ಸಿನಿಮಾ ಸುದ್ದಿ

'ಬಾಹುಬಲಿ ೨'ರ ನಂತರ 'ಈಗ ೨' ಸಾಧ್ಯತೆ: ನಾಣಿ

Guruprasad Narayana

ಚೆನ್ನೈ: ತೆಲುಗು ಬ್ಲಾಕ್ಬಸ್ಟರ್ ಚಲನಚಿತ್ರ 'ಈಗ' ಎರಡನೆ ಭಾಗಕ್ಕೆ ಕೂಡ ಯೋಜನೆಯಿದ್ದು ಇದು 'ಬಾಹುಬಲಿ ೨'ರ ನಂತರ ಪ್ರಾರಂಭವಾಗುವ ಸಾಧ್ಯತೆ ಇದೆ ಎಂದು ನಟ ನಾಣಿ ಹೇಳಿದ್ದಾರೆ. ಈ ಎರಡೂ ಸಿನೆಮಾಗಳ ನಿರ್ದೇಶಕ ಎಸ್ ಎಸ್ ರಾಜಮೌಳಿ.

"'ಈಗ ೨' ಯೋಜನೆಯನ್ನು ನಿರ್ದೇಶಿಸಲು ರಾಜಮೌಳಿ ಸರ್ ಉತ್ಸುಕರಾಗಿದ್ದಾರೆ. ಆದರೆ ಇದು ಬಾಹುಬಲಿ೨ ರ ನಂತರವಷ್ಟೇ ಸಾಧ್ಯ" ಎಂದು ನಾಣಿ ತಿಳಿಸಿದ್ದಾರೆ.  

ನೊಣ ಪುನರ್ಜನ್ಮ ತಾಳಿ ಸೇಡು ತೀರಿಸಿಕೊಳ್ಳುವ ಕಥೆಯಿದ್ದ ೨೦೧೨ ರ ಬಿಡುಗಡೆ 'ಈಗ' ಪ್ರೇಕ್ಷಕರ ಮಧ್ಯೆ ಬಹಳ ಜನಪ್ರಿಯವಾಗಿತ್ತು. ಇದನ್ನು ಹಿಂದಿಯಲ್ಲಿ 'ಮಕ್ಕಿ' ಎಂಬ ಹೆಸರಿನಲ್ಲಿ ಡಬ್ ಮಾಡಲಾಗಿ, ಅಲ್ಲಿಯೂ ಕೂಡ ಜನಪ್ರಿಯತೆ ಗಳಿಸಿತ್ತು.

'ಈಗ' ದಲ್ಲಿ ಕನ್ನಡ ಸೂಪರ್ ಸ್ಟರ್ ನಟ ಸುದೀಪ್, ಸಮಂತ ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದರು.

SCROLL FOR NEXT