'ಕೆಜಿಎಫ್ ನಾಗರಿಕರು' ಎನ್ನುವ ಹೆಸರಿನಲ್ಲಿ ಚಿತ್ರದ ವಿರುದ್ಧ ಕರಪತ್ರ ಹೊರಡಿಸಲಾಗಿದ್ದು, ಇದರಲ್ಲಿ 'ಕೆಜಿಎಫ್ ಸಿನಿಮಾ ರೌಡಿಸಂ, ಕ್ರೂರ, ಕೊಲೆ-ದೊಂಬಿ ಬಗ್ಗೆ ಚಿತ್ರಿಸಿ ನಮ್ಮ ಊರಿನ ಮಾನ, ಮಾರ್ಯಾದೆ ಹಾಳು ಮಾಡಿದ್ದಾರೆ. ನಮ್ಮನ್ನು ಕೊಲೆಗಾರರು, ದೊಂಬಿಕೋರರು, ರಕ್ತ ಪಿಪಾಸುಗಳು, ಕ್ರೂರ ಸ್ವಭಾವದವರು, ಇಲ್ಲಿಯ ಜನರು ರೌಡಿಗಳು ಎಂದು ಚಿತ್ರದಲ್ಲಿ ಬಿಂಬಿಸಲಾಗಿದೆ. ಈ ಮೂಲಕ ನಗರಕ್ಕೆ ಹಾಗೂ ಇಲ್ಲಿಯ ಜನರಿಗೆ ಅಪಮಾನ ಮಾಡಲಾಗಿದೆ.