ಅಂತೆಯೇ ನೇರವಾಗಿ ಚಿತ್ರ ವಿತರಣೆ ಮಾಡುವುದರಿಂದ ಚಿತ್ರಮಂದಿರದ ಪ್ರದರ್ಶಕರು ಯಾವುದೇ ದಾಖಲೆ ಇಲ್ಲದೆ ಸಿನಿಮಾ ಪ್ರದರ್ಶನ ಮಾಡುತ್ತಾರೆ. ಇದರಿಂದ ಸರ್ಕಾರಕ್ಕೆ ಸೇರಬೇಕಾದ ಹಣ ಜನರಿಂದ ಬಂದರೂ ಅದು ಸರ್ಕಾರಕ್ಕೆ ತಲುಪುವುದಿಲ್ಲ. ಆ ಒಬ್ಬ ವಿತರಕ ಈಗ ಸಿನಿಮಾ ಮಾಡಲು ಹೋಗಿ ಹಣದ ರೂಪದಲ್ಲಿ ವ್ಯವಹಾರ ಮಾಡಿದ್ದು, ಇದು ಕೂಡ ದಾಳಿಗೆ ಕಾರಣ. ಏಕೆಂದರೆ ಸಂಭಾವನೆ ಪಡೆಯುವ ನಟರು ಚೆಕ್ ಮೂಲಕವೇ ಹಣ ಪಡೆಯಬೇಕು. ಆಗ ಅದು ತೆರಿಗೆ ವ್ಯಾಪ್ತಿಗೆ ಬರುತ್ತದೆ. ಆದರೆ ಕೆಲ ನಟರು ಕಾಣಿಕೆ, ವಿಲ್ಲಾ, ಆಸ್ತಿ ಪಡೆದಿದ್ದಾರೆ. ಆದರೆ ಇದು ತಪ್ಪಲ್ಲ, ನಟರು ತಾವು ಪಡೆದ ಕಾಣಿಕೆಯನ್ನು ಘೋಷಣೆ ಮಾಡಿದರೆ ಯಾವುದೇ ಸಮಸ್ಯೆ ಇರುವುದಿಲ್ಲ ಎಂದು ಪ್ರಶಾಂತ್ ತಿಳಿಸಿದರು.