ಎರಡು ಕನಸು ಚಿತ್ರದ ಪೋಸ್ಟರ್ 
ಸಿನಿಮಾ ಸುದ್ದಿ

ಎರಡು ಕನಸು ಚಿತ್ರದ ನಿರ್ದೇಶಕ ಮದನ್ ಬಂಧನ

ಎರಡು ಕನಸು ಚಿತ್ರದ ಪ್ರಮೋಶನ್ ಸರಿಯಾಗಿ ಮಾಡಿಲ್ಲ ಎಂಬ ಕಾರಣಕ್ಕೆ ಪ್ರಚಾರಕ ಪರಮೇಶ್ ಎಂಬುವರನ್ನು ಅಪಹರಣ ಮಾಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ...

ಬೆಂಗಳೂರು: ಎರಡು ಕನಸು ಚಿತ್ರದ ಪ್ರಮೋಶನ್ ಸರಿಯಾಗಿ ಮಾಡಿಲ್ಲ ಎಂಬ ಕಾರಣಕ್ಕೆ ಪ್ರಚಾರಕ ಪರಮೇಶ್ ಎಂಬುವರನ್ನು ಅಪಹರಣ ಮಾಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ ನಿರ್ದೇಶಕ ಮದನ್ ಎಂಬುವರನ್ನು ಪೊಲೀಸರು ಬಂಧಿಸಿದ್ದಾರೆ. 
ಕಳೆದ ನಾಲ್ಕು ದಿನಗಳ ಹಿಂದೆ ಬಸವೇಶ್ವರ ನಗರದ ಮನೆಯಿಂದ ಪರಮೇಶ್ ರನ್ನು ಮದನ್ ತನ್ನ ಸ್ನೇಹಿತರೊಂದಿಗೆ ಅಪಹರಣ ಮಾಡಿಸಿದ್ದ ಮೂರು ದಿನ ಕಳೆದರು ಪರಮೇಶ್ ಮನೆಗೆ ಬಾರದಿದ್ದರಿಂದ ಪರಮೇಶ್ ಪೋಷಕರು ಪೊಲೀಸರಿಗೆ ದೂರು ನೀಡಿದ್ದರು. ಈ ದೂರಿನನ್ವಯ ಮಾಗಡಿ ರಸ್ತೆ ಪೊಲೀಸರು ಮದನ್ ನನ್ನು ಬಂಧಿಸಿದ್ದಾರೆ. 
ಎರಡು ಕನಸು ಚಿತ್ರದ ಪ್ರಮೋಶನ್ ಗಾಗಿ ಮದನ್ ಪರಮೇಶ್ ಗೆ 16.3 ಲಕ್ಷ ರುಪಾಯಿ ನೀಡಿದ್ದರು. ಚಿತ್ರ ಇತ್ತೀಚೆಗಷ್ಟೇ ತೆರೆಕಂಡು ಸೋಲು ಕಂಡಿತ್ತು. ಈ ಸೋಲಿಗೆ ಪ್ರಮೋಶನ್ ಸರಿಯಾಗಿ ಮಾಡದೇ ಇರುವುದೇ ಕಾರಣ ಎಂದು ನಿರ್ದೇಶಕ ಮದನ್ ಪರಮೇಶ್ ರನ್ನು 8 ಲಕ್ಷ ರುಪಾಯಿ ವಾಪಸ್ ಕೊಡುವಂತೆ ಕೇಳಿದ್ದಾರೆ. ಇದಕ್ಕೆ ಪರಮೇಶ್ ನಿರಾಕರಿಸಿದ್ದರಿಂದ ಅವರನ್ನು ಅಪಹರಣ ಮಾಡಲಾಗಿದೆ ಎಂದು ಹೇಳಲಾಗಿದೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ರಕ್ಷಣಾ, ಭದ್ರತಾ ಒಪ್ಪಂದ ಬಲವರ್ಧನೆ: ಭಾರತ- ಜರ್ಮನಿ ಮಹತ್ವದ ಕ್ರಮಗಳ ಘೋಷಣೆ!

ಸ್ವಾತಂತ್ರ್ಯ ಬಳಿಕ ಇದೇ ಮೊದಲು: ಮಕರ ಸಂಕ್ರಾಂತಿಗೆ ಮತ್ತೊಂದು ಹೊಸ 'ದಾಖಲೆ'ಗೆ ಸಜ್ಜಾದ ಪ್ರಧಾನಿ ಮೋದಿ!

'ಅಜ್ಮೀರ್' ದರ್ಗಾ ಶಿವ ದೇಗುಲವಾಗಿತ್ತು: ಕೋರ್ಟ್ ಮೆಟ್ಟಿಲೇರಿದ ವಿವಾದ!

'ವಿಬಿ-ಜಿ-ರಾಮ್' ಕಾಯ್ದೆ ವಿರುದ್ಧ ಕಾನೂನು ಸಮರ: ವಿಶೇಷ ಅಧಿವೇಶನ ಕರೆದು ಚರ್ಚೆ- ಸಿಎಂ ಸಿದ್ದರಾಮಯ್ಯ

ಟ್ರಂಪ್ ಗೆ 'ಮರೆಯಲಾಗದ ಪಾಠ' ಕಲಿಸುತ್ತೇವೆ: ಇರಾನ್ ಸಂಸತ್ ಸ್ಪೀಕರ್ ಖಡಕ್ ವಾರ್ನಿಂಗ್!

SCROLL FOR NEXT