ಕೊಚ್ಚಿ: ಅಪಘಾತಕ್ಕೀಡಾಗಿದ್ದ ಇಡುಕ್ಕಿ ನಗರದ 46 ವರ್ಷದ ವ್ಯಕ್ತಿಯನ್ನು ಆಸ್ಪತ್ರೆಗೆ ತರುವಾಗಲೇ ಮೆದುಳು ನಿಷ್ಕ್ರಿಯಗೊಂಡಿದ್ದಾಗಿ ವೈದ್ಯರು ಹೇಳಿದ್ದರು. ಭಾರ ಹೊರುವ ಕೂಲಿ ಕೆಲಸ ಮಾಡಿಕೊಂಡಿದ್ದ ಪಿ.ಎಂ. ಸುರೇಶ್ ಆ ದುರ್ದೈವಿ.
ವೈದ್ಯರ ಯಾವುದೇ ಚಿಕಿತ್ಸೆಗೂ ಸುರೇಶ್ ಸ್ಪಂದಿಸುತ್ತಿರಲಿಲ್ಲ. ಅವರನು ಉಳಿಸಿಕೊಳ್ಳುವುದು ಅಸಾಧ್ಯ ಎನ್ನುವುದನ್ನು ಅರಿತ ಸುರೇಶ್ ಕುಟುಂಬ ವರ್ಗ ಆ ಕಠಿಣ ಸಮಯದಲ್ಲೂ ಧೃತಿಗೆಡದೆ ಸುರೇಶ್ ಅಂಗಗಳನ್ನು ದಾನ ಮಾಡಲು ಮುಂದಾದರು.
ಅಂಗ ದಾನ ಯೋಜನೆ 'ಮೃತ ಸಂಜೀವನಿ' ಅಡಿ ಸುರೇಶ್ ಅವರ ಕಣ್ಣುಗಳು, ಕಿಡ್ನಿ, ಯಕೃತ್ತು ಭಾಗಗಳನ್ನು ಅಗತ್ಯ ಇರುವ ರೋಗಿಗಳಿಗೆ ನೀಡಿ ಅವರಿಗೆ ಮರುಜನ್ಮ ನೀಡಲಾಗಿದೆ.
ಸುರೇಶ್ ಕುಟುಂಬದ ಕಾರ್ಯವನ್ನು ಕೇರಳ ಆರೋಗ್ಯ ಸಚಿವೆ ವೀಣಾ ಜಾರ್ಜ್ ಶ್ಲಾಘಿಸಿದ್ದಾರೆ. ಸುರೇಶ್ ಅವರ ಅಂಗಗಳನ್ನು ಕಸಿ ಮಾಡಲ್ಪಟ್ಟ ರೋಗಿಗಳು ಆರೋಗ್ಯವಾಗಿದ್ದಾರೆ ಎಂದು ತಿಳಿದುಬಂದಿದೆ.
ಕುಟುಂಬ ಸದಸ್ಯನ ಅಗಲಿಕೆ ದುಃಖವನ್ನು ಭರಿಸುವ ಸಮಯದಲ್ಲಿ ಬೇರೊಬ್ಬರ ಜೀವ ಉಳಿಸುವ ಕಾರ್ಯಕ್ಕೆ ಮುಂದಾದ ಸುರೇಶ್ ಕುಟುಂಬಕ್ಕೆ ಮೆಚ್ಚುಗೆಯ ಮಹಾಪೂರವೇ ಹರಿದುಬಂದಿದೆ.
14 ವರ್ಷಗಳ ಹಿಂದೆ ಕಾಣೆಯಾದ ಹುಡುಗಿ ಮನೆಗೆ ವಾಪಸ್: ಜಾರ್ಖಂಡ್ ಸರ್ಕಾರದ ಕಾರ್ಯಕ್ಕೆ ಶ್ಲಾಘನೆ
ಭತ್ತದ ಗದ್ದೆಯಿಂದ 'ಗ್ಲೋಬಲ್ ಸಲ್ಯೂಷನ್ಸ್' ವರೆಗೆ ಕೇರಳ ಯುವಕನ ಸಾಧನೆಯ ಹಾದಿ!
ಮಳೆ ತರುವ ದೇವರು 'ಜೋಕುಮಾರಸ್ವಾಮಿ'
ಬದುಕು ಕಟ್ಟಿಕೊಳ್ಳುವ ಮಹಿಳೆಯರಿಗೆ ಸ್ಫೂರ್ತಿ: ಶೂನ್ಯದಿಂದ ಸ್ವಾವಲಂಬನೆಯ ಕಡೆ ಸಾಗಿದ ಕೊಡಗು ಮಹಿಳೆಯರ ಯಶೋಗಾಥೆ!
ಐಎಎಸ್ ಅಧಿಕಾರಿಗಳ ಸಂಘದಿಂದ ಟಾಪರ್ ಸೇರಿದಂತೆ 25 ಯಶಸ್ವಿ ಯುಪಿಎಸ್ಸಿ ಅಭ್ಯರ್ಥಿಗಳಿಗೆ ಮಾರ್ಗದರ್ಶನ!
Advertisement