ಡಾ ಕೆ ಶಿವರಾಮ ಕಾರಂತ್ ಲೇಔಟ್‌: ಬಿಡಿಎಯಿಂದ ಮೂರನೇ ಸುತ್ತಿನ ಟೆಂಡರ್‌

ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರದ ಮುಂಬರುವ ಡಾ.ಕೆ.ಶಿವರಾಮ ಕಾರಂತ್ ಲೇಔಟ್‌ನಲ್ಲಿ ನಾಗರಿಕ ಸೌಲಭ್ಯಗಳನ್ನು ರಚಿಸಲು ಒಂಬತ್ತು ಪ್ಯಾಕೇಜ್‌ಗಳ ಪೈಕಿ ಐದು ಪ್ಯಾಕೇಜ್‌ಗಳು ಶೀಘ್ರದಲ್ಲೇ ಮೂರನೇ ಸುತ್ತಿನ ಟೆಂಡರ್‌ ಕರೆಯಲಿದ್ದು, ಈ ಐದು ಪ್ಯಾಕೇಜ್‌ಗಳ ಒಟ್ಟು ವೆಚ್ಚ ಸುಮಾರು 1233 ಕೋಟಿ ರೂ ಎಂದು ಅಂದಾಜಿಸಲಾಗಿದೆ.
ಬಿಡಿಎ
ಬಿಡಿಎ
Updated on

ಬೆಂಗಳೂರು: ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರದ ಮುಂಬರುವ ಡಾ.ಕೆ.ಶಿವರಾಮ ಕಾರಂತ್ ಲೇಔಟ್‌ನಲ್ಲಿ ನಾಗರಿಕ ಸೌಲಭ್ಯಗಳನ್ನು ರಚಿಸಲು ಒಂಬತ್ತು ಪ್ಯಾಕೇಜ್‌ಗಳ ಪೈಕಿ ಐದು ಪ್ಯಾಕೇಜ್‌ಗಳು ಶೀಘ್ರದಲ್ಲೇ ಮೂರನೇ ಸುತ್ತಿನ ಟೆಂಡರ್‌ ಕರೆಯಲಿದ್ದು, ಈ ಐದು ಪ್ಯಾಕೇಜ್‌ಗಳ ಒಟ್ಟು ವೆಚ್ಚ ಸುಮಾರು 1233 ಕೋಟಿ ರೂ ಎಂದು ಅಂದಾಜಿಸಲಾಗಿದೆ.

ಏಕ ಬಿಡ್‌ದಾರರನ್ನು ಮಾತ್ರ ತಾಂತ್ರಿಕ ಸುತ್ತಿನ ಟೆಂಡರ್ ಪ್ರಕ್ರಿಯೆಯಿಂದ ಕಡಿತಗೊಳಿಸಲಾಗಿದ್ದು, ಅಸಾಧಾರಣ ಸಂದರ್ಭಗಳಲ್ಲಿ ಮಾತ್ರ ಏಕ ಬಿಡ್‌ಗಳನ್ನು ಸ್ವೀಕರಿಸಬಹುದು. ಆದ್ದರಿಂದ ಈ ಐದು ಪ್ಯಾಕೇಜ್‌ಗಳಾದ ಪ್ಯಾಕೇಜ್, 1, 3, 4, 5 ಮತ್ತು 6 ಅನ್ನು ಈಗ ಮರುಟೆಂಡರ್ ಮಾಡಲಾಗುತ್ತದೆ" ಎಂದು ಬಿಡಿಎ ಉನ್ನತ ಮೂಲಗಳು ತಿಳಿಸಿವೆ.

ಲೇಔಟ್‌ನ ಒಂಬತ್ತು ವಲಯಗಳನ್ನು ಪ್ರತ್ಯೇಕವಾಗಿ ಒಳಗೊಂಡಿರುವ ಒಂಬತ್ತು ಪ್ಯಾಕೇಜ್‌ಗಳನ್ನು ಅಕ್ಟೋಬರ್ 11 ರಂದು 2,475 ಕೋಟಿ ರೂಪಾಯಿಗಳಿಗೆ ಸಂಪೂರ್ಣವಾಗಿ ಟೆಂಡರ್ ಮಾಡಲಾಗಿದೆ. ಇವುಗಳು ಮರು ಟೆಂಡರ್ ಆಗುವ ಪ್ಯಾಕೇಜ್‌ಗಳ ಅಂದಾಜು ವೆಚ್ಚಗಳು: ರೂ 267.77 ಕೋಟಿ (P1); ರೂ 224.79 ಕೋಟಿ (P3); Rs 212.16 ಕೋಟಿ (P4), Rs 273.62 ಕೋಟಿ (P5) ಮತ್ತು Rs 254.65 ಕೋಟಿ (P6) ಎಂದು ಮಾಹಿತಿ ನೀಡಿದೆ.

ನಿವೇಶನಗಳ ರಚನೆ, ರಸ್ತೆಗಳ ನಿರ್ಮಾಣ, ರಸ್ತೆ ಬದಿ ಚರಂಡಿ, ಅಡ್ಡ ಚರಂಡಿ ಕಾಮಗಾರಿ, ಮಳೆನೀರು ಚರಂಡಿ, ಮಳೆ ನೀರು ಕೊಯ್ಲು, ನೀರು ಪೂರೈಕೆ ಸೇರಿದಂತೆ ರಕ್ಷಣೆ ಕಾಮಗಾರಿ, ಯುಜಿಡಿ ಹಾಗೂ ವಿದ್ಯುತ್ ಕಾಮಗಾರಿಗಳನ್ನು ಪ್ರತಿ ಪ್ಯಾಕೇಜ್‌ನಲ್ಲಿ ಒಳಗೊಂಡಿದೆ. ಮೂಲದಲ್ಲಿ ಆರಂಭಿಕ ಪ್ರಕ್ರಿಯೆಯಲ್ಲಿ ಒಂದಕ್ಕಿಂತ ಹೆಚ್ಚು ಬಿಡ್‌ಗಳು ಇದ್ದವು. ಒಂದು ಪ್ಯಾಕೇಜ್‌ನಲ್ಲಿ ಎರಡು ಮತ್ತು ಇನ್ನೊಂದು ಮೂರು ಬಿಡ್‌ಗಳನ್ನು ಹೊಂದಿತ್ತು. ಆದರೆ, ಅಗತ್ಯವಾದ ತಾಂತ್ರಿಕ ದಾಖಲೆಗಳನ್ನು ಸಲ್ಲಿಸದ ಕಾರಣ, ಅವರ ಬಿಡ್‌ಗಳನ್ನು ತಾಂತ್ರಿಕವಾಗಿ ತಿರಸ್ಕರಿಸಲಾಗಿದೆ. ಆದ್ದರಿಂದ, ನಾವು ಈ ವಲಯಗಳಿಗೆ ಮೂರನೇ ಸುತ್ತಿಗೆ ಬಿಡ್ ಮಾಡಲಾಗುತ್ತಿದೆ ಎಂದು ಬಿಡಿಎ ಹೇಳಿದೆ.

"ಇತರ ನಾಲ್ಕು ಪ್ಯಾಕೇಜ್‌ಗಳ ವಿಷಯದಲ್ಲಿ, ತಾಂತ್ರಿಕ ಸುತ್ತನ್ನು ತೆರವುಗೊಳಿಸಿದ ಸಂಸ್ಥೆಗಳು ಮುಂದಿನ ಹಣಕಾಸು ಸುತ್ತನ್ನು ತೆರವುಗೊಳಿಸಬೇಕಾಗುತ್ತದೆ. ಪ್ರಕ್ರಿಯೆಯು ಮುಂದುವರೆದಿದೆ ಮತ್ತು ಒಂದು ವಾರದಲ್ಲಿ ಪೂರ್ಣಗೊಳ್ಳಲಿದೆ. ಈ ವರ್ಷದ ಮಾರ್ಚ್ 22 ರಂದು ಮೊದಲ ಸುತ್ತಿನ ಟೆಂಡರ್ ನಡೆಸಲಾಗಿದ್ದು, ಇದಕ್ಕೆ ಕಳಪೆ ಪ್ರತಿಕ್ರಿಯೆ ವ್ಯಕ್ತವಾಗಿದೆ. ಅಕ್ಟೋಬರ್ 11 ರಂದು ಎರಡನೇ ಟೆಂಡರ್ ಕರೆಯಲಾಗಿದ್ದು, ಈಗ ಮೂರನೇ ಟೆಂಡರ್ ಅನ್ನು ಅನುಸರಿಸಲು ನಿರ್ಧರಿಸಲಾಗಿದೆ ಎಂದು ಬಿಡಿಎ ಹೇಳಿದೆ. 

ಸೆಪ್ಟೆಂಬರ್ ಅಂತ್ಯದೊಳಗೆ ಟೆಂಡರ್ ಪ್ರಕ್ರಿಯೆ ಪೂರ್ಣಗೊಳಿಸಲು ಸುಪ್ರೀಂ ಕೋರ್ಟ್ ಆರಂಭದಲ್ಲಿ ಆದೇಶ ನೀಡಿತ್ತು ಮತ್ತು ಇದನ್ನು ಪೂರೈಸಲು ಸಾಧ್ಯವಾಗಿರಲಿಲ್ಲ. ಹೀಗಾಗಿ ಬಿಡಿಎ ವಿಸ್ತರಣೆಯನ್ನು ಕೋರಿತ್ತು. ಲೇಔಟ್ ರಚನೆಯ ಮೇಲ್ವಿಚಾರಣೆಯನ್ನು ನ್ಯಾಯಮೂರ್ತಿ ಎವಿ ಚಂದ್ರಶೇಖರ್ ಸಮಿತಿಗೆ ಕೇಳಿದೆ.

5337 ಕೋಟಿ ರೂಪಾಯಿಗಳ ಪರಿಷ್ಕೃತ ವೆಚ್ಚದಲ್ಲಿ ಲೇಔಟ್ ರಚನೆಗೆ ಈ ವರ್ಷ ಜುಲೈನಲ್ಲಿ ರಾಜ್ಯ ಸರ್ಕಾರ ಅನುಮೋದನೆ ನೀಡಿದೆ. ಈ ಲೇಔಟ್ ಬಿಡಿಎಯ ಎರಡನೇ ದೊಡ್ಡ ಯೋಜನೆಯಾಗಿದೆ ಮತ್ತು 3546 ಎಕರೆ ಮತ್ತು 12 ಗುಂಟೆ ಜಾಗದಲ್ಲಿ 28000 ಸೈಟ್‌ಗಳನ್ನು ಸಿದ್ಧಪಡಿಸಲಾಗುವುದು. ಇದು ಉತ್ತರ ಬೆಂಗಳೂರಿನ ದೊಡ್ಡಬಳ್ಳಾಪುರ ಮತ್ತು ಹೆಸರಘಟ್ಟ ನಡುವಿನ 17 ಹಳ್ಳಿಗಳಲ್ಲಿ ವಿಸ್ತರಿಸುತ್ತದೆ ಎನ್ನಲಾಗಿದೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com