ನಿರ್ದೇಶಕ ಪ್ರೇಮ್ 
ಸಿನಿಮಾ ಸುದ್ದಿ

'ಎಲ್ಲಾ ಕಂಡಿದ್ದೇವೆ' ಎಂದು ನಾನೂ ಹೇಳಬಹುದು, ವಿಷಯ ದೊಡ್ದದು ಮಾಡೋದು ಬೇಡ: ನಿರ್ದೇಶಕ ಪ್ರೇಮ್

ದರ್ಶನ್ ನಿರ್ದೇಶಕರ ಬಗ್ಗೆ ಮಾತನಾಡಿರುವುದು ನನಗೆ ಬೇಸರವಾಗಿದೆ ಎಂದು ನಿರ್ದೇಶಕ ಪ್ರೇಮ್ ಹೇಳಿದ್ದಾರೆ. 

ದರ್ಶನ್ ನಿರ್ದೇಶಕರ ಬಗ್ಗೆ ಮಾತನಾಡಿರುವುದು ನನಗೆ ಬೇಸರವಾಗಿದೆ ಎಂದು ನಿರ್ದೇಶಕ ಪ್ರೇಮ್ ಹೇಳಿದ್ದಾರೆ. 

ಬೆಂಗಳೂರಿನಲ್ಲಿ ಸುದ್ದಿಗಾರರ ಜತೆ ಮಾತನಾಡಿದ ಪ್ರೇಮ್ "ನಾನೆಷ್ಟು ಸಿನಿಮಾ ಮಾಡಿದ್ದರೂ ನನಗೇನೂ ಕೊಂಬು ಬಂದಿಲ್ಲ, ನನಗೆ ಯಾರೂ ಕ್ಷಮೆ ಕೇಳುವುದು ಬೇಡ. ಯಾರೂ ಯಾವತ್ತೂ ನಿರ್ದೇಶಕರ ಬಗ್ಗೆ ಹಗುರವಾಗಿ ಮಾತನಾಡಬಾರದು" ಎಂದರು.

"ಇದನ್ನು ಹೆಚ್ಚು ಬೆಳೆಸಲು ಇಷ್ಟ ಪಡಲ್ಲ, ನಾವೂ ಕಂಡಿದ್ದೇವೆ ಎಂದು ಸಾಮಾನ್ಯವಾಗಿ ಮಾತನಾಡಬಹುದು, ಅದರಂತೆ ದರ್ಶನ್ ಸಹ ಹೇಳಿದ್ದಾರೆ. ಇದನ್ನು ದೊಡ್ಡದು ಮಾಡಬೇಡಿ" ಎಂದರು.

ಪತ್ನಿ ರಕ್ಷಿತಾ, ದರ್ಶನ್ ಆತ್ಮೀಯ ಸ್ನೇಹಿತರು

ನನ್ನ ಪತ್ನಿ ರಕ್ಷಿತಾ, ದರ್ಶನ್ ಮಾಡುವ ಪ್ರತೀ ಕೆಲಸವನ್ನು ಬೆಂಬಲಿಸುತ್ತಾರೆ ಆದರೆ ನಿನ್ನೆ ದರ್ಶನ್ ನೀಡಿರುವ ಹೇಳಿಕೆಯಿಂದ ಅವಳು ವಿಚಲಿತಳಾಗಿದ್ದಾಳೆ ಎಂದು ನಿರ್ದೇಶಕ ಪ್ರೇಮ್ ಹೇಳಿದ್ದಾರೆ.

"ದರ್ಶನ್ ಅವರ ಯಾವ ಸಿನಿಮಾ ಬಿಡುಗಡೆಯಾದಾಗಲೂ ನನ್ನ ಪತ್ನಿ ಮೊದಲು ಶುಭ ಕೋರುತ್ತಾಳೆ. ನನ್ನ ಪತ್ನಿ ರಕ್ಷಿತಾಗೆ ದರ್ಶನ್ ಕ್ಲೋಸ್ ಫ್ರೆಂಡ್" ಎಂದು ಪ್ರೇಮ್ ಹೇಳಿದ್ದಾರೆ.

"ನನಗೆ ನಿನ್ನೆಯಿಂದ ದರ್ಶನ್ ಅವರ ಅಭಿಮಾನಿಗಳು, ಸ್ನೇಹಿತರು ಕರೆ ಮಾಡಿ ಆವೇಶದಲ್ಲಿ ಮಾತನಾಡಿರಬಹುದು, ಕ್ಷಮಿಸಿ ಎಂದು ಕೇಳುತ್ತಿದ್ದಾರೆ ಆದರೆ ಯಾರೂ ಕ್ಷಮೆ ಬೇಡುವುದು ಬೇಡ" ಎಂದು ನಿರ್ದೇಶಕ ಹೇಳಿದ್ದಾರೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಇಬ್ಬರು ಕೇಂದ್ರ ಸಚಿವರು ಸೇರಿದಂತೆ 75 ಸದಸ್ಯರ GBA ಸೆ. 2 ರಿಂದ ಅಸ್ತಿತ್ವಕ್ಕೆ: ಯತೀಂದ್ರ ಸಿದ್ದರಾಮಯ್ಯಗೂ ಸ್ಥಾನ!

ಜಮ್ಮುವಿನಾದ್ಯಂತ ಭಾರಿ ಮಳೆ: ಅಪಾರ ಪ್ರಮಾಣದ ಹಾನಿ, 10 ಮಂದಿ ಸಾವು: ಕೊಚ್ಚಿ ಹೋದ ರಸ್ತೆ, ಸೇತುವೆಗಳು!

ಫೈಟರ್ ಜೆಟ್‌ ಇಂಜಿನ್ ಖರೀದಿ: ಅಮೆರಿಕಾದ GE ಸಂಸ್ಥೆಯೊಂದಿಗೆ $1 ಬಿಲಿಯನ್ ಮೊತ್ತದ ಒಪ್ಪಂದಕ್ಕೆ ಭಾರತ ಸಿದ್ಧತೆ!

ಡಿಕೆಶಿ ಕ್ಷಮೆ ಕೇಳಬಾರದಿತ್ತು; ಮುಲಾಜಿಲ್ಲದೆ ಕಾಂಗ್ರೆಸ್ ಪಕ್ಷದ ಸದಸ್ಯತ್ವಕ್ಕೆ ರಾಜೀನಾಮೆ ಬಿಸಾಕಬೇಕಿತ್ತು- ಆರ್. ಅಶೋಕ್

ಸುಂಕ ಸಮರ: Trump 4 ಬಾರಿ ಕರೆ ಮಾಡಿದರೂ ಉತ್ತರಿಸದ PM Modi; ಅಮೆರಿಕ ನಿಯೋಗಕ್ಕೂ No Entry!

SCROLL FOR NEXT