ಟೆಕ್ಕಿ ಅಜಿತಾಭ್ ಸಹೋದರಿಯಾಗಿರುವ ಪ್ರಜ್ಞಾ.ಎಸ್ ಟ್ವೀಟ್ ಮಾಡಿ, ನ್ಯಾಯಾಲಯ ವಿಚಾರಣೆಗಳಿಂದ ವಿಶ್ವಾಸಗಳು ಹೋಗಿವೆ. ಕಳೆದ ಜು.5 ರಂದು ನಡೆದ ವಿಚಾರಣೆ ಬಹಳ ಬೇಸರವನ್ನುಂಟು ಮಾಡಿದೆ. ತನಿಖೆಯಲ್ಲಿ ಯಾವುದೇ ಬೆಳವಣಿಗೆಗಳಿಲ್ಲದಿದ್ದರೂ. ಕುಟುಂಬಸ್ಥರು ವಿಚಾರಣೆಗೆ ಹಾಜರಾಗಬೇಕಿದೆ. ಪ್ರಸ್ತುತ ಅಜಿತಾಭ್ ಗಾಗಿ ಆನ್'ಲೈನ್ ಅಭಿಯಾನ ಆರಂಭವಾಗಿದ್ದು, ಸಂಬಂಧ ಅಧಿಕಾರಿಗಳಿಗೆ ಈ ಮೂಲಕ ವಿಷಯವನ್ನು ತಲುಪಿಸಲಾಗುತ್ತದೆ. ಪ್ರಕರಣವನ್ನು ಸಿಬಿಐ ತನಿಖೆಗೆ ವಹಿಸುವಂತೆ ಒತ್ತಾಯಿಸುತ್ತೇವೆಂದು ಹೇಳಿದ್ದಾರೆ.