ಪ್ರಧಾನಿ ಮೋದಿ ಮತ್ತು ವ್ಲಾಡಿಮಿರ್ ಪುಟಿನ್  
ವಿದೇಶ

'ಮೋದಿಯವರು ಅವಮಾನ ಸಹಿಸುವುದಿಲ್ಲ, ಅವರು ಬುದ್ಧಿವಂತ ನಾಯಕ, ತಲೆಬಾಗಿಕೊಂಡು ಹೋಗುವವರಲ್ಲ': US tariffs ಮಧ್ಯೆ ಪುಟಿನ್ ಪ್ರಶಂಸೆಯ ಮಾತು! Video

ನಿನ್ನೆ ಸಂಜೆ ದಕ್ಷಿಣ ರಷ್ಯಾದ ಸೋಚಿಯ ಕಪ್ಪು ಸಮುದ್ರದ ರೆಸಾರ್ಟ್‌ನಲ್ಲಿ ಭಾರತ ಸೇರಿದಂತೆ 140 ದೇಶಗಳ ಭದ್ರತೆ ಮತ್ತು ಭೌಗೋಳಿಕ ರಾಜಕೀಯ ತಜ್ಞರ ಅಂತಾರಾಷ್ಟ್ರೀಯ ವಾಲ್ಡೈ ಚರ್ಚಾ ವೇದಿಕೆಯಲ್ಲಿ ಪುಟಿನ್ ಮಾತನಾಡಿದರು.

ಡಿಸೆಂಬರ್ ಆರಂಭದಲ್ಲಿ ಭಾರತಕ್ಕೆ ಭೇಟಿ ನೀಡುವ ಬಗ್ಗೆ ರಷ್ಯಾದ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ತಮ್ಮ ನಿರೀಕ್ಷೆಯನ್ನು ವ್ಯಕ್ತಪಡಿಸಿದ್ದಾರೆ. ಇದೇ ಸಂದರ್ಭದಲ್ಲಿ ಭಾರೀ ಪ್ರಮಾಣದ ಕಚ್ಚಾ ತೈಲ ಆಮದಿನ ಕಾರಣದಿಂದಾಗಿ ಭಾರತದೊಂದಿಗೆ ವ್ಯಾಪಾರ ಅಸಮತೋಲನವನ್ನು ತಗ್ಗಿಸಲು ಕ್ರಮಗಳನ್ನು ರೂಪಿಸಲು ಸರ್ಕಾರಕ್ಕೆ ಆದೇಶಿಸಿದ್ದಾರೆ.

ನಿನ್ನೆ ಸಂಜೆ ದಕ್ಷಿಣ ರಷ್ಯಾದ ಸೋಚಿಯ ಕಪ್ಪು ಸಮುದ್ರದ ರೆಸಾರ್ಟ್‌ನಲ್ಲಿ ಭಾರತ ಸೇರಿದಂತೆ 140 ದೇಶಗಳ ಭದ್ರತೆ ಮತ್ತು ಭೌಗೋಳಿಕ ರಾಜಕೀಯ ತಜ್ಞರ ಅಂತಾರಾಷ್ಟ್ರೀಯ ವಾಲ್ಡೈ ಚರ್ಚಾ ವೇದಿಕೆಯಲ್ಲಿ ಮಾತನಾಡಿದ ಪುಟಿನ್, ರಷ್ಯಾ ಮತ್ತು ಭಾರತದ ನಡುವೆ ಎಂದಿಗೂ ಯಾವುದೇ ಸಮಸ್ಯೆಗಳು ಅಥವಾ ಉದ್ವಿಗ್ನತೆಗಳು ಉಂಟಾಗಿಲ್ಲ. ಯಾವಾಗಲೂ ಅವುಗಳ ಸೂಕ್ಷ್ಮತೆಯನ್ನು ಗಮನದಲ್ಲಿಟ್ಟುಕೊಂಡು ಕ್ರಮಗಳನ್ನು ತೆಗೆದುಕೊಳ್ಳುತ್ತವೆ ಎಂದು ಒತ್ತಿ ಹೇಳಿದರು.

ನಾವು ಭಾರತದೊಂದಿಗೆ ಯಾವುದೇ ಸಮಸ್ಯೆಗಳನ್ನು ಅಥವಾ ಅಂತರದೇಶ ಉದ್ವಿಗ್ನತೆಯನ್ನು ಹೊಂದಿರಲಿಲ್ಲ. ಸೋವಿಯತ್ ಒಕ್ಕೂಟದ ದಿನಗಳಿಂದ, ಭಾರತ ತನ್ನ ಸ್ವಾತಂತ್ರ್ಯಕ್ಕಾಗಿ ಹೋರಾಡುತ್ತಿದ್ದಾಗಿನಿಂದ ರಷ್ಯಾ-ಭಾರತ ಸಂಬಂಧಗಳ 'ವಿಶೇಷ' ಸ್ವರೂಪ ಹೊಂದಿದೆ ಎಂದರು. ಭಾರತವು ಅದನ್ನು ಮರೆತಿಲ್ಲ ಎಂಬುದು ಪ್ರಶಂಸಿಸಬೇಕಾದ ಸಂಗತಿ ಎಂದರು.

ಪ್ರಧಾನಿ ಮೋದಿ ಸ್ನೇಹಿತ

ಪ್ರಧಾನಿ ನರೇಂದ್ರ ಮೋದಿ ಅವರನ್ನು ತಮ್ಮ ಸ್ನೇಹಿತ ಎಂದು ಉಲ್ಲೇಖಿಸಿದ ಅಧ್ಯಕ್ಷ ಪುಟಿನ್, ಮೋದಿ ನೇತೃತ್ವದ ಭಾರತ ರಾಷ್ಟ್ರೀಯತಾವಾದಿ ಸರ್ಕಾರ ಎಂದು ಶ್ಲಾಘಿಸಿದರು, ಮೋದಿಯವರು ಸಮತೋಲಿತ, ಬುದ್ಧಿವಂತ ಮತ್ತು ರಾಷ್ಟ್ರೀಯವಾದಿ ನಾಯಕ ಎಂದು ಬಣ್ಣಿಸಿದರು.

ರಷ್ಯಾದಿಂದ ತೈಲ ಆಮದುಗಳನ್ನು ನಿಲ್ಲಿಸಲು ಅಮೆರಿಕದ ಒತ್ತಡವನ್ನು ನಿರ್ಲಕ್ಷಿಸುವ ಭಾರತದ ನಿರ್ಧಾರಕ್ಕೆ ಸಂಬಂಧಿಸಿದಂತೆ 'ಭಾರತದಲ್ಲಿರುವ ಪ್ರತಿಯೊಬ್ಬರಿಗೂ ಇದು ಚೆನ್ನಾಗಿ ತಿಳಿದಿದೆ. ಅಮೆರಿಕದ ದಂಡನಾತ್ಮಕ ಸುಂಕಗಳಿಂದಾಗಿ ಭಾರತ ಎದುರಿಸುತ್ತಿರುವ ನಷ್ಟಗಳನ್ನು ರಷ್ಯಾದಿಂದ ಕಚ್ಚಾ ತೈಲ ಆಮದುಗಳಿಂದ ಸಮತೋಲನಗೊಳಿಸಲಾಗುತ್ತದೆ, ಜೊತೆಗೆ ಅದು ಸಾರ್ವಭೌಮ ರಾಷ್ಟ್ರವಾಗಿ ಪ್ರತಿಷ್ಠೆಯನ್ನು ಪಡೆಯುತ್ತದೆ ಎಂದರು.

ಮೋದಿ ಯಾವುದೇ ವಿದೇಶಿ ಒತ್ತಡಕ್ಕೆ ಮಣಿಯುವುದಿಲ್ಲ ಎಂದು ಅವರು ವಿಶ್ವಾಸ ವ್ಯಕ್ತಪಡಿಸಿದರು, ಭಾರತದ ಘನತೆ ಮತ್ತು ಕಾರ್ಯತಂತ್ರದ ಸ್ವಾಯತ್ತತೆಯನ್ನು ಸಹ ಬೆಂಬಲಿಸಿದರು.

ವ್ಯಾಪಾರ ಅಸಮತೋಲನವನ್ನು ತೆಗೆದುಹಾಕಲು, ರಷ್ಯಾ ಭಾರತದಿಂದ ಹೆಚ್ಚಿನ ಕೃಷಿ ಉತ್ಪನ್ನಗಳು ಮತ್ತು ಔಷಧಿಗಳನ್ನು ಖರೀದಿಸಬಹುದು. ಭಾರತದಿಂದ ಹೆಚ್ಚಿನ ಕೃಷಿ ಉತ್ಪನ್ನಗಳನ್ನು ಖರೀದಿಸಬಹುದು. ಔಷಧೀಯ ಉತ್ಪನ್ನಗಳು, ಔಷಧಗಳಿಗಾಗಿ ನಮ್ಮ ಕಡೆಯಿಂದ ಕೆಲವು ಕ್ರಮಗಳನ್ನು ಕೈಗೊಳ್ಳಬಹುದು ಎಂದು ಪುಟಿನ್ ಹೇಳಿದರು.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ರೋಚಕ ಘಟ್ಟ ತಲುಪಿದ 'ಸಿಎಂ ಬದಲಾವಣೆ' ಚರ್ಚೆ: ಡಿಕೆಶಿ ಪರ ಶಾಸಕರು ದಿಢೀರ್ ದೆಹಲಿ ಯಾತ್ರೆ; ಹೈಕಮಾಂಡ್ ಮುಂದೆ ಶಕ್ತಿ ಪ್ರದರ್ಶನಕ್ಕೆ ಸಜ್ಜು!

Delhi Blast: ಮತ್ತೆ 4 ಪ್ರಮುಖ ಆರೋಪಿಗಳ ಬಂಧನ, ಬಂಧಿತರ ಸಂಖ್ಯೆ 6 ಕ್ಕೇರಿಕೆ

Vaikunta Ekadasi: ತಿರುಮಲ ವೈಕುಂಠ ದ್ವಾರ ದರ್ಶನ ಕುರಿತು TTD ಮಹತ್ವದ ಮಾಹಿತಿ, ಆನ್​ಲೈನ್​ನಲ್ಲಿ ಮಾತ್ರ ಟಿಕೆಟ್ ಲಭ್ಯ!

Jammu: ದೇಶ ವಿರೋಧಿ ಚಟುವಟಿಕೆ ಆರೋಪ, 'ಕಾಶ್ಮೀರ್ ಟೈಮ್ಸ್' ಕಚೇರಿ ಮೇಲೆ ದಾಳಿ; AK-47 ಕಾರ್ಟ್ರಿಡ್ಜ್‌ಗಳು ಪತ್ತೆ!

ವಾಹನ ಸವಾರರಿಗೆ ಗುಡ್ ನ್ಯೂಸ್: ಮತ್ತೆ ಶೇ.50ರಷ್ಟು ಟ್ರಾಫಿಕ್ ದಂಡ ರಿಯಾಯಿತಿ ಘೋಷಣೆ, ಯಾವಾಗಿಂದ ಗೊತ್ತಾ?

SCROLL FOR NEXT