ಬೆಂಗಳೂರಿನಲ್ಲಿ ಶನಿವಾರ ನಡೆದ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಜಯಭೇರಿ ಬಾರಿಸಿದ ಹಿನ್ನೆಲೆಯಲ್ಲಿ ಜನಪದ ಕಲಾವಿದರು ಕಾಂಗ್ರೆಸ್ ಸಂಭ್ರಮಾಚರಣೆಯಲ್ಲಿ ಪಾಲ್ಗೊಂಡಿದ್ದರು. (ಫೋಟೋ | ಪಿಟಿಐ) 
ವಿಶ್ಲೇಷಣೆ

ಎರಡು ದಶಕಗಳ ನಂತರ ಚಿಕ್ಕಮಗಳೂರು, ಕೊಡಗಿನಲ್ಲಿ ಕ್ಲೀನ್ ಸ್ವೀಪ್; ಕಳೆದುಕೊಂಡಿದ್ದ ವೈಭವವನ್ನು ಮತ್ತೆ ಗಳಿಸಿದ ಕಾಂಗ್ರೆಸ್!

ಸುಮಾರು ಎರಡು ದಶಕಗಳ ನಂತರ ಚಿಕ್ಕಮಗಳೂರು ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಕ್ಲೀನ್ ಸ್ವೀಪ್ ಮಾಡಿ ಹಳೆಯ ವೈಭವವನ್ನು ಮರಳಿ ಪಡೆದಿದೆ. ಇನ್ನೊಂದೆಡೆ, ಕೊಡಗು ಜಿಲ್ಲೆಯಲ್ಲಿ ಬಿಜೆಪಿಯ ಎರಡು ದಶಕಗಳ ಹಿಡಿತವನ್ನು ಕಾಂಗ್ರೆಸ್ ಛಿದ್ರಗೊಳಿಸಿದೆ.

ಚಿಕ್ಕಮಗಳೂರು: ಸುಮಾರು ಎರಡು ದಶಕಗಳ ನಂತರ ಚಿಕ್ಕಮಗಳೂರು ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಕ್ಲೀನ್ ಸ್ವೀಪ್ ಮಾಡಿ ಹಳೆಯ ವೈಭವವನ್ನು ಮರಳಿ ಪಡೆದಿದೆ.

2018 ರ ವಿಧಾನಸಭಾ ಚುನಾವಣೆಯ ನಂತರ ಬಿಜೆಪಿಯು ಚಿಕ್ಕಮಗಳೂರಿನಿಂದ ಸಿಟಿ ರವಿ, ಮೂಡಿಗೆರೆಯಿಂದ ಎಂಪಿ ಕುಮಾರಸ್ವಾಮಿ, ಕಡೂರಿನಿಂದ ಬೆಳ್ಳಿ ಪ್ರಕಾಶ್ ಮತ್ತು ತರೀಕೆರೆಯಿಂದ ಡಿಎಸ್ ಸುರೇಶ್ ಎಂಬ ನಾಲ್ಕು ಶಾಸಕರನ್ನು ಹೊಂದಿತ್ತು. 1989 ರಿಂದ 1999 ರವರೆಗೆ ಸಿಆರ್ ಸಗೀರ್ ಅಹಮದ್ ಚಿಕ್ಕಮಗಳೂರಿನಿಂದ ಸತತವಾಗಿ ಗೆದ್ದು ಎರಡು ಬಾರಿ ಸಚಿವರಾಗಿದ್ದರು. 1999 ರಲ್ಲಿ, ಸಿಆರ್ ಸಗೀರ್ ಅಹ್ಮದ್, ಡಿಬಿ ಚಂದ್ರೇಗೌಡ ಮತ್ತು ಮೋಟಮ್ಮ ಅವರು ಎಸ್‌ಎಂ ಕೃಷ್ಣ ಸಚಿವ ಸಂಪುಟದಲ್ಲಿ ಸಚಿವರಾಗಿದ್ದರು.

ಮಾಜಿ ಪ್ರಧಾನಿ ಇಂದಿರಾಗಾಂಧಿ 1979ರಲ್ಲಿ ಚಿಕ್ಕಮಗಳೂರಿನಿಂದ ಸ್ಪರ್ಧಿಸಿ ಗೆದ್ದ ನಂತರ ಜಿಲ್ಲೆ ಕಾಂಗ್ರೆಸ್‌ನ ಪ್ರಬಲ ಭದ್ರಕೋಟೆಯಾಗಿ ಮಾರ್ಪಟ್ಟು ಇಂದಿರಾಗಾಂಧಿ ಅವರಿಗೆ ರಾಜಕೀಯ ಪುನರ್ಜನ್ಮ ನೀಡಿತು. ಕಾಂಗ್ರೆಸ್, ಜೆಡಿಎಸ್ ಹಾಗೂ ಸ್ವತಂತ್ರ ಅಭ್ಯರ್ಥಿಗಳನ್ನು ಆಯ್ಕೆ ಮಾಡುತ್ತಿದ್ದ ಜಿಲ್ಲೆಯಲ್ಲಿ 2004 ರಿಂದ ಬಿಜೆಪಿ ಹಿಡಿತ ಸಾಧಿಸಿತು. ದತ್ತಪೀಠ ವಿಮೋಚನಾ ಆಂದೋಲನ, ದತ್ತಮಾಲಾ ಅಭಿಯಾನ, ಶೋಭಾ ಯಾತ್ರೆ, ಧರ್ಮ ಸಂಸದ್ ಚಿಕ್ಕಮಗಳೂರು, ಮೂಡಿಗೆರೆ, ಕಾರ್ಕಳದಲ್ಲಿ ಬಿಜೆಪಿ ಮತಗಳನ್ನು ಹೆಚ್ಚಿಸಿಕೊಳ್ಳಲು ಸಹಕಾರಿಯಾಯಿತು.

ಆದರೆ, 2023ರ ವಿಧಾನಸಭಾ ಚುನಾವಣೆ ಬಿಜೆಪಿಗೆ ನೀರಸವಾಗಿ ಪರಿಣಮಿಸಿದೆ. ಬಿಜೆಪಿ ಅಭ್ಯರ್ಥಿಗಳಾದ ಸಿಟಿ ರವಿ ಮತ್ತು ಬೆಳ್ಳಿ ಪ್ರಕಾಶ್ ಗೆಲುವಿನ ವಿಶ್ವಾಸದಲ್ಲಿದ್ದರು. ಒಂದು ಲಕ್ಷಕ್ಕೂ ಅಧಿಕ ಮತಗಳನ್ನು ಗಳಿಸಿ 35 ಸಾವಿರ ಮತಗಳ ಅಂತದಿಂದ ಗೆಲ್ಲುತ್ತೇನೆ ಎಂದು ರವಿ ಶುಕ್ರವಾರ ಮಾಧ್ಯಮಗಳಿಗೆ ಹೇಳಿಕೆ ನೀಡಿದ್ದರು. ಆದರೆ, ಕಾಂಗ್ರೆಸ್ ಅಲೆಯ ಎದುರು ಜಿಲ್ಲೆಯಲ್ಲಿ ಬಿಜೆಪಿಯ ಐವರು ಬಿಜೆಪಿ ಅಭ್ಯರ್ಥಿಗಳು ನೆಲಕಚ್ಚಿದ್ದಾರೆ.

ಬಿಜೆಪಿಯ ಹಾಲಿ ಶಾಸಕರಾಗಿದ್ದ ಸಿಟಿ ರವಿ, ಬೆಳ್ಳಿ ಪ್ರಕಾಶ್ ಮತ್ತು ಡಿಎಸ್ ಸುರೇಶ್ ಅವರು ಕ್ರಮವಾಗಿ ಎಚ್‌ಡಿ ತಮ್ಮಯ್ಯ, ಕೆಎಸ್ ಆನಂದ್ ಮತ್ತು ಮಾಜಿ ಶಾಸಕ ಜಿಎಚ್ ಶ್ರೀನಿವಾಸ್ ವಿರುದ್ಧ ಸೋಲು ಕಂಡಿದ್ದಾರೆ. ಬಿಜೆಪಿ ಶಾಸಕ ಎಂಪಿ ಕುಮಾರಸ್ವಾಮಿ ಅವರಿಗೆ ಟಿಕೆಟ್ ನಿರಾಕರಿಸಿದ್ದರಿಂದ ಅವರು ಪಕ್ಷ ತೊರೆದು ಜೆಡಿಎಸ್ ಸೇರಿದ್ದಾರೆ. ಅವರು ಜೆಡಿಎಸ್ ಟಿಕೆಟ್‌ನಲ್ಲಿ ಸ್ಪರ್ಧಿಸಿದ್ದರೂ ಮೂರನೇ ಸ್ಥಾನ ಪಡೆದಿದ್ದಾರೆ. ಬಿಜೆಪಿ ಅಭ್ಯರ್ಥಿ ದೀಪಕ್ ದೊಡ್ಡಯ್ಯ ಅವರು ಕಾಂಗ್ರೆಸ್ ಅಭ್ಯರ್ಥಿ ಮಾಜಿ ಶಾಸಕಿ ಮೋಟಮ್ಮ ಅವರ ಪುತ್ರಿ ನಯನಾ ವಿರುದ್ಧ ಸೋತಿದ್ದಾರೆ. ತರೀಕೆರೆಯಲ್ಲಿ ಬಿಜೆಪಿ ಅಭ್ಯರ್ಥಿ ಡಿಎಸ್ ಸುರೇಶ್ ಅವರನ್ನು ಮಾಜಿ ಶಾಸಕ ಜಿಎಚ್ ಶ್ರೀನಿವಾಸ್ ಸೋಲಿಸಿದರು. ಆದರೆ, ಕಾಂಗ್ರೆಸ್ ಬಂಡಾಯ ಎಚ್ ಎಂ ಗೋಪಕೃಷ್ಣ ಪಕ್ಷದ ಮತಗಳನ್ನು ವಿಭಜಿಸಿದರು.

ಕಳೆದ ಬಾರಿ ಸೋತಿದ್ದ ಕಾಂಗ್ರೆಸ್ ಅಭ್ಯರ್ಥಿ ಕೆಎಸ್ ಆನಂದ್ ಬೆಳ್ಳಿ ಪ್ರಕಾಶ್ ಅವರಿಂದ ಅಧಿಕಾರ ಕಸಿದುಕೊಂಡಿದ್ದಾರೆ. ಶೃಂಗೇರಿಯಲ್ಲಿ ನೆಕ್‌ ಟು ನೆಕ್‌ ಫೈಟ್‌ ಇದ್ದರೂ, ಅಂತಿಮವಾಗಿ ಕಾಂಗ್ರೆಸ್‌ ಅಭ್ಯರ್ಥಿ ಟಿಡಿ ರಾಜೇಗೌಡ ಗೆಲುವು ಸಾಧಿಸಿದ್ದಾರೆ. ರಾಜೇಗೌಡ ಅವರು ಡಿಎನ್ ಜೀವರಾಜ್ ಅವರನ್ನು 153 ಮತಗಳಿಂದ ಸೋಲಿಸಿದ್ದಾರೆ.

ಬಿಜೆಪಿಯ ಕೊಡಗು ಕೋಟೆಯನ್ನು ಛಿದ್ರಗೊಳಿಸಿದ ಕಾಂಗ್ರೆಸ್

ಮಡಿಕೇರಿ: ಕೊಡಗು ಜಿಲ್ಲೆಯಲ್ಲಿ ಬಿಜೆಪಿಯ ಎರಡು ದಶಕಗಳ ಹಿಡಿತವನ್ನು ಕಾಂಗ್ರೆಸ್ ಛಿದ್ರಗೊಳಿಸಿದೆ. ಒಂದು ಕಾಲದಲ್ಲಿ ಬಿಜೆಪಿಯ ಭದ್ರಕೋಟೆಯಾಗಿದ್ದ ಕೊಡಗು, ಮಡಿಕೇರಿ ಮತ್ತು ವಿರಾಜಪೇಟೆ ಕ್ಷೇತ್ರಗಳಲ್ಲಿ ಕಾಂಗ್ರೆಸ್ಸಿನ ತಾಜಾ ಮುಖಗಳಿಗೆ ಈ ಬಾರಿ ಮತದಾರ ಆಸರೆಯಾಗಿದ್ದಾನೆ. ಇವರು ಸುಮಾರು 4,000ಕ್ಕೂ ಹೆಚ್ಚು ಮತಗಳ ಅಂತರದಿಂದ ಗೆದ್ದಿದ್ದಾರೆ. ಮಡಿಕೇರಿಯಲ್ಲಿ ಮೊದಲ ಸುತ್ತಿನ ಮತ ಎಣಿಕೆಯಿಂದಲೇ ಕಾಂಗ್ರೆಸ್ ಅಭ್ಯರ್ಥಿ ಡಾ.ಮಂತರ್ ಗೌಡ ಮುನ್ನಡೆ ಸಾಧಿಸಿದ್ದರು.

ಕಾಂಗ್ರೆಸ್ ಅಭ್ಯರ್ಥಿ ಎಎಸ್ ಪೊನ್ನಣ್ಣ ಮಾತನಾಡಿ, 'ಜನರು ಬದಲಾವಣೆ ಬಯಸಿದ್ದರು ಮತ್ತು ಕಾಂಗ್ರೆಸ್ ಅದನ್ನು ಒದಗಿಸಿದೆ. ಕೊಡಗಿನಲ್ಲಿ ಬಿಜೆಪಿ ಪ್ರಚಾರದ ವೇಳೆ ಬಳಸಿದ ಭಾಷೆ ಸ್ವೀಕಾರಾರ್ಹವಲ್ಲ. ಆದರೆ, ಬಿಜೆಪಿ ನಮ್ಮ ಕುಟುಂಬಗಳಿಗೆ ಮಾನಹಾನಿ ಮಾಡಿದೆ ಮತ್ತು ಅತ್ಯಂತ ಕೆಳಮಟ್ಟಕ್ಕೆ ಇಳಿದಿದೆ' ಎಂದು ಆರೋಪಿಸಿದರು.
 

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ನನ್ನ-ಕಾಂಗ್ರೆಸ್ ಮಧ್ಯೆ ಭಕ್ತ- ಭಗವಂತನ ಸಂಬಂಧ ಇದೆ, RSS ಗೀತೆ ಹಾಡಿದ್ದಕ್ಕೆ ನೋವಾಗಿದ್ದರೆ ಕ್ಷಮೆ ಕೇಳುತ್ತೇನೆ: ಡಿಕೆ ಶಿವಕುಮಾರ್

ಭಾರತದ ಮೇಲೆ ಶೇ. 50 ರಷ್ಟು ಸುಂಕ ನಾಳೆ ಜಾರಿ, ಅಮೆರಿಕ ಕರಡು ಸೂಚನೆ; ಔಷಧ, ಎಲೆಕ್ಟ್ರಾನಿಕ್ಸ್‌ ವಸ್ತುಗಳಿಗೆ ವಿನಾಯಿತಿ

ಪದಕ ಹಾಕಿಸಿಕೊಳ್ಳಲು ನಿರಾಕರಿಸಿದ DMK ಸಚಿವನ ಪುತ್ರ, BJP ನಾಯಕ Annamalai ಹೇಳಿದ್ದೇನು? Video

ಧರ್ಮಸ್ಥಳ ಬುರುಡೆ ಕೇಸು: ಮಹೇಶ್ ತಿಮರೋಡಿ ನಿವಾಸದಲ್ಲಿ ಆರೋಪಿ ಚಿನ್ನಯ್ಯನ ಮೊಬೈಲ್ ಪತ್ತೆ

Gaza Hospital Strike: ಹಮಾಸ್ ಸೋಲಿಸುವುದಷ್ಟೇ ನಮ್ಮ ಗುರಿ, ನಾಗರೀಕರನ್ನು ಗೌರವಿಸುತ್ತೇವೆ; ದಾಳಿ ಕುರಿತು ಮೊದಲ ಬಾರಿಗೆ ಇಸ್ರೇಲ್ ವಿಷಾದ

SCROLL FOR NEXT