ಕಿನ್ನಕಿ ಧಾರಾವಾಹಿ ಸಕ್ಸಸ್ ಬೆನ್ನಲ್ಲೇ ನಟ ಕಿರಣ್ ರಾಜ್ ಸ್ಯಾಂಡಲ್ವುಡ್ಗೆ ಪಾದಾರ್ಪಣೆ ಮಾಡೋಕೆ ಸಿದ್ಧವಾಗುತ್ತಿದ್ದಾರೆ. ಕಿರುತೆರೆಯಲ್ಲಿ ಜನಪ್ರಿಯತೆ ಗಳಿಸಿದ್ದ ಕಿರಣ್ ರಾಜ್, 'ಅಸತೋಮ ಸದ್ಗಮಯ' ಎಂಬ ಸಿನಿಮಾದಿಂದ ನಾಯಕನಾಗಿ ಬಡ್ತಿ ಪಡೆದಿದ್ದರು. ಆದರೆ, ವಿಪರ್ಯಾಸವೆಂದರೆ, ಸಿನಿಮಾದಲ್ಲಿ ಹೀರೋ ಆಗ ಬೇಕಿದ್ದ ಕಿರಣ್ ವಿರುದ್ಧ ಆತನ ಪ್ರೇಯಸಿಯೇ ದೂರು ದಾಖಲಿಸಿದ್ದಾರೆ. ನಟಿ ಯಾಸ್ಮಿನ್ ಹೇಳುವಂತೆ ತಾವು ಮತ್ತು ಕಿರಣ್ ಹಲವು ವರ್ಷಗಳಿಂದ ಪ್ರೀತಿಸುತ್ತಿದ್ದು, ಪರಸ್ಪರ ಒಪ್ಪಿಗೆ ಮೇರೆಗೆ ಲಿವಿಂಗ್ ಟು ಗೆದರ್ ರಿಲೇಷನ್ ಷಿಪ್ ಹೊಂದಿದ್ದೆವು. ಅಲ್ಲದೆ ನಮ್ಮ ನಡುವೆ ದೈಹಿಕ ಸಂಬಂಧ ಕೂಡ ಇತ್ತು. ಅಂತರ್ ಧರ್ಮೀಯರಾದರೂ ನಮ್ಮಿಬ್ಬರ ಪ್ರೇಮಕ್ಕೆ ನಮ್ಮ ಕುಟುಂಬಸ್ಥರು ಒಪ್ಪಿಗೆ ನೀಡಿದ್ದರು. ಆದರೆ, ಕೆಲ ದಿನಗಳಿಂದ ಕಿರಣ್ ವರ್ತನೆ ಬದಲಾಗಿದೆ. ಅಲ್ದೇ, ಸುಖಾಸುಮ್ಮನೆ ಕಿರುಕುಳ ನೀಡುತ್ತಿದ್ದಾನೆ. ಅಲ್ಲದೇ, ಸ್ನೇಹಿತರೊಟ್ಟಿಗೆ ಸೇರಿಕೊಂಡು ನನ್ನ ಮೇಲೆ ಹಲ್ಲೆ ಮಾಡಿದ್ದಾರೆ ಎಂದು ಯಾಸ್ಮಿನ್ ದೂರಿದ್ದಾರೆ. ಹಲ್ಲೆ ಸಂಬಂಧ ಯಾಸ್ಮಿನ್ ಈ ಹಿಂದೆ ಮುಂಬೈನ ಪೊಲೀಸ್ ಠಾಣೆಯೊಂದರಲ್ಲೂ ದೂರು ನೀಡಿದ್ದರು.