ಮೆಕ್ಕಾ ಮೇಲೆ ಹೌತಿ ಡ್ರೋಣ್ ದಾಳಿ 
ವಿದೇಶ

ಇದೇ ಮೊದಲ ಬಾರಿಗೆ ಮೆಕ್ಕಾ ಬಳಿ ಮೊಳಗಿದ ಸೈರನ್: ಹೌತಿ ಡ್ರೋನ್ ಹೊಡೆದುರುಳಿಸಿದ ಸೌದಿ ಅರೇಬಿಯಾ!

ಸೌದಿ ಅರೇಬಿಯಾದ ವಾಯು ರಕ್ಷಣಾ ವ್ಯವಸ್ಥೆಯು ಮಂಗಳವಾರ ಮೆಕ್ಕಾದ ದಕ್ಷಿಣ ಭಾಗದಲ್ಲಿ ಹೌತಿ ಡ್ರೋನ್ ಅನ್ನು ಹೊಡೆದುರುಳಿಸಿದೆ. ಸೌದಿ ನೇತೃತ್ವದ ಮಿಲಿಟರಿ ಒಕ್ಕೂಟವು ಬುಧವಾರ ಮೆಕ್ಕಾದ ನಿರ್ಬಂಧಿತ ವಾಯುಪ್ರದೇಶವನ್ನು ಪ್ರವೇಶಿಸುವ ಮೊದಲೇ ಡ್ರೋನ್ ಅನ್ನು ಹೊಡೆದುರುಳಿಸಲಾಗಿದೆ ಎಂದು ಹೇಳಿದೆ.

ಸೌದಿ ಅರೇಬಿಯಾದ ವಾಯು ರಕ್ಷಣಾ ವ್ಯವಸ್ಥೆಯು ಮಂಗಳವಾರ ಮೆಕ್ಕಾದ ದಕ್ಷಿಣ ಭಾಗದಲ್ಲಿ ಹೌತಿ ಡ್ರೋನ್ ಅನ್ನು ಹೊಡೆದುರುಳಿಸಿದೆ. ಸೌದಿ ನೇತೃತ್ವದ ಮಿಲಿಟರಿ ಒಕ್ಕೂಟವು ಬುಧವಾರ ಮೆಕ್ಕಾದ ನಿರ್ಬಂಧಿತ ವಾಯುಪ್ರದೇಶವನ್ನು ಪ್ರವೇಶಿಸುವ ಮೊದಲೇ ಡ್ರೋನ್ ಅನ್ನು ಹೊಡೆದುರುಳಿಸಲಾಗಿದೆ ಎಂದು ಹೇಳಿದೆ.

ಇಸ್ಲಾಮಿಕ್ ಪವಿತ್ರ ತಾಣಗಳು ಮತ್ತು ಯಾತ್ರಿಕರ ಭದ್ರತೆಯು ಸೌದಿ ಅರೇಬಿಯಾಕ್ಕೆ ಪ್ರಮುಖ ಆದ್ಯತೆಯಾಗಿದೆ ಎಂದು ಒಕ್ಕೂಟದ ವಕ್ತಾರ ತುರ್ಕಿ ಅಲ್-ಮಲಿಕಿ ಹೇಳಿದರು. ಹೌತಿಗಳ ವಿರುದ್ಧ ಒಕ್ಕೂಟವು ಅಗತ್ಯ ಕ್ರಮ ಕೈಗೊಳ್ಳುತ್ತದೆ. ಏತನ್ಮಧ್ಯೆ, ಮೆಕ್ಕಾ ಅಥವಾ ಇತರ ಪವಿತ್ರ ಸ್ಥಳಗಳನ್ನು ಗುರಿಯಾಗಿಸಿಕೊಂಡಿರುವುದನ್ನು ಹೌತಿ ನಿರಾಕರಿಸಿದೆ. ಹೌತಿ ಗುಂಪು ಮೆಕ್ಕಾ ಅಥವಾ ಇತರ ಪವಿತ್ರ ಸ್ಥಳಗಳಿಗೆ ಯಾವುದೇ ಬೆದರಿಕೆಯನ್ನು ಒಡ್ಡುವುದಿಲ್ಲ ಎಂದು ಹೇಳಿದೆ.

ಮೆಕ್ಕಾ ಇಸ್ಲಾಂನ ಪವಿತ್ರ ನಗರವಾಗಿದ್ದು, ಪ್ರಮುಖ ಮುಸ್ಲಿಂ ಪವಿತ್ರ ಸ್ಥಳಗಳಿಗೆ ನೆಲೆಯಾಗಿದೆ. ಪ್ರಪಂಚದಾದ್ಯಂತದ ಲಕ್ಷಾಂತರ ಯಾತ್ರಿಕರು ಹಜ್‌ಗಾಗಿ ಪ್ರತಿ ವರ್ಷ ಅಲ್ಲಿಗೆ ಆಗಮಿಸುತ್ತಾರೆ. ಅಲ್-ಮಲಿಕಿ ಈ ಘಟನೆಯನ್ನು ಮೆಕ್ಕಾವನ್ನು ಗುರಿಯಾಗಿಸಿಕೊಳ್ಳುವ ಹೌತಿಗಳ ಎರಡನೇ ಪ್ರಯತ್ನ ಎಂದು ಹೇಳಿದೆ. ಇದಕ್ಕೂ ಮೊದಲು, ಜುಲೈ 2017ರಲ್ಲಿ, ಒಕ್ಕೂಟವು ಹೌತಿಗಳು ಮೆಕ್ಕಾ ಕಡೆಗೆ ಬ್ಯಾಲಿಸ್ಟಿಕ್ ಕ್ಷಿಪಣಿಗಳನ್ನು ಹಾರಿಸಿದ್ದರು ಎಂದು ಆರೋಪಿಸಿದೆ.

ಇಸ್ಲಾಮಿಕ್ ದೇಶಗಳ ಸಂಘಟನೆಯು ಹೌತಿ ದಾಳಿಯನ್ನು ಭಯೋತ್ಪಾದನೆ ಎಂದು ಹೇಳಿದೆ. ಮೆಕ್ಕಾ ಮತ್ತು ಮದೀನಾ ಪ್ರದೇಶದಲ್ಲಿ ಹೌತಿ ದಾಳಿಯನ್ನು ಇಸ್ಲಾಮಿಕ್ ಸಹಕಾರ ಸಂಘಟನೆ (OIC) ಖಂಡಿಸಿತು. ಪವಿತ್ರ ಸ್ಥಳಗಳು, ಮಸೀದಿಗಳು ಮತ್ತು ನಾಗರಿಕ ಸ್ಥಳಗಳ ಮೇಲೆ ದಾಳಿ ಮಾಡುವುದು ಭಯೋತ್ಪಾದನೆ ಎಂದು ಸಂಘಟನೆ ಹೇಳಿದೆ. ಅಂತಹ ಕ್ರಮಗಳು ಇಸ್ಲಾಮಿಕ್ ಬೋಧನೆಗಳು ಮತ್ತು ಅಂತರರಾಷ್ಟ್ರೀಯ ಕಾನೂನಿಗೆ ವಿರುದ್ಧವಾಗಿವೆ.

ಸೌದಿ ಅರೇಬಿಯಾ ಯೆಮೆನ್‌ನಲ್ಲಿ ವೈಮಾನಿಕ ದಾಳಿ ಮತ್ತು ಕ್ರೂಸ್ ಕ್ಷಿಪಣಿಗಳನ್ನು ಹಾರಿಸುತ್ತಿದೆ ಎಂದು ಇರಾನ್-ಒಗ್ಗೂಡಿಸಲ್ಪಟ್ಟ ಹೌತಿಗಳು ಆರೋಪಿಸಿದ್ದಾರೆ. ದಕ್ಷಿಣ ಮತ್ತು ಪಶ್ಚಿಮ ಯೆಮೆನ್‌ನಲ್ಲಿ ಹೌತಿ ಹೋರಾಟಗಾರರು ಮತ್ತು ಸೌದಿ ಬೆಂಬಲಿತ ಸರ್ಕಾರಿ ಪಡೆಗಳ ನಡುವೆ ಭಾರೀ ಹೋರಾಟ ನಡೆಯುತ್ತಿದೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

ತೆರಿಗೆ ನೀತಿ ಚರ್ಚೆಗಳು ವಲಯ ಹಿತಾಸಕ್ತಿ ಮೀರಬೇಕು: ಒಟ್ಟಾರೆ ಆರ್ಥಿಕತೆಯ ಅಗತ್ಯತೆಗಳ ಮೇಲೆ ಗಮನ ಹರಿಸಬೇಕು- ನಿರ್ಮಲಾ ಸೀತಾರಾಮನ್

ಬೆಳಗಾವಿ: ಆಸ್ತಿ ವಿವಾದ ಸಂಬಂಧ ಗ್ರಾಮ ಪಂಚಾಯ್ತಿಗೆ ಬಂದಿದ್ದ ಮಾಜಿ ಯೋಧ, ಪುತ್ರಿಯ ಬರ್ಬರ ಹತ್ಯೆ

ಸಾಲು ಸಾಲು ಉದ್ಯೋಗ ಕಡಿತದ ನಡುವೆ Flipkart ಗೆ 2.5 ಲಕ್ಷ ಮಂದಿ ಹೊಸ ನೇಮಕ!

ಭಾರತೀಯ ನೌಕಾಪಡೆಯ ನೌಕೆಗೆ ಪಾಕಿಸ್ತಾನದ ಹಡಗು ಡಿಕ್ಕಿ; ಇಸ್ಲಾಮಾಬಾದ್‌ನ ಉನ್ನತ ರಾಯಭಾರಿಗೆ ವಿದೇಶಾಂಗ ಸಚಿವಾಲಯ ಸಮನ್ಸ್

‘ಮಹತ್ವದ ಒಪ್ಪಂದದಿಂದ ಹೆಚ್ಚಿನ ಉದ್ಯೋಗ, ಆದಾಯ’: ಭಾರತದೊಂದಿಗಿನ ಮುಕ್ತ ವ್ಯಾಪಾರ ಒಪ್ಪಂದಕ್ಕೆ ನ್ಯೂಜಿಲೆಂಡ್ ಸಂಸತ್ ಅನುಮೋದನೆ