ಶಬಾನಾ ಆಜ್ಮಿ, ಸನ್ನಿ ಡಿಯೋಲ್  
ಬಾಲಿವುಡ್

ಬಾಕ್ಸ್ ಆಫೀಸ್ ನಲ್ಲಿ ಮುಗ್ಗರಿಸಿದ 'Batwara 1947': ಸನ್ನಿ ಡಿಯೋಲ್ ಮುಸ್ಲಿಂ ಪಾತ್ರ ಜನರಿಗೆ ಇಷ್ಟವಾಗಲಿಲ್ಲವೇ! ಶಬಾನಾ ಆಜ್ಮಿ ಹೇಳಿದ್ದೇನು?

ಸಿನಿಮಾ ಮತ್ತು ಅದರಲ್ಲಿರುವ ಮಾನವೀಯತೆಯ ಸಂದೇಶದ ಬಗ್ಗೆ ತಮಗೆ ಪದೇ ಪದೇ ಸಕಾರಾತ್ಮಕ ಅಭಿಪ್ರಾಯಗಳು ಕೇಳಿಬಂದಿವೆ, ಆದರೆ ಆ ಮೆಚ್ಚುಗೆಯು ಚಿತ್ರಮಂದಿರಗಳಿಗೆ ಹೆಚ್ಚಿನ ಸಂಖ್ಯೆಯಲ್ಲಿ ಪ್ರೇಕ್ಷಕರನ್ನು ಸೆಳೆಯುವಲ್ಲಿ ವಿಫಲವಾಗಿದೆ ಎಂದು ಶಬಾನಾ ಆಜ್ಮಿ ಹೇಳಿದ್ದಾರೆ.

ಇತ್ತೀಚಿಗೆ ಬಿಡುಗಡೆಯಾದ 'ಬಟ್ವಾರಾ 1947' (Batwara 1947) ಸಿನಿಮಾ ಬಾಕ್ಸ್ ಆಫೀಸ್ ನಲ್ಲಿ ಮುಗ್ಗರಿಸಿದ ಬಗ್ಗೆ ಹಿರಿಯ ನಟಿ ಶಬಾನಾ ಆಜ್ಮಿ ಅಚ್ಚರಿ ವ್ಯಕ್ತಪಡಿಸಿದ್ದಾರೆ. ಸನ್ನಿ ಡಿಯೋಲ್ ರನ್ನು ಮುಸ್ಲಿಂ ಪಾತ್ರದಲ್ಲಿ ಒಪ್ಪಿಕೊಳ್ಳಲು ಪ್ರೇಕ್ಷಕರು ಯಾಕೆ ಹಿಂಜರಿದರು ಎಂಬ ಪ್ರಶ್ನೆಯನ್ನು ಮುಂದಿಟ್ಟಿದ್ದಾರೆ. ದೇಶ ವಿಭಜನೆಯ ಕಾಲಘಟ್ಟದ ​​ಕಥಾಹಂದರವನ್ನು ಹೊಂದಿರುವ ಈ ಸಿನಿಮಾ ಆಗಸ್ಟ್ 14 ರಂದು ಬಿಡುಗಡೆಯಾಗಿತ್ತು. ಈ ಸಿನಿಮಾ ವೀಕ್ಷಿಸಿದವರಿಂದ ಮೆಚ್ಚುಗೆ ವ್ಯಕ್ತವಾಗಿದ್ದರೂ, ಬಾಕ್ಸ್ ಆಫೀಸ್‌ನಲ್ಲಿ ಕಲೆಕ್ಷನ್ ಆಗಲಿಲ್ಲ. ಇದೇ ವೇಳೆ ಬಿಡುಗಡೆಯಾದ ಇಮ್ರಾನ್ ಹಶ್ಮಿ ಅವರ 'ಅವಾರಪನ್ 2' (Awarapan 2) ಸಿನಿಮಾ ಉತ್ತಮ ಕಲೆಕ್ಷನ್ ಮಾಡಿದೆ.

