ಅಕ್ಷಯ್ ಕುಮಾರ್, ಕತ್ರೀನಾ ಕೈಫ್ 
ಬಾಲಿವುಡ್

'ಓ ಮೈ ಗಾಡ್' ಅಕ್ಷಯ್ ಕುಮಾರ್ ಗೆ 'ಶೀಲಾ ಕಿ ಜವಾನಿ' ಕತ್ರೀನಾ ಕೈಫ್ ಕಪಾಳ ಮೋಕ್ಷ ಮಾಡಿದ್ದೇಕೆ?

ಇಬ್ಬರೂ ಕಲಾವಿದರು ಜೊತೆಯಾಗಿ 6 ಕ್ಕೂ ಹೆಚ್ಚು ಹಿಟ್ ಸಿನಿಮಾಗಳನ್ನು ನೀಡಿದವರು. ಹೀಗಾಗಿ ರೊಮ್ಯಾನ್ಸ್ ಆಗಲಿ, ಕಪಾಳಕ್ಕೆ ಹೊಡೆಯುವ ದೃಶ್ಯವೇ ಆಗಲಿ ಯಾವುದಕ್ಕೂ ರೀಟೇಕ್ ಅವಶ್ಯಕತೆ ಬೀಳದು ಎಂದ ಕತ್ರೀನಾ.

ಮುಂಬೈ: ನಟಿ ತೆರೆ ಮೇಲೆ ರೊಮ್ಯಾನ್ಸ್ ಮಾಡುವ ನಟನ ಕಪಾಳಕ್ಕೆ ಯಾಕೆ ಹೊಡೆಯುತ್ತಾಳೆ ಎನ್ನುವುದಕ್ಕೆ ನೂರಾರು ಕಾರಣಗಳನ್ನು ಕೊಟ್ಟುಕೊಳ್ಳುವುದು ಸುಲಭ. ಆದರೆ ಅಕ್ಷಯ್ ಕುಮಾರ್ ಗೆ ಬಾಲಿವುಡ್ ನ ಹಾಟೆಸ್ಟ್ ಬೆಡಗಿ ಕತ್ರೀನಾ ಕೈಫ್ ಕಪಾಳಕ್ಕೆ ಹೊಡೆಯುವುದಕ್ಕೆ ಕಾರಣ ಬೇರೇನೂ ಅಲ್ಲ. ಸಿನಿಮಾ ಶೂಟಿಂಗ್. 

ಅವರಿಬ್ಬರೂ ಸೂರ್ಯವಂಶಿ ಸಿನಿಮಾದಲ್ಲಿ ಜೊತೆಯಾಗಿ ನಟಿಸಿದ್ದಾರೆ. ಅದೇ ಚಿತ್ರದ ಪ್ರಚಾರ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದ ಸಂದರ್ಭ ಅವರಿಬ್ಬರಿಗೂ ಒಂದು ಪ್ರಶ್ನೆಯನ್ನು ಕೇಳಲಾಗಿತ್ತು. ಇಬ್ಬರೂ ರೊಮ್ಯಾನ್ಸ್ ಮತ್ತು ಕಪಾಳಕ್ಕೆ ಹೊಡೆಯುವ ದೃಶ್ಯಗಳಲ್ಲಿ ನಟಿಸಿದ್ದೀರಿ. ಇವೆರಡರಲ್ಲಿ ಯಾವ ದೃಶ್ಯಕ್ಕೆ ರೀಟೇಕ್ ತೆಗೆದುಕೊಂಡಿದ್ದೀರಿ ಎನ್ನುವುದೇ ಆ ಪ್ರಶ್ನೆ. 

ಇಬ್ಬರೂ ಕಲಾವಿದರು ಜೊತೆಯಾಗಿ 6 ಕ್ಕೂ ಹೆಚ್ಚು ಹಿಟ್ ಸಿನಿಮಾಗಳನ್ನು ನೀಡಿದವರು. ಹೀಗಾಗಿ ರೊಮ್ಯಾನ್ಸ್ ಆಗಲಿ, ಕಪಾಳಕ್ಕೆ ಹೊಡೆಯುವ ದೃಶ್ಯವೇ ಆಗಲಿ ಯಾವುದಕ್ಕೂ ರೀಟೇಕ್ ಅವಶ್ಯಕತೆ ಬೀಳದು ಎಂದು ಕತ್ರೀನಾ ಹೇಳಿದರು. ಅವರಿಬ್ಬರ ನಡುವೆ ತೆರೆ ಮೇಲೆ ಹೊಂದಾಣಿಕೆ ತುಂಬಾ ಚೆನ್ನಾಗಿದೆ ಎಂದು ಅವರು ಅಭಿಪ್ರಾಯ ಪಟ್ಟಿದ್ದಾರೆ. 

ಈ ಸಂದರ್ಭ ಅಕ್ಷಯ್ ಕುಮಾರ್ ಒಂದು ಘಟನೆ ಬಿಚ್ಚಿಟ್ಟಿದ್ದಾರೆ. ಕಪಾಳಕ್ಕೆ ಹೊಡೆಯುವ ದೃಶ್ಯದಲ್ಲಿ ಕ್ಯಾಮೆರಾ ಕ್ಲೋಸಪ್ ನಲ್ಲಿ ಇಡಲಾಗಿತ್ತು. ಹೀಗಾಗಿ ಕಪಾಳಕ್ಕೆ ಹೊಡೆಯುವಾಗ ಕತ್ರೀನಾ ಕೈ ನನ್ನ ಕೆನ್ನೆಗೆ ಟಚ್ ಆಗಿದೆಯೋ ಇಲ್ಲವೋ ಎನ್ನುವುದು ಕ್ಯಾಮೆರಾದಲ್ಲಿ ಚೆನ್ನಾಗಿ ಗೊತ್ತಾಗುತ್ತಿದ್ದಿತು. ಹೀಗಾಗಿ ಕತ್ರೀನಾ ಹೊಡೆದಂತೆ ನಟಿಸುವುದು ಸಾಧ್ಯವಿರಲಿಲ್ಲ. ಹೀಗಾಗಿ ಕತ್ರೀನಾ ಈ ಸಂದರ್ಭವನ್ನು ಚೆನ್ನಾಗಿ ಉಪಯೋಗಿಸಿಕೊಂಡು ನಿಜಕ್ಕೂ ಹೊಡೆದುಬಿಟ್ಟಿದ್ದಳು ಎಂದು ಅಕ್ಷಯ್ ಚಟಾಕಿ ಹಾರಿಸಿದ್ದಾರೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಸಮಸ್ತ ಜನರಿಗೆ ಸುಗಮ ಆಡಳಿತ, ಶುದ್ಧ ನೀರಿನ ಪೂರೈಕೆ: ಸ್ವಚ್ಚತೆ- ಸಂಚಾರ ವ್ಯವಸ್ಥೆಗೆ ಸಿಎಂ ಸಿದ್ದರಾಮಯ್ಯ ಕಟ್ಟಪ್ಪಣೆ

ಸಿದ್ದರಾಮಯ್ಯ ಮೇಲೆ ತೂಗುಗತ್ತಿ: ಅಧಿಕಾರದಲ್ಲಿ ಉಳಿಯಲು ಸಂಪುಟ ಪುನಾರಚನೆ ಕಸರತ್ತು; ಬಿಹಾರ-ಕೇರಳ ಚುನಾವಣೆಯತ್ತ ಡಿಕೆಶಿ ಚಿತ್ತ!

ವೀರೇಂದ್ರ ಪಪ್ಪಿ ಕರ್ಮಕಾಂಡ ನೋಡುತ್ತಿದ್ದರೆ CM- DCM ಇನ್ಯಾವ ಪರಿ ಲೂಟಿ ಮಾಡಿ ಹೈಕಮಾಂಡ್ ಗೆ ಕಪ್ಪ ನೀಡುತ್ತಿರಬೇಡಾ?

ಈ ಬಾರಿ ನಾನು ಸಚಿವನಾಗುವ ಭರವಸೆ ಇದೆ: ಸಂಪುಟ ವಿಸ್ತರಣೆಯೇ ನವೆಂಬರ್ ಕ್ರಾಂತಿಯಿರಬಹುದು; ಸಲೀಂ ಅಹ್ಮದ್

BDA ಯೋಜನಾ ಪ್ರಾಧಿಕಾರದ ಜವಾಬ್ದಾರಿ ಹಸ್ತಾಂತರ: GBA ವಿರೋಧಿಸುವವರು ಪಾಲಿಕೆ ಚುನಾವಣೆ ಬಹಿಷ್ಕರಿಸಲಿ; ಡಿಕೆಶಿ ಸವಾಲು

SCROLL FOR NEXT