ವೇತನವನ್ನೇ ನಂಬಿಕೊಂಡು ಜೀವನ ನಡೆಸುತ್ತಿರುವ ಪೌರ ಕಾರ್ಮಿಕರು ಸಾಲಗಳ ಸುಳಿಗಳಲ್ಲಿ ಸಿಲುಕಿಕೊಳ್ಳುತ್ತಿದ್ದಾರೆ. ಸೂಕ್ತ ಸಮಯಕ್ಕೆ ಮನೆಗಳ ಬಾಡಿಗೆ ಕಟ್ಟದ ಕಾರಣ ಅದೆಷ್ಟೋ ಕಾರ್ಮಿಕರು ಬೀದಿಗೆ ಬಂದಿದ್ದಾರೆ. ಶುಲ್ಕ ಪಾವತಿಯಾಗದೆ ಶಾಲೆಯಿಂದ ಮಕ್ಕಳನ್ನು ಹೊರಹಾಕಲಾಗುತ್ತಿದೆ. ಪೌರ ಕಾರ್ಮಿಕರ ಪರಿಸ್ಥಿತಿ ಈ ರೀತಿ ಇದ್ದರೂ, ಬಿಬಿಎಂಪಿ ಮಾತ್ರ ಸಾರ್ವಜನಿಕರಿಗೆ ತಪ್ಪು ಮಾಹಿತಿಗಳನ್ನು ನೀಡುತ್ತಿದ್ದು, ವೇತನವನ್ನು ಸರಿಯಾಗಿ ನೀಡಲಾಗುತ್ತಿದೆ ಎಂದು ಹೇಳುತ್ತಿದೆ.