ಸಿನಿಮಾ ಸೆಟ್ ನಲ್ಲಿ ಆಕ್ಷನ್ ಕಟ್ ಕೇಳುವುದೇ ರೋಮಾಂಚನ: ಶಿವಾಜಿ ಸುರತ್ಕಲ್ ನಟ ರಮೇಶ್ ಅರವಿಂದ್

ನಟ ರಮೇಶ್ ಅರವಿಂದ್ ಅಭಿನಯದ ಶಿವಾಜಿ ಸುರತ್ಕಲ್ ಸಿನಿಮಾದ ಎರಡನೇ ಭಾಗದ ಚಿತ್ರೀಕರಣ ನವೆಂಬರ್ 4ರಿಂದ ಚಿತ್ರೀಕರಣ ಶುರುವಾಗುವ ಸುದ್ದಿ ಹೊರಬಿದ್ದಿದೆ.
ರಮೇಶ್ ಅರವಿಂದ್
ರಮೇಶ್ ಅರವಿಂದ್

ಬೆಂಗಳೂರು: ನಟ ರಮೇಶ್ ಅರವಿಂದ್ ಅಭಿನಯದ ಶಿವಾಜಿ ಸುರತ್ಕಲ್ ಸಿನಿಮಾದ ಎರಡನೇ ಭಾಗದ ಚಿತ್ರೀಕರಣಕ್ಕೆ ಮುಹೂರ್ತ ನಿಗದಿಯಾಗಿದೆ. ನವಂಬರ್ 4ರಿಂದ ಚಿತ್ರೀಕರಣ ಶುರುವಾಗುವ ಸುದ್ದಿ ಹೊರಬಿದ್ದಿದೆ. ಈ ಸಿನಿಮಾವನ್ನೂ ಆಕಾಶ್ ಶ್ರೀವತ್ಸ ಅವರು ನಿರ್ದೇಶನ ಮಾಡುತ್ತಿದ್ದಾರೆ. 

ನಟ ರಮೇಶ್ ಅರವಿಂದ್ ಸಿನಿಮಾ ಚಿತ್ರೀಕರಣದಲ್ಲಿ ಪಾಲ್ಗೊಳ್ಳಲು ತೀವ್ರ ಉತ್ಸುಕರಾಗಿದ್ದಾರೆ. ಕೊರೊನಾ ಕಾರಣದಿಂದ ಕಳೆದ 2 ವರ್ಷಗಳಿಂದ ಯಾವುದೇ ಸಿನಿಮಾದ ಶೂಟಿಂಗ್ ನಲ್ಲಿಯೂ ಅವರು ಪಾಲ್ಗೊಂಡಿಲ್ಲ. ಹೀಗಾಗಿ ಶೂಟಿಂಗ್ ಸೆಟ್ ಗೆ ಮರಳಲು ತುಂಬಾ ಕಾತರನಾಗಿರುವುದಾಗಿ ರಮೇಶ್ ಹೇಳಿದ್ದಾರೆ. 

ಸಿನಿಮಾ ಶೂಟಿಂಗ್, ರಿಯಾಲಿಟಿ ಶೋ ಅಥವಾ ಬರವಣಿಗೆಯೇ ಇರಲಿ ಹೀಗೆ ಸದಾ ಒಂದಿಲ್ಲೊಂದು ಕೆಲಸಗಳಲ್ಲಿ ತೊಡಗಿಕೊಂಡು ಬ್ಯುಸಿಯಾಗಿರುತ್ತಿದ್ದ ರಮೇಶ್ ಕಳೆದ 2 ವರ್ಷಗಳನ್ನು ಅವ್ಯಾವುವುದೂ ಇಲ್ಲದೆ ಕಳೆದಿದ್ದೇ ಒಂದು ಅಚ್ಚರಿ. ಈ ಬಗ್ಗೆ ಕೇಳಿದಾಗ ಆಕ್ಷನ್ ಕಟ್ ಎನ್ನುವ ಎರಡು ಪದಗಳನ್ನು ನಿರ್ದೇಶಕರ ಬಾಯಿಂದ ಕೇಳುವುದು, ಕ್ಯಾಮೆರಾ ಎದುರು ನಿಲ್ಲುವುದು, ಮೇಕಪ್ ಹಾಕಿಕೊಳ್ಳುವುದು ಇವೆಲ್ಲವೂ ನನ್ನ ಜೀವನದ ಅವಿಭಾಜ್ಯ ಅಂಗ. ಡೈರೆಕ್ಟರ್ ಆಕ್ಷನ್ ಕಟ್ ಹೇಳಿದಾಗ ಆಗುವ ರೋಮಾಂಚನ ಎಲ್ಲವನ್ನೂ ಮಿಸ್ ಮಾಡಿಕೊಂಡಿದ್ದೆ ಎಂದರು ರಮೇಶ್.

ಶಿವಾಜಿ ಸುರತ್ಕಲ್- ಮಿಸ್ಟೀರಿಯಸ್ ಕೇಸ್ ಆಫ್ ಮಾಯಾವಿ ಸಿನಿಮಾವನ್ನು ರೇಖಾ ಕೆ.ಎನ್ ಮತ್ತು ಅನೂಪ್ ಗೌಡ ನಿರ್ಮಾಣಮಾಡುತ್ತಿದ್ದಾರೆ. ತಾರಾಗಣದಲ್ಲಿ ರಾಧಿಕಾ ನಾರಾಯಣ್, ರಘು ರಾಮನಕೊಪ್ಪ, ವಿದ್ಯಾ ಮೂರ್ತಿ ಮತ್ತಿತರರು ಇದ್ದಾರೆ. ಗುರುಪ್ರಸಾದ್ ಎಂ.ಜಿ ಸಿನಿಮೆಟೊಗ್ರಾಫಿ ಹೊಣೆ ಹೊತ್ತಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com