ಪುನೀತ್ ಸಾವಿಗೂ ಮುನ್ನ ಎಲ್ಲಿಗೆ ಹೋಗಿದ್ರೂ, ಏನೆಲ್ಲಾ ಆಯಿತು ಇಲ್ಲಿದೆ ಮಾಹಿತಿ

ಪುನೀತ್ ರಾಜ್ ಕುಮಾರ್ ಸಾವಿಗೂ ಮುನ್ನ ಎಲ್ಲಿಗೆ ಹೋಗಿದ್ರು, ಏನೆಲ್ಲಾ ಆಯಿತು ಎಂಬ ಬಗ್ಗೆ ಅವರ ಪ್ಯಾಮಿಲಿ ಡಾಕ್ಟರ್ ರಮಣರಾವ್ ಮಾಹಿತಿ ನೀಡಿದ್ದಾರೆ.
ಪುನೀತ್ ರಾಜ್ ಕುಮಾರ್
ಪುನೀತ್ ರಾಜ್ ಕುಮಾರ್
Updated on

ಬೆಂಗಳೂರು: ಪುನೀತ್ ರಾಜ್ ಕುಮಾರ್ ಸಾವಿಗೂ ಮುನ್ನ ಎಲ್ಲಿಗೆ ಹೋಗಿದ್ರು, ಏನೆಲ್ಲಾ ಆಯಿತು ಎಂಬ ಬಗ್ಗೆ ಅವರ ಪ್ಯಾಮಿಲಿ ಡಾಕ್ಟರ್ ರಮಣರಾವ್ ಮಾಹಿತಿ ನೀಡಿದ್ದಾರೆ.  ಅವರದ್ದು ಸಡನ್ ಡೆತ್ ಅಥವಾ ಕಾರ್ಡಿಯಾಕ್ ಆರೆಸ್ಟ್ ಎಂದು ಅವರ ಪ್ಯಾಮಿಲಿ ಡಾಕ್ಟರ್ ರಮಣರಾವ್ ಹೇಳಿದ್ದಾರೆ.

ಇದನ್ನೂ ಓದಿ: ಇಂದು ಸಂಜೆ 6 ಗಂಟೆಗೆ ನಟ ಪುನೀತ್ ರಾಜ್ ಕುಮಾರ್ ಅಂತ್ಯಕ್ರಿಯೆ ಸಾಧ್ಯತೆ?
ನಿನ್ನೆ ಬೆಳಗ್ಗೆ 11-15ಕ್ಕೆ ಕ್ಲಿನಿಕ್ ಗೆ ಬಂದಾಗ ಪುನೀತ್ ಬೆವರುತ್ತಿದ್ದರು. ಕೇಳಿದ್ರೆ ಇಲ್ಲಾ, ಜಿಮ್ ನಿಂದ ಬರುತ್ತಿರುವುದಾಗಿ ಹೇಳಿದ್ರು. ಆದಾಗ್ಯೂ, ಇಸಿಜಿ ಪರೀಕ್ಷೆ ಮಾಡಿದಾಗ ಸಮಸ್ಯೆ ಕಂಡುಬಂದಿತ್ತು. ಕೂಡಲೇ ಆಸ್ಪತ್ರೆಗೆ ದಾಖಲಾಗುವಂತೆ ಪುನೀತ್ ಗೆ ಸೂಚಿಸಿದ್ದೇ.ಐದೇ ನಿಮಿಷದಲ್ಲಿ ವಿಕ್ರಂ ಆಸ್ಪತ್ರೆಗೆ ದಾಖಲಾಗಿದ್ದಾಗಿ ಡಾಕ್ಟರ್  ತಿಳಿಸಿದ್ದಾರೆ.

ಇದನ್ನೂ ಓದಿ: ಪುನೀತ್ ರಾಜ್​ಕುಮಾರ್ ನಿಧನಕ್ಕೆ ಶೋಕ: ರಾಜ್ಯಾದ್ಯಂತ ಖಾಸಗಿ ಶಾಲೆಗಳಿಗೆ ರಜೆ ಘೋಷಣೆ
ಪುನೀತ್ ಅವರ ಹಠಾತ್ ನಿಧನಕ್ಕೆ ನಿರ್ದಿಷ್ಠ ಕಾರಣ ಗೊತ್ತಾಗುತ್ತಿಲ್ಲ. ಈ ಹಿಂದೆ ಅವರಿಗೆ ಯಾವುದೇ ಆರೋಗ್ಯ ಸಮಸ್ಯೆ ಇರಲಿಲ್ಲ. ಪ್ರತಿನಿತ್ಯ ವ್ಯಾಯಮ ಮಾಡುತ್ತಿದ್ದರು ಎಂದು ಡಾ. ರಮಣರಾವ್ ಹೇಳಿದ್ದಾರೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com