ನಿರ್ದೇಶಕ ಎಸ್.ಎಸ್ ರಾಜಮೌಳಿ 
ಸಿನಿಮಾ ಸುದ್ದಿ

ಬೇರೆ ಬೇರೆ ಚಿತ್ರರಂಗದ ಕಲಾವಿದರನ್ನು ಹಾಕಿಕೊಳ್ಳುವುದರಿಂದ ಪ್ಯಾನ್ ಇಂಡಿಯಾ ಸಿನಿಮಾ ಆಗೋದಿಲ್ಲ: RRR ನಿರ್ದೇಶಕ ರಾಜಮೌಳಿ

ಸ್ಟಾರ್ ನಟರು ಜನರನ್ನು ಚಿತ್ರಮಂದಿರಕ್ಕೆ ಕರೆತರುತ್ತಾರೆ, ಆದರೆ ಸಿನಿಮಾ ಹಿಟ್ ಆಗೋದು ಕಥೆಯಿಂದ.

ಹೈದರಾಬಾದ್: ಬಾಹುಬಲಿ ಸಿನಿಮಾ ಮೂಲಕ ದೇಶಾದ್ಯಂತ ಜನಪ್ರಿಯತೆ ಗಳಿಸಿದ ಚಿತ್ರ ನಿರ್ದೇಶಕ ರಾಜಮೌಳಿ. ಅವರ ಪ್ರಕಾರ ಪ್ಯಾನ್ ಇಂಡಿಯಾ ಸಿನಿಮಾ ಅಂದರೆ ಬೇರೆ ಬೇರೆ ಚಿತ್ರರಂಗದ ನಟರನ್ನು ಸಿನಿಮಾದಲ್ಲಿ ಹಾಕಿಕೊಳ್ಳುವುದಲ್ಲ. ಯಾವುದೇ ಭಾಷೆಯ ಜನರಿಗೆ ಕನೆಕ್ಟ್ ಆಗುವ ಕಥೆಯೇ ಸಿನಿಮಾದ ಜೀವಾಳ ಎನ್ನುವುದು ಅವರ ಅಭಿಪ್ರಾಯ.

ಯಾವುದೇ ದೃಶ್ಯ ತೆರೆ ಮೇಲೆ ಬರುವಾಗ ಅದರ ಸೌಂಡನ್ನು ಆಫ್ ಮಾಡಿದರೆ ಪರಭಾಷೆಯ ಜನರು ಕಥೆಯನ್ನು ಅರ್ಥ ಮಾಡಿಕೊಳ್ಳುವರೇ ಎಂದು ನಾನು ಚಿಂತಿಸುತ್ತೇನೆ. ಸೌಂಡ್ ಆಫ್ ಮಾಡಿದರೂ ಕಥೆ ಅರ್ಥ ಮಾಡಿಕೊಳ್ಲಬಲ್ಲರು ಅಂದರೆ ಮಾತ್ರ ಅದು ಯಶಸ್ವಿ ಪ್ಯಾನ್ ಇಂಡಿಯಾ ಸಿನಿಮಾ.

ಬಾಹುಬಲಿ ಸಿನಿಮಾ ತೆರೆಕಂಡು 5 ವರ್ಷಗಳ ನಂತರ ಅವರ ಹೊಸ ಸಿನಿಮಾ ಆರ್ ಆರ್ ಆರ್ ಬಿಡುಗಡೆಗೆ ಸಿದ್ಧವಾಗಿದೆ. ತೆಲುಗು ಸ್ಟಾರ್ ನಟರಾದ ಜೂನಿಯರ್ ಎನ್ ಟಿ ಆರ್ ಮತ್ತು ರಾಮ್ ಚರಣ್ ತೇಜ ಆ ಸಿನಿಮಾದಲ್ಲಿ ನಟಿಸಿದ್ದಾರೆ. ಸ್ವಾತಂತ್ರ್ಯ ಸಂಗ್ರಾಮ ಕಥೆಯನ್ನು ಹೊಂದಿರುವ ಈ ಸಿನಿಮಾ ಈಗಾಗಲೇ ಸದ್ದು ಮಾಡಿದ್ದು, ನಿರೀಕ್ಷೆಯನ್ನು ಹುಟ್ಟು ಹಾಕಿದೆ.

ಸ್ಟಾರ್ ನಟರು ಜನರನ್ನು ಚಿತ್ರಮಂದಿರಕ್ಕೆ ಕರೆತರುತ್ತಾರೆ, ಆದರೆ ಸಿನಿಮಾ ಹಿಟ್ ಆಗೋದು ಕಥೆಯಿಂದ ಎಂದು ರಾಜಮೌಳಿ ಆತ್ಮವಿಶ್ವಾಸದಿಂದ ಹೇಳುತ್ತಾರೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

Ramnath Goenka Sahithya Samman 2025: ಸಾಹಿತಿ ಚಂದ್ರಶೇಖರ ಕಂಬಾರರಿಗೆ ಜೀವಮಾನ ಸಾಧನೆ ಪ್ರಶಸ್ತಿ ಪ್ರದಾನ

Ballari banner row: ಯಾರ ಗನ್ ನಿಂದ ಗುಂಡು ಹಾರಿತ್ತು ಎಂದು ತನಿಖೆ ಮಾಡಲು ಹೇಳಿದ್ದೇನೆ: ಸಿಎಂ ಸಿದ್ದರಾಮಯ್ಯ

'ಮುಲ್ಲಾಗಳು ತೊಲಗಲಿ': 3 ವರ್ಷದ ಬಳಿಕ ಇರಾನ್‌ನಲ್ಲಿ ಮತ್ತೆ ಬೃಹತ್ ಪ್ರತಿಭಟನೆ; ಬೀದಿಗಿಳಿದ Gen Zಗಳು, ಗುಂಡೇಟಿಗೆ 7 ಮಂದಿ ಬಲಿ!

Thinking of you': ದೇಶದ್ರೋಹಿ ಆರೋಪಿ ಉಮರ್ ಖಾಲೀದ್ ಗೆ ಪತ್ರ ಬರೆದ ನ್ಯೂಯಾರ್ಕ್ ಮೇಯರ್ ಮಮ್ದಾನಿ!

ನೀರಲ್ಲ, ವಿಷ ಸರಬರಾಜು ಮಾಡಲಾಗಿದೆ: ಇಂದೋರ್ ದುರಂತಕ್ಕೆ ರಾಹುಲ್ ಗಾಂಧಿ ಕಿಡಿ

SCROLL FOR NEXT