರ ಒಪ್ಪಂದ: ಇಶಾನ್ ಕಿಶನ್, ಮಹಮದ್ ಶಮಿ, ಶ್ರೇಯಾಂಕ ಪಾಟೀಲ್ ಸೇರಿ 8 ಮಂದಿಗೆ ಗೇಟ್ ಪಾಸ್!

ಮೋದಿ ನಡೆ 'ಹೇಡಿತನದ ಪರಮಾವಧಿ'; ನರವಾಣೆ ಪುಸ್ತಕ 56 ಇಂಚಿನ ಎದೆಯೊಳಗಿನ ಪುಕ್ಕಲುತನ ಬಯಲು ಮಾಡಿದೆ!

ರಕ್ಷಣಾ ಕೈಗಾರಿಕಾ ಸಹಕಾರವನ್ನು ಹೆಚ್ಚಿಸುವ ಜಂಟಿ ಘೋಷಣೆಗೆ ಭಾರತ ಮತ್ತು ಗ್ರೀಸ್ ಸಹಿ!

T20 ವಿಶ್ವಕಪ್ 2026: ಕೆನಡಾ ವಿರುದ್ಧ ದಕ್ಷಿಣ ಆಫ್ರಿಕಾಗೆ 57 ರನ್ ಜಯ

SCROLL FOR NEXT