ಬಂಧಿತ ಆರೋಪಿಗಳು 
ವಿದೇಶ

ನೇಪಾಳ ಪ್ರವಾಹ: ನದಿಯಲ್ಲಿ ಕೊಚ್ಚಿ ಹೋಗುತ್ತಿದ್ದ ಮೃತ ಮಹಿಳೆಯ ಕೂದಲು ಹಿಡಿದು, ಚಿನ್ನದ ಕಿವಿಯೋಲೆ ಕದ್ದ ಖದೀಮರು! Video

ಪ್ರವಾಹದಲ್ಲಿ ಕೊಚ್ಚಿಹೋದ ಮಹಿಳೆಯ ಶವದಿಂದ ಚಿನ್ನದ ಕಿವಿಯೋಲೆಗಳೆಂದು ಹೇಳಲಾದ ವಸ್ತುಗಳನ್ನು ಇಬ್ಬರು ವ್ಯಕ್ತಿಗಳು ತೆಗೆಯುತ್ತಿರುವ ವಿಡಿಯೋವೊಂದು ವೈರಲ್ ಆದ ನಂತರ ಈ ಬಂಧನ ನಡೆದಿದೆ.

ಕಠ್ಮಂಡು: ಚೀನಾ ಮತ್ತು ನೇಪಾಳದ ಗಡಿ ಪ್ರದೇಶದಲ್ಲಿ ಸಂಭವಿಸಿದ ಭೀಕರ ಪ್ರವಾಹದ ನಂತರ ನಡೆಯುತ್ತಿರುವ ರಕ್ಷಣಾ ಕಾರ್ಯಗಳ ನಡುವೆಯೇ, ನಾರಾಯಣಿ ನದಿಯಲ್ಲಿ ಕೊಚ್ಚಿಹೋದ ಸಂತ್ರಸ್ತೆಯೊಬ್ಬಳ ಶವದಿಂದ ಚಿನ್ನದ ಕಿವಿಯೋಲೆಗಳನ್ನು ಕದ್ದ ಆರೋಪದ ಮೇಲೆ ಇಬ್ಬರನ್ನು ಬಂಧಿಸಲಾಗಿದೆ.

ಪ್ರವಾಹದಲ್ಲಿ ಕೊಚ್ಚಿಹೋದ ಮಹಿಳೆಯ ಶವದಿಂದ ಚಿನ್ನದ ಕಿವಿಯೋಲೆಗಳೆಂದು ಹೇಳಲಾದ ವಸ್ತುಗಳನ್ನು ಇಬ್ಬರು ವ್ಯಕ್ತಿಗಳು ತೆಗೆಯುತ್ತಿರುವ ವಿಡಿಯೋವೊಂದು ವೈರಲ್ ಆದ ನಂತರ ಈ ಬಂಧನ ನಡೆದಿದೆ. ಮೃತ ಮಹಿಳೆಯ ಕಿವಿಯಿಂದ ಕಿವಿಯೋಲೆಗಳನ್ನು ಕದ್ದಿದ್ದಕ್ಕಾಗಿ ಈ ಇಬ್ಬರು ವ್ಯಕ್ತಿಗಳನ್ನು ವಶಕ್ಕೆ ಪಡೆಯಲಾಗಿದೆ ಎಂದು ನೇಪಾಳ ಪೊಲೀಸರು ವಿಡಿಯೋವನ್ನು ಹಂಚಿಕೊಂಡಿದ್ದಾರೆ.

ವಿಡಿಯೋದಲ್ಲಿ ಏನಿದೆ? ಮರದ ಹಲಗೆಗಳು ಮತ್ತು ಮಹಿಳೆಯ ಕೂದಲನ್ನು ಹಿಡಿದು ಆಕೆಯ ಶವವನ್ನು ನೀರಿನಿಂದ ಹೊರಗೆ ಎಳೆಯುವುದು ಹಾಗೂ ನಂತರ ಆಕೆಯ ಎರಡೂ ಕಿವಿಗಳಿಂದ ಕಿವಿಯೋಲೆಗಳನ್ನು ತೆಗೆದು ಪಕ್ಕದಲ್ಲಿ ಇರಿಸುವುದು ಕಂಡುಬಂದಿದೆ. ಈ ವೇಳೆ ಸುತ್ತಲೂ ನಿಂತಿದ್ದ ಹಲವರು ವಿಡಿಯೋ ಮಾಡಿದ್ದಾರೆ. ನಂತರ ಭಾರಿ ಪ್ರವಾಹದಿಂದಾಗಿ ನಾರಾಯಣಿ ನದಿಗೆ ಕೊಚ್ಚಿಹೋದ ಶವವೊಂದಕ್ಕೆ ಸಂಬಂಧಿಸಿದ ಘಟನೆ ಇದಾಗಿದೆ ಎಂದು ತನಿಖೆಯ ವೇಳೆ ತಿಳಿದುಬಂದಿದೆ ಎಂದು ಚಿತ್ವಾನ್ ಪೊಲೀಸರು ತಿಳಿಸಿದ್ದಾರೆ.

ವಿಡಿಯೋ ಆಧರಿಸಿ, ಪೊಲೀಸರು 25 ವರ್ಷದ ಮದನ್ ಗುರುಂಗ್ ಮತ್ತು 38 ವರ್ಷದ ಉಮೇಶ್ ಚೌಧರಿ ಅವರನ್ನು ಬಂಧಿಸಿದ್ದಾರೆ. ಭರತ್‌ಪುರ ಮೆಟ್ರೋಪಾಲಿಟನ್ ಸಿಟಿ-1 ರ ಪೋಖರಾ ಬಸ್ ನಿಲ್ದಾಣದ ಬಳಿ ಈ ಇಬ್ಬರು ಶಂಕಿತರನ್ನು ಬಂಧಿಸಲಾಗಿದೆ ಎಂದು ನೇಪಾಳಿ ಮಾಧ್ಯಮ ಪೋರ್ಟಲ್ 'ಖಬರ್‌ಹಬ್' ಪೊಲೀಸರನ್ನು ಉಲ್ಲೇಖಿಸಿ ವರದಿ ಮಾಡಿದೆ.

ಇಂತಹ ಸಂಕಷ್ಟದ ಸಮಯದಲ್ಲಿ ಸಂತ್ರಸ್ತರನ್ನು ಗುರಿಯಾಗಿಸಿಕೊಂಡು ನಡೆಸುವ ಲೂಟಿ ಅಥವಾ ಯಾವುದೇ ರೀತಿಯ ಅಮಾನವೀಯ ಕೃತ್ಯಗಳನ್ನು ಸಹಿಸುವುದಿಲ್ಲ ಎಂದು ಪೊಲೀಸರು ಹೇಳಿದ್ದಾರೆ.

ನೇಪಾಳದಲ್ಲಿ ಕಳೆದ ಕೆಲವು ವರ್ಷಗಳಲ್ಲಿ ಸಂಭವಿಸಿದ ಅತ್ಯಂತ ಮಾರಣಾಂತಿಕ ಪ್ರವಾಹ ದುರಂತವೊಂದರ ನಡುವೆಯೇ ಈ ಘಟನೆ ನಡೆದಿದೆ.

ನೇಪಾಳ-ಟಿಬೆಟ್ ಗಡಿಯಲ್ಲಿ ಸಂಭವಿಸಿದ ಹಠಾತ್ ಪ್ರವಾಹ ಮತ್ತು ಭೂಕುಸಿತದ ನಂತರ ನಾಪತ್ತೆಯಾದ 1,400ಕ್ಕೂ ಹೆಚ್ಚು ಜನರಿಗಾಗಿ ರಕ್ಷಣಾ ತಂಡಗಳು ಕೆಸರಿನಲ್ಲಿ ಶೋಧ ನಡೆಸುತ್ತಿವೆ. ಈ ದುರಂತದಲ್ಲಿ ಮೃತರ ಕನಿಷ್ಠ 392 ಕ್ಕೆ ಏರಿದ್ದು, ಅನೇಕ ಹಳ್ಳಿಗಳು ಸಂಪೂರ್ಣವಾಗಿ ಕೊಚ್ಚಿಹೋಗಿವೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

ಡಿಕೆಶಿ ಸರ್ಕಾರದ ಮೊದಲ ವಿಕೆಟ್ ಪತನ: ಕಣ್ಣೀರಿಡುತ್ತಲೇ ಸಚಿವ ಸ್ಥಾನಕ್ಕೆ ರಾಜೀನಾಮೆ ಘೋಷಿಸಿದ ನಾಗೇಂದ್ರ; BJP ಹೋರಾಟಕ್ಕೆ ಜಯ!

ನೇಪಾಳದಲ್ಲಿ ದಿಢೀರ್ ಪ್ರವಾಹ: ಬಲಿಯಾದವರ ಸಂಖ್ಯೆ 538ಕ್ಕೆ ಏರಿಕೆ; 320 ಭಾರತೀಯ ಪ್ರವಾಸಿಗರು ನಾಪತ್ತೆ!

ಮೂಡ್ ಆಫ್ ದಿ ನೇಷನ್: ಪ್ರಧಾನಿ ರೇಸ್‌ನಲ್ಲಿ ಕೇಜ್ರಿವಾಲ್​ರನ್ನೇ ಹಿಂದಿಕ್ಕಿದ CJP ಸಂಸ್ಥಾಪಕ ಅಭಿಜೀತ್ ದೀಪ್ಕೆ!

ಅಂಡರ್-19 ತಂಡದಲ್ಲಿ ದ್ರಾವಿಡ್, ಸೆಹ್ವಾಗ್ ಮಕ್ಕಳಿಗೆ ಚಾನ್ಸ್; ಸ್ಫೋಟಕ ಪ್ರದರ್ಶನ ನೀಡಿದ್ರೂ ವೈಭವ್ ಸೂರ್ಯವಂಶಿ ಕೈಬಿಟ್ಟ BCCI; ಇಲ್ಲಿದೆ ಕಾರಣ...

ನೇಪಾಳದಲ್ಲಿ ಪ್ರವಾಹದ ರೌದ್ರಾವತಾರ: ಮತ್ತೊಂದು ಜಲಪ್ರಳಯದ ಭೀತಿ; ರಕ್ಷಣಾ ಕಾರ್ಯಾಚರಣೆ ಸ್ಥಗಿತಕ್ಕೆ ಆದೇಶ, ಕೂಡಲೇ ಸುರಕ್ಷಿತ ಸ್ಥಳಗಳಿಗೆ ತೆರಳುವಂತೆ ಸೈನಿಕರಿಗೆ ಸೂಚನೆ..!