Source : Online Desk
ಬಾಲಿವುಡ್ ನ ಬಂಡುಕೋರ ಎಂದೇ ಹೆಸರಾದ ನವಾಜುದ್ದೀನ್ ಸಿದ್ದಿಕಿ ಇತ್ತೀಚಿಗೆ ನೀಡಿದ ಸಂದರ್ಶನವೊಂದರಲ್ಲಿ ಬಾಲಿವುಡ್ ಕಾರ್ಯ ನಿರ್ವಹಿಸುತ್ತಿರುವ ಬಗೆಯನ್ನು ಮತ್ತೆ ಟೀಕಿಸಿದ್ದಾರೆ. ಬಾಲಿವುಡ್ ನಲ್ಲಿ ಸ್ವಜನಪಕ್ಷಪಾತ (ನೆಪೋಟಿಸಂ), ಗ್ರೂಪಿಸಂ ಹಾವಳಿ ಇದೆ. ಆದರೆ ಅದಕ್ಕಿಂತ ಹೆಚ್ಚಾಗಿ ಇರುವುದು ವರ್ಣಭೇದ ಎಂದು ನವಾಜುದ್ದೀನ್ ಬಾಂಬ್ ಸಿಡಿಸಿದ್ದಾರೆ.
ಇದನ್ನೂ ಓದಿ: 'ಓ ಮೈ ಗಾಡ್' ಅಕ್ಷಯ್ ಕುಮಾರ್ ಗೆ 'ಶೀಲಾ ಕಿ ಜವಾನಿ' ಕತ್ರೀನಾ ಕೈಫ್ ಕಪಾಳ ಮೋಕ್ಷ ಮಾಡಿದ್ದೇಕೆ?
ಬಾಲಿವುಡ್ ಮಂದಿ ಬಿಳಿ ತೊಗಲಿನ ಕಲಾವಿದರಿಗೆ ಹೆಚ್ಚಿನ ಪ್ರಾಶಸ್ತ್ಯ ನೀಡುತ್ತಾರೆ. ನಾನು ಬಹಳ ಹಿಂದಿನಿಂದಲೂ ಅದರ ವಿರುದ್ಧ ಹೋರಾಡುತ್ತಾ ಬಂದಿದ್ದೇನೆ ಎನ್ನುವ ನವಾಜುದ್ದೀನ್ ಸಿದ್ದಿಕಿ ಈ ಕಾಲಘಟ್ಟದಲ್ಲೂ ಬಿಳಿ ತೊಗಲಿನ ಮೇಲಿನ ಅಂಧಾಭಿಮಾನ ಹೋಗದೇ ಇರುವುದಕ್ಕೆ ಬೇಸರಿಸಿದ್ದಾರೆ.
ಇದನ್ನೂ ಓದಿ: 'ವಿಶ್ವದ ಅತ್ಯಂತ ಸುಂದರ ವ್ಯಕ್ತಿ' ನನ್ನ ಗಂಡ: ಕರೀನಾ ಕಪೂರ್
ಕಪ್ಪು ಅಥವಾ ಕಂದು ತೊಗಲಿನ ಕಲಾವಿದರು ನಾಯಕ ಅಥವಾ ನಾಯಕಿಯರಾಗಿ ನಟಿಸುವ ದಿನಗಳು ಒಟಿಟಿ ಸೇವೆಯಿಂದಾಗಿ ಭಾರತದಲ್ಲಿ ಬರಲಿರುವ ವಿಶ್ವಾಸವನ್ನು ಅವರು ವ್ಯಕ್ತಪಡಿಸಿದ್ದಾರೆ. ಏಕೆಂದರೆ ಅಲ್ಲಿ ಮುಖ್ಯವಾಗಿ ಕಂಟೆಟ್ ಕಡೆಗೆ ಹೆಚ್ಚಿನ ಪ್ರಾಶಸ್ತ್ಯ ನೀಡುತ್ತಾರೆಯೇ ವಿನಾ ಮಿಕ್ಕೆಲ್ಲಾ ಸಂಗತಿ ನಗಣ್ಯ ಎನ್ನುವುದು ಅವರ ಅಭಿಪ್ರಾಯ.
ಇದನ್ನೂ ಓದಿ: ಆರ್ ಎಸ್ ಎಸ್ ಕುರಿತ ಹೇಳಿಕೆ: ಬಾಲಿವುಡ್ ಗೀತೆ ರಚನೆಕಾರ ಜಾವೇದ್ ಅಖ್ತರ್ ವಿರುದ್ಧ ಎಫ್ ಐಆರ್
ನೆಟ್ ಫ್ಲಿಕ್ಸ್ ಮತ್ತಿತರ ಒಟಿಟಿ ಪ್ಲಾಟ್ ಫಾರ್ಮ್ ಗಳು ಬಂದ ನಂತರವೂ ಕಂಟೆಂಟ್ ವಿಷಯದಲ್ಲಿ ಮುಖ್ಯವಾಹಿನಿ ಸಿನಿಮಾಗಳಲ್ಲಿ ಪ್ರೇಕ್ಷಕರಿಗೆ ವಂಚನೆ ಎಸಗಲಾಗುತ್ತಿದೆ ಎಂದು ನವಾಜ್ ಖೇದ ವ್ಯಕ್ತಪಡಿಸಿದ್ದಾರೆ.
ಇದನ್ನೂ ಓದಿ: ಸಮಂತಾ- ನಾಗಚೈತನ್ಯ ವಿಚ್ಛೇದನಕ್ಕೆ 'ಡಿವೋರ್ಸ್ ಎಕ್ಸ್ ಪರ್ಟ್' ಅಮೀರ್ ಖಾನ್ ಕಾರಣ: ಕಂಗನಾ ರಾನಾವತ್
ಯಾವುದೋ ಒಂದು ಸಿನಿಮಾ ಬಾಕ್ಸಾಫೀಸಿನಲ್ಲಿ ಹಿಟ್ ಆದರೆ ಸಾಕು ಅದೇ ಮಾದರಿಯ ಹತ್ತು ಹಲವು ಸಿನಿಮಾಗಳು ಸರದಿ ಪ್ರಕಾರ ತೆರೆಗೆ ಅಪ್ಪಳಿಸುತ್ತವೆ. ಈ ಸಿನಿಮಾಗಳು ಬೇರೆ ಬೇರೆ ಎಂದು ತೋರಿದರೂ ಅವುಗಳ ಮೂಲ ಫಾರ್ಮ್ಯುಲ ಒಂದೇ ಆಗಿರುತ್ತದೆ.
ಇದನ್ನೂ ಓದಿ: ಇಂಟರ್ನೆಟ್ ನಲ್ಲಿ ಕಿಚ್ಚು ಹೊತ್ತಿಸಿದ ಪರಮ್ ಸುಂದರಿ: ಕೃತಿ ಸನೋನ್ ಹಾಡಿಗೆ ತಾಳ ಹಾಕಿದ ಟಾಪ್ ಪರಮ ಸುಂದರಿಯರು