ಕೆಲ ವೀಕ್ಷಕರಿಂದ ಉತ್ತಮ ಪ್ರತಿಕ್ರಿಯೆ ಸಿಕ್ಕರೂ ಬಾಕ್ಸ್ ಆಫೀಸ್ ನಲ್ಲಿ ಕಲೆಕ್ಷನ್ ಶಬಾನಾ ಆಜ್ಮಿ ಅವರನ್ನು ಆಶ್ಚರ್ಯಚಕಿತರನ್ನಾಗಿಸಿದೆ. ಈ ಕುರಿತು 'ಝೂಮ್' (Zoom) ಚಾನೆಲ್ ಜೊತೆಗೆ ಮಾತನಾಡಿದ ಶಬಾನಾ ಆಜ್ಮಿ, ಸಿನಿಮಾ ಮತ್ತು ಅದರಲ್ಲಿರುವ ಮಾನವೀಯತೆಯ ಸಂದೇಶದ ಬಗ್ಗೆ ತಮಗೆ ಪದೇ ಪದೇ ಸಕಾರಾತ್ಮಕ ಅಭಿಪ್ರಾಯಗಳು ಕೇಳಿಬಂದಿವೆ, ಆದರೆ ಆ ಮೆಚ್ಚುಗೆಯು ಚಿತ್ರಮಂದಿರಗಳಿಗೆ ಹೆಚ್ಚಿನ ಸಂಖ್ಯೆಯಲ್ಲಿ ಪ್ರೇಕ್ಷಕರನ್ನು ಸೆಳೆಯುವಲ್ಲಿ ವಿಫಲವಾಗಿದೆ ಎಂದು ಹೇಳಿದರು.

"'ಬಟ್ವಾರಾ 1947' ಬಾಕ್ಸ್ ಆಫೀಸ್‌ನಲ್ಲಿ ಸಂಪೂರ್ಣ ವಿಫಲವಾಗಿರುವುದು ನನಗೆ ತುಂಬಾ ಆಶ್ಚರ್ಯ ತಂದಿದೆ. ಈ ಚಿತ್ರ ಮತ್ತು ಅದರ ಸಂದೇಶ ತುಂಬಾ ಇಷ್ಟವಾಯಿತು. ದ್ವೇಷವನ್ನು ಮೀರಿ ಮಾನವೀಯತೆಯ ಬಗ್ಗೆ ಮಾತನಾಡುವ ಈ ಚಿತ್ರಕ್ಕೆ ಇಂದಿನ ವಾತಾವರಣದಲ್ಲಿ ಬಹಳ ಮಹತ್ವವಿದೆ ಎಂದು ನನ್ನ ನೆರೆಹೊರೆಯವರೇ ಹೇಳಿದ್ದಾರೆ. ಮತ್ತೊಂದೆಡೆ ಜನರು ಚಿತ್ರಮಂದಿರಗಳಿಗೆ ಹೋಗಲಿಲ್ಲ. ಹೋದವರ ಪ್ರತಿಕ್ರಿಯೆಗಳು ಗೊಂದಲಮಯವಾಗಿದ್ದವು ಎಂದರು.

ಪ್ರೇಕ್ಷಕರ ನೀರಸ ಪ್ರತಿಕ್ರಿಯೆಗೆ ಮತ್ತೊಂದು ಅಂಶವನ್ನು ಪ್ರತಿಕ್ರಿಯಿಸಿದ ಅವರು, ಸನ್ನಿ ಡಿಯೋಲ್ ಅವರನ್ನು ಮುಸ್ಲಿಂ ಪಾತ್ರದಲ್ಲಿ ನೋಡಲು ಪ್ರೇಕ್ಷಕರಿಗೆ ಆಗುತ್ತಿದ್ದ ಕಷ್ಟ. ಅಮಿತಾಬ್ ಬಚ್ಚನ್ ಅವರ ಹಿಂದಿನ ಪಾತ್ರಗಳೊಂದಿಗೆ ಹೋಲಿಕೆ ಮಾಡಿದ ಆಜ್ಮಿ, ಸನ್ನಿ ಡಿಯೋಲ್ ಅವರನ್ನು ಮುಸ್ಲಿಂ ಪಾತ್ರದಲ್ಲಿ ಒಪ್ಪಿಕೊಳ್ಳಲು ಸಾಧ್ಯವಾಗುವುದಿಲ್ಲ. 'ಕೂಲಿ' (Coolie) ಮತ್ತು ಇತರ ಅನೇಕ ಚಿತ್ರಗಳಲ್ಲಿ ಅಮಿತಾಬ್ ಬಚ್ಚನ್ ಮುಸ್ಲಿಂ ಪಾತ್ರಗಳನ್ನು ಬಹಳ ಸಹಜವಾಗಿ ನಿರ್ವಹಿಸಿದ್ದರು. 'ದೀವಾರ್' (Deewaar) ಚಿತ್ರದಲ್ಲಿ ಅವರು '786' ಸಂಖ್ಯೆಯನ್ನು ಬಳಸಿದ್ದರು ಮತ್ತು ಅದನ್ನು ಒಪ್ಪಿಕೊಳ್ಳಲಾಗಿತ್ತು. ಹಾಗಾದರೆ ಇದನ್ನು ಹೇಗೆ ಅರ್ಥಮಾಡಿಕೊಳ್ಳುವುದು? ಉದ್ದೇಶಪೂರ್ವಕವಾಗಿಯೇ ಇಂತಹ ನಿರ್ಧಾರಗಳನ್ನು ತೆಗೆದುಕೊಳ್ಳುವಂತಹ ವಾತಾವರಣವನ್ನು ಸೃಷ್ಟಿಸಲಾಗುತ್ತಿದೆಯೇ? ನನಗೆ ಇದು ಅರ್ಥವಾಗುತ್ತಿಲ್ಲ. ಸಿನಿಮಾ ನೋಡಿದವರು ಕೂಡ ಡಿಯೋಲ್ ಪಾತ್ರವನ್ನು ತಪ್ಪಾಗಿ ಅರ್ಥೈಸಿಕೊಳ್ಳುತ್ತಿದ್ದಾರೆ ಎಂದು ಅಜ್ಮಿ ಪ್ರತಿಪಾದಿಸಿದರು.

ಜನರು ಇದಕ್ಕೆ ಪ್ರತಿಕ್ರಿಯಿಸುತ್ತಿರುವ ರೀತಿಯನ್ನು ಕಂಡು ನನಗೆ ಆಶ್ಚರ್ಯವಾಗುತ್ತಿದೆ. ಸಿನಿಮಾ ನೋಡಿದವರು ಕೂಡ ಸನ್ನಿ ಡಿಯೋಲ್ ಪಾಕಿಸ್ತಾನಿಯ ಪಾತ್ರವನ್ನು ನಿರ್ವಹಿಸಿದ್ದಾರೆ ಎಂದು ಭಾವಿಸುತ್ತಾರೆ. ಆದರೆ ಅವರು ಹಾಗಲ್ಲ. ಈ ವಿಷಯ ಅವರ ಮನಸ್ಸಿಗೆ ಸರಿಯಾಗಿ ತಲುಪುತ್ತಿಲ್ಲ. ಬುಶ್ರಾ ಅಹ್ಮದ್ (ಪಾಕಿಸ್ತಾನಿ ನಟಿ) ಕೂಡ ಚಿತ್ರದ ಭಾಷೆಯ ಬಗ್ಗೆ ಆಕ್ಷೇಪ ವ್ಯಕ್ತಪಡಿಸಿದ್ದರು. ಖಳನಾಯಕ ಬಳಸುವ ಪಂಜಾಬಿ ಉಪಭಾಷೆ ಸರಿಯಾಗಿಲ್ಲ ಎಂದು ಅವರು ಹೇಳಿದ್ದರು. ಒಂದು ವೇಳೆ ಎರಡೂ ಧರ್ಮದವರಿಗೆ ಈ ಚಿತ್ರ ಇಷ್ಟವಾಗದಿದ್ದರೆ, ಅದರ ಅರ್ಥವೇನೆಂದರೆ ಇದು ಶುದ್ಧ ಮತ್ತು ಸುಂದರವಾದ ವಿಷಯವಾಗಿದೆ. ಸಿನಿಮಾ ರಾಜಕೀಯವಾಗಿ ಸಮಸ್ಯೆಗಳನ್ನು ಉಂಟುಮಾಡುವಂತಿದೆ ಎಂಬ ಅಭಿಪ್ರಾಯವನ್ನೂ ಆಜ್ಮಿ ತಳ್ಳಿಹಾಕಿದರು. ಭಾರತ ಮತ್ತು ಪಾಕಿಸ್ತಾನದ ವಿಭಜನೆಯ ಹಿನ್ನೆಲೆಯಲ್ಲಿ ಬರುವ ಕಥೆಗಳಿಗೆ ಪ್ರೇಕ್ಷಕರು ಪ್ರತಿಕ್ರಿಯಿಸುವ ರೀತಿಯಲ್ಲಿಯೇ ಬಹುಶಃ ಸಮಸ್ಯೆ ಅಡಗಿರಬಹುದು ಎಂದು ಅವರು ಹೇಳಿದರು.

'ಬಟ್ವಾರಾ 1947' ಬಾಕ್ಸ್ ಆಫೀಸ್ ಗಳಿಕೆ: ಚಿತ್ರೋದ್ಯಮದ ಬಾಕ್ಸ್ ಆಫೀಸ್ ವಿವರ ನೀಡುವ 'ಸ್ಯಾಕ್ನಿಲ್ಕ್' (Sacnilk) ಪ್ರಕಾರ, 'ಬಟ್ವಾರಾ 1947' ಸಿನಿಮಾ ವಿಶ್ವಾದ್ಯಂತ ಒಟ್ಟು 54.03 ಕೋಟಿ ರೂ.ಗಳ ಗಳಿಕೆಯನ್ನು ಕಂಡಿದೆ. ಇದರಲ್ಲಿ ಭಾರತದಿಂದ 44.98 ಕೋಟಿ ರೂ. ಮತ್ತು ಸಾಗರೋತ್ತರ ಮಾರುಕಟ್ಟೆಗಳಿಂದ 9.05 ಕೋಟಿ ರೂ. ಸೇರಿವೆ. ಭಾರತದಲ್ಲಿ ಈ ಚಿತ್ರದ ನಿವ್ವಳ ಗಳಿಕೆಯು 37.93 ಕೋಟಿ ರೂ.ಗಳಷ್ಟಿದೆ. ಇದು ಒಟ್ಟು 69,157 ಪ್ರದರ್ಶನಗಳಿಂದ ಬಂದಿದೆ.

ಬಿಡುಗಡೆಯಾದ ಮೊದಲ ದಿನ, 'ಬಟ್ವಾರಾ 1947' ಭಾರತದಲ್ಲಿ 8,721 ಪ್ರದರ್ಶನಗಳಿಂದ 5.75 ಕೋಟಿ ರೂ. ನಿವ್ವಳ ಗಳಿಕೆಯನ್ನು ದಾಖಲಿಸಿತು. ಭಾರತದಲ್ಲಿ ಇದರ ಒಟ್ಟು ಗಳಿಕೆ (gross) 6.84 ಕೋಟಿ ರೂ.ಗಳಷ್ಟಿದ್ದರೆ, ಸಾಗರೋತ್ತರ ಮಾರುಕಟ್ಟೆಗಳಿಂದ 1.50 ಕೋಟಿ ರೂ. ಗಳಿಕೆಯೊಂದಿಗೆ, ಚಿತ್ರದ ಮೊದಲ ದಿನದ ಜಾಗತಿಕ ಒಟ್ಟು ಗಳಿಕೆಯು 8.34 ಕೋಟಿ ರೂ.ಗೆ ತಲುಪಿತು.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

ನೇಪಾಳದಲ್ಲಿ ಭೀಕರ ಪ್ರವಾಹ; ಮೃತರ ಸಂಖ್ಯೆ 903ಕ್ಕೆ ಏರಿಕೆ, ವಿದೇಶಿಯರು ಸೇರಿ 4,000ಕ್ಕೂ ಹೆಚ್ಚು ಮಂದಿ ಇನ್ನೂ ನಾಪತ್ತೆ!

ನೆರೆ ಸಂತ್ರಸ್ತರಿಗೆ ನೆರವು ಹೊತ್ತು ಹೋದವರಿಗೆ ಶಾಕ್: 'ಇಲ್ಲೇ ಖರೀದಿಸಿ' ಎಂದ ನೇಪಾಳ ಅಧಿಕಾರಿಗಳು! ಆಗಿದ್ದೇನು?

Hit And Run: ಪಾದಚಾರಿಗೂ ಜೀವಂತವಾಗಿ ರಸ್ತೆ ದಾಟುವ ಹಕ್ಕಿದೆ: ದೆಹಲಿ ಕೋರ್ಟ್

ರಾಹುಲ್ ಗಾಂಧಿಯನ್ನು ಪ್ರಧಾನಿ ಅಭ್ಯರ್ಥಿಯಾಗಿ ಒಪ್ಪದಿದ್ದರೆ TVK ಸಂಪುಟದಿಂದ ಕಾಂಗ್ರೆಸ್ ಹೊರಬರಲಿದೆ: ಸಚಿವ

ಇಸ್ಲಾಂ ಧರ್ಮವೇ ಶ್ರೇಷ್ಠ: ಸಿಎಂ ಡಿಕೆಶಿಯ 6ನೇ ಗ್ಯಾರಂಟಿ- ಹಿಂದೂಗಳಿಗೆ ‘ಸುನ್ನತ್ ಗ್ಯಾರಂಟಿ' ರಾಯರೆಡ್ಡಿ ಕ್ಷಮೆಯಾಚನೆಗೆ ಬಿಜೆಪಿ ಒತ್ತಾಯ!