'ಇನ್' ಸಿನಿಮಾದ ಫರ್ಸ್ಟ್ ಲುಕ್ ನಲ್ಲಿ ಪಾವನಾ 
ಸಿನಿಮಾ ಸುದ್ದಿ

ಸಿ.ಎಂ ಬೊಮ್ಮಾಯಿ ಅವರಿಂದ ಪಾವನಾ 'ಇನ್' ಸಿನಿಮಾದ ಫರ್ಸ್ಟ್ ಲುಕ್ ಬಿಡುಗಡೆ

ಕೊರೊನಾ ಸಂದರ್ಭದಲ್ಲಿ ಲಾಕ್ ಡೌನ್ ಘೋಷಣೆಯಾದಾಗ ಮನೆಯೊಳಗೆ ಸಿಕ್ಕಿಹಾಕಿಕೊಳ್ಳುವ ಹುಡುಗಿಯೊಬ್ಬಳ ಕಥೆಯನ್ನು ನಿರ್ದೇಶಕರು ಹೇಳಲು ಹೊರಟಿದ್ದಾರೆ. ಇದರೊಂದಿಗೆ ಕನ್ನಡ ಚಿತ್ರರಂಗದಲ್ಲಿ ಲಾಕ್ ಡೌನ್ ಸಿನಿಮಾಗಳ ಸಾಲು ಶುರುವಾಗುವ ಸಾಧ್ಯತೆಗಳು ಗೋಚರಿಸಿವೆ. 

ಬೆಂಗಳೂರು: 'ಗೊಂಬೆಗಳ ಲವ್', 'ರುದ್ರಿ' ಖ್ಯಾತಿಯ ಪ್ರತಿಭಾನ್ವಿತ ನಟಿ ಪಾವನಾ ಗೌಡ ಅವರ ನೂತನ 'ಇನ್' ಸಿನಿಮಾದ ಫರ್ಸ್ಟ್ ಲುಕ್ ಅನ್ನು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಬಿಡುಗಡೆಗೊಳಿಸಿದ್ದಾರೆ. 

ಕೊರೊನಾ ಸಂದರ್ಭದಲ್ಲಿ ಲಾಕ್ ಡೌನ್ ಘೋಷಣೆಯಾದಾಗ ಮನೆಯೊಳಗೆ ಸಿಕ್ಕಿಹಾಕಿಕೊಳ್ಳುವ ಹುಡುಗಿಯೊಬ್ಬಳ ಕಥೆಯನ್ನು ನಿರ್ದೇಶಕರು ಹೇಳಲು ಹೊರಟಿದ್ದಾರೆ. ಇದರೊಂದಿಗೆ ಕನ್ನಡ ಚಿತ್ರರಂಗದಲ್ಲಿ ಲಾಕ್ ಡೌನ್ ಸಿನಿಮಾಗಳ ಸಾಲು ಶುರುವಾಗುವ ಸಾಧ್ಯತೆಗಳು ಗೋಚರಿಸಿವೆ. 

ಈ ಹಿಂದೆ ಲಾಕ್ ಡೌನ್ ಅನ್ನೇ ಆಧರಿಸಿದ ಕಾಮಿಡಿ ಸಿನಿಮಾ 'