ಪಾಕ್ ಪತ್ರಕರ್ತ ವಿವಾದಾತ್ಮಕ ಹೇಳಿಕೆ 
ವಿದೇಶ

'ಭಾರತೀಯ ನಟಿಯರನ್ನು S*x Slaves ಮಾಡಿಕೊಳ್ಳುತ್ತೇನೆ': Pakistani YouTuber ದುರಂಹಕಾರ! Video Viral

ಭಾರತೀಯ ನಟಿಯರನ್ನು ತನ್ನ ಲೈಂಗಿಕ ಗುಲಾಮರನ್ನಾಗಿ ಮಾಡಿಕೊಳ್ಳುವುದಾಗಿ' ಬಹಿರಂಗವಾಗಿ ಹೇಳಿದ್ದಾನೆ. ಈ ಕುರಿತ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕ ವೈರಲ್ ಆಗುತ್ತಿದೆ.

ಇಸ್ಲಾಮಾಬಾದ್: 26 ಮಂದಿಯ ಸಾವಿಗೆ ಕಾರಣವಾದ ಪಹಲ್ಗಾಮ್ ಭಯೋತ್ಪಾದಕ ದಾಳಿಗೆ ಪ್ರತೀಕಾರವಾಗಿ ಭಾರತ ಪಾಕಿಸ್ತಾನದ ವಿರುದ್ಧ ಆಕ್ರಮಣಕಾರಿ ಕ್ರಮಗಳನ್ನು ಘೋಷಿಸಿದಾಗಿನಿಂದ, ನೆರೆಯ ದೇಶದ ರಾಜಕಾರಣಿಗಳು ಮತ್ತು ಸೆಲೆಬ್ರಿಟಿಗಳು ಭಾರತ ಮತ್ತು ಭಾರತೀಯರ ವಿರುದ್ಧ ಪ್ರಚೋದನಕಾರಿ ಮತ್ತು ಭಯಾನಕ ಹೇಳಿಕೆಗಳನ್ನು ನೀಡುತ್ತಿದ್ದಾರೆ.

ಎರಡು ದೇಶಗಳ ನಡುವೆ ಹೆಚ್ಚುತ್ತಿರುವ ಉದ್ವಿಗ್ನತೆಯ ನಡುವೆ, ಪಾಕಿಸ್ತಾನಿ ಪತ್ರಕರ್ತನೊಬ್ಬ ಸಾಮಾಜಿಕ ಮಾಧ್ಯಮ ವೇದಿಕೆಯಲ್ಲಿ ಪ್ರಚೋದನಕಾರಿ ಹೇಳಿಕೆ ನೀಡಿದ್ದು, 'ಭಾರತೀಯ ನಟಿಯರನ್ನು ತನ್ನ ಲೈಂಗಿಕ ಗುಲಾಮರನ್ನಾಗಿ ಮಾಡಿಕೊಳ್ಳುವುದಾಗಿ' ಬಹಿರಂಗವಾಗಿ ಹೇಳಿದ್ದಾನೆ. ಈ ಕುರಿತ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕ ವೈರಲ್ ಆಗುತ್ತಿದೆ.

ಪಾಡ್ ಕಾಸ್ಟ್ ಕಾರ್ಯಕ್ರಮದಲ್ಲಿ ಪಾಕಿಸ್ತಾನಿ ಪತ್ರಕರ್ತ ನಯೀಮ್ ಹನೀಫ್ ಭಾರತ ಮತ್ತು ಪಾಕಿಸ್ತಾನದ ನಡುವೆ ಯುದ್ಧ ಭುಗಿಲೆದ್ದರೆ ನಿಮ್ಮ ಬಯಕೆ ಏನು? ಎಂದು ಪತ್ರಕರ್ತ ಮಬಾಶಿರ್ ಲುಕ್ಮಾನ್ ಎಂಬಾತನನ್ನು ಕೇಳುತ್ತಾನೆ. ಈ ವೇಳೆ ಉತ್ತರಿಸುವ ಪತ್ರಕರ್ತ ಮಬಾಶಿರ್ ಲುಕ್ಮಾನ್, 'ಯುದ್ಧದ ಜೊತೆ ಭಾರತೀಯ ನಟಿಯರನ್ನು ತನ್ನ ಸೆಕ್ಸ್ ಗುಲಾಮರಾಗಿ ಮಾಡಿಕೊಳ್ಳುತ್ತೇನೆ' ಎಂದು ಹೇಳುತ್ತಾನೆ. ಅಂತೆಯೇ "ಗಂಭೀರವಾಗಿ ಹೇಳಬೇಕೆಂದರೆ, ನನ್ನ ಆಸೆ ಹುತಾತ್ಮತೆಯಲ್ಲ, ನನ್ನ ಆಸೆ ಯೋಧನಾಗುವುದು. ಅಲ್ಲಾಹನು ಪಾಕಿಸ್ತಾನದ ಎಲ್ಲರನ್ನೂ ಯೋಧರನ್ನಾಗಿ ಮಾಡಲಿ" ಎಂದು ಹೇಳುತ್ತಾನೆ.

ವ್ಯಾಪಕ ಆಕ್ರೋಶ

ಇನ್ನು ಪಾಕಿಸ್ತಾನ ಪತ್ರಕರ್ತನ ಈ ಹೇಳಿಕೆ ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕ ವೈರಲ್ ಆಗುತ್ತಿದ್ದು, ಭಾರತೀಯ ನೆಟ್ಟಿಗರು ತೀವ್ರ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ. 'ಇದು ಈ ಒಬ್ಬ ಪತ್ರಕರ್ತನ ಮನಸ್ಥಿತಿಯಲ್ಲ.. ಇದು ಪಾಕಿಸ್ತಾನದ ಆಮೂಲಾಗ್ರ ಮನಸ್ಥಿತಿಯನ್ನು ಉತ್ತೇಜಿಸುವ ಕೊಳಕಿಗೆ ಪುರಾವೆಯಾಗಿದೆ ಎಂದು ಓರ್ವ ಬಳಕೆದಾರ ಕಿಡಿಕಾರಿದ್ದಾರೆ. ಅಂತೆಯೇ ಮತ್ತೋರ್ವ ಬಳಕೆದಾರರು 'ಸ್ತ್ರೀದ್ವೇಷ, ವಿಕೃತತೆ ಮತ್ತು ಅನಾಗರಿಕ ಕಲ್ಪನೆಗಳು ರಾಷ್ಟ್ರೀಯತೆಯ ಲಕ್ಷಣಗಳಲ್ಲ. ಅವು ರೋಗಗ್ರಸ್ತ ಮನಸ್ಥಿತಿಯ ಲಕ್ಷಣಗಳಾಗಿವೆ. ಬಾಲಿವುಡ್ ಈಗ ಮೌನವಾಗಿದ್ದರೆ, ಅದು ಆ ಹೇಳಿಕೆಗೆ ಸಹಭಾಗಿತ್ವವಾಗಿರಲಿದೆ" ಎಂದು ಮತ್ತೋರ್ವ ಬಳಕೆದಾರ ಕಿಡಿಕಾರಿದ್ದಾರೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಭಾರತದ ನೆಲದಲ್ಲೇ ಸ್ತ್ರೀದ್ವೇಷ ಪ್ರದರ್ಶಿಸಿದ ತಾಲೀಬಾನ್ ವಿದೇಶಾಂಗ ಸಚಿವ!; ಸುದ್ದಿಗೋಷ್ಠಿಗೆ ಮಹಿಳೆಯರಿಗಿಲ್ಲ ಪ್ರವೇಶ; ಭುಗಿಲೆದ್ದ ಅಸಮಾಧಾನ!

'ನನ್ನ ಪ್ರಶಸ್ತಿ ಟ್ರಂಪ್‌ಗೆ ಸಮರ್ಪಿತ...' Noble ಶಾಂತಿ ಪ್ರಶಸ್ತಿ ಗೆದ್ದ ಬೆನ್ನಲ್ಲೇ ಮಾರಿಯಾ ಶಾಕಿಂಗ್ ಹೇಳಿಕೆ!

ಚಿಕ್ಕಬಳ್ಳಾಪುರ: 'Miss U Chinna'; ಅಪ್ರಾಪ್ತ ಪ್ರೇಯಸಿಯ ದುಪ್ಪಟ್ಟದಿಂದಲೇ ಯುವಕ ನೇಣಿಗೆ ಶರಣು; Instagram Post Viral

ಬೆಂಗಳೂರಿನಲ್ಲೊಂದು ಹೃದಯ ವಿದ್ರಾವಕ ಘಟನೆ: ಇಬ್ಬರು ಮಕ್ಕಳನ್ನು ಕೊಂದು ತಾಯಿ ಆತ್ಮಹತ್ಯೆ

'ಶಾಂತಿಗಿಂತ ರಾಜಕೀಯವೇ ಹೆಚ್ಚಾಯಿತು': ನೊಬೆಲ್ ಸಮಿತಿ ವಿರುದ್ಧ ಶ್ವೇತಭವನ ಕೆಂಡಾಮಂಡಲ!

SCROLL FOR NEXT