10.9 ಕೋಟಿ ಗೆದ್ದ ಮಹಿಳೆ 
ವಿದೇಶ

ಕಸಕ್ಕೆ ಎಸೆದಿದ್ದ ಲಾಟರಿ ಟಿಕೆಟ್ ಗೆ ಬಂಪರ್ ಬಹುಮಾನ! ಕೊನೆಗೂ ಹುಡುಕಾಡಿ ಬರೋಬ್ಬರಿ 10.9 ಕೋಟಿ ರೂ ಗೆದ್ದ ಮಹಿಳೆ!

ಪೌರ ಕಾರ್ಮಿಕರು ಇಡೀ ಟ್ರಕ್ ನ ಕಸವನ್ನು ಸುರಿದು, ಒಂದು ದಿನದ ನಿರಂತರ ಹುಡುಕಾಟದ ನಂತರ ಅಂತಿಮವಾಗಿ ಟಿಕೆಟ್ ಸಿಕ್ಕಿದೆ. ಕೊನೆಗೆ ಈಗಾಗಲೇ ಮಾಡಿಕೊಂಡ ಒಪ್ಪಂದದಂತೆ ಕಸ ತೆಗೆಯುವ ವೆಚ್ಚವನ್ನು ಮಹಿಳೆಯೇ ಪಾವತಿಸಿದ್ದಾರೆ.

ಬಿಟೊಂಟೊ: ಲಾಟರಿ ಟಿಕೆಟ್ ವೊಂದನ್ನು ಖರೀದಿಸಿದ್ದ ಇಟಲಿಯ ಮಹಿಳೆಯೊಬ್ಬರು, ಅದರಲ್ಲಿ ನಂಬಿಕೆ ಕಳೆದುಕೊಂಡು ಕಸಕ್ಕೆ ಎಸೆದಿದ್ದರು. ಬಳಿಕ ತಾವು ಖರೀದಿಸಿದ್ದ ಟಿಕೆಟ್ ಗೆ ಬಂಪರ್ ಬಹುಮಾನ ಬಂದಿದ್ದು, ಬರೋಬ್ಬರಿ 10.9 ಕೋಟಿ ಹಣ ಗೆದ್ದಿದ್ದಾರೆ.

ದಕ್ಷಿಣ ಇಟಲಿಯ ಬಿಟೊಂಟೊ ನಗರದಲ್ಲಿ ಈ ಘಟನೆ ನಡೆದಿದೆ. ಅಂದಹಾಗೆ, ಲಾಟರಿ ಟಿಕೆಟ್ ಒಂದನ್ನು ಖರೀದಿಸಿದ್ದ ಮಹಿಳೆ, ಲಾಟರಿ ಸಿಕ್ಕಿದೆಯೇ ಎಂದು ತಿಳಿದುಕೊಳ್ಳಲು ಯಂತ್ರಕ್ಕೆ ಲಾಟರಿ ಸಂಖ್ಯೆಯನ್ನು ನಮೂದಿಸಿ ಪರೀಕ್ಷಿಸಿದ್ದರು. ಆದರೆ, ಆ ಯಂತ್ರ ಪಾವತಿಸಲಾಗುವುದಿಲ್ಲ ಎಂಬ ಸಂದೇಶ ನೀಡಿತ್ತು. ಇದರಿಂದ ಬೇಸರಗೊಂಡ ಮಹಿಳೆ ಲಾಟರಿ ಟಿಕೆಟ್ ನನ್ನು ಕಸಕ್ಕೆ ಎಸೆದಿದ್ದರು.

ಬಳಿಕ ಕುಟುಂಬದ ಸದಸ್ಯರೊಬ್ಬರು ಫೋನ್ ಮಾಡಿ, ಲಾಟರಿಗೆ ಬಂಪರ್ ಬಹುಮಾನ ಬಂದಿರುವುದಾಗಿ ತಿಳಿಸಿದ್ದಾರೆ. ಮಹಿಳೆ ಯಾವಾಗಲೂ 2, 4, 8, 10, and 51 ಸಂಖ್ಯೆಯ ಟಿಕೆಟ್ ನ್ನು ಖರೀದಿಸುತ್ತಿದ್ದರಂತೆ, ತಕ್ಷಣ ಮಹಿಳೆ ಕಸಕ್ಕೆ ಎಸೆದಿದ್ದ ಲಾಟರಿ ಟಿಕೆಟ್ ಹುಡುಕಲು ಬಂದಿದ್ದಾರೆ. ಆದರೆ, ಆ ಸಮಯಕ್ಕಾಗಲೇ ಕಸದವರು ಕಸ ತೆಗೆದುಕೊಂಡು ಹೋಗಿದ್ದರು.

ಇದರಿಂದ ಹತಾಶೆಗೊಂಡ ಮಹಿಳೆ, ತ್ಯಾಜ್ಯ ನಿರ್ವಹಣಾ ಕಂಪನಿಯ ಆಡಳಿತಾಧಿಕಾರಿ ಸಂಪರ್ಕಿಸಿ ನಡೆದ ವಿಷಯ ವಿವರಿಸಿದ್ದಾರೆ. ಮಹಿಳೆಯ ಒತ್ತಾಯದ ಮೇರೆಗೆ ಆಡಳಿತಾಧಿಕಾರಿ ಹೇಗೋ ಸರಿಯಾದ ಕಸದ ಟ್ರಕ್ ನ್ನು ಪತ್ತೆ ಮಾಡಿದ್ದಾರೆ.

ಬಳಿಕ ಪೌರ ಕಾರ್ಮಿಕರು ಸುಮಾರು 6 ಟನ್ ನಷ್ಟಿದ್ದ ಕಸವನ್ನು ಸುರಿದು, ಒಂದು ದಿನದ ನಿರಂತರ ಹುಡುಕಾಟದ ನಂತರ ಅಂತಿಮವಾಗಿ ಟಿಕೆಟ್ ಸಿಕ್ಕಿದೆ. ಕೊನೆಗೆ ಈಗಾಗಲೇ ಮಾಡಿಕೊಂಡ ಒಪ್ಪಂದದಂತೆ ಕಸ ತೆಗೆಯುವ ವೆಚ್ಚವನ್ನು ಮಹಿಳೆಯೇ ಪಾವತಿಸಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

ರಾಜ್ಯಸಭೆಯಲ್ಲಿ ಖರ್ಗೆ ರಣಕಹಳೆ: ಪ್ರತಿಪಕ್ಷಗಳ ಭಾವನೆಗಳನ್ನು ಅಮಿತ್ ಶಾಗೆ ತಿಳಿಸಿ – ರಿಜಿಜುಗೆ ಸಭಾಪತಿ ರಾಧಾಕೃಷ್ಣನ್ ಸೂಚನೆ

ಪ್ರತಿಭಟನೆ ನಡೆಸಿದಾಕ್ಷಣ ಜೆನ್ ಝೀ ಗಳು ರಾಷ್ಟ್ರವಿರೋಧಿಯಾಗುವುದಿಲ್ಲ: RSS ಮುಖ್ಯಸ್ಥ ಮೋಹನ್ ಭಾಗವತ್

UK ಮಕ್ಕಳ ಮೇಲಿನ ಅತ್ಯಾಚಾರ, ಕಳ್ಳಸಾಗಣೆ ಪ್ರಕರಣದ ಆರೋಪಿ ಈಗ ಪಿಒಕೆ ಸಂಸದ!

ಬೆಂಗಳೂರು: ಮಧ್ಯರಾತ್ರಿ ಅಪಾರ್ಟ್‌ಮೆಂಟ್‌ ಬಾಲ್ಕನಿಯಿಂದ ಮನಸೋಇಚ್ಛೆ ಗುಂಡು ಹಾರಿಸಿದ ಟೆಕ್ಕಿ; ಬೆಚ್ಚಿಬಿದ್ದ ಜನ! Video

ರೇಣುಕಾಸ್ವಾಮಿ ಕೊಲೆ ಪ್ರಕರಣ: A-14 ಪ್ರದೋಶ್ ಮಾಫಿ ಸಾಕ್ಷಿ ವಿಚಾರಣೆ, ದರ್ಶನ್ ಗೆ ಕಂಟಕವಾಗುತ್ತಾ? ಆಗಸ್ಟ್ 10ಕ್ಕೆ ಆದೇಶ ಕಾಯ್ದಿರಿಸಿದ ನ್ಯಾಯಾಧೀಶರು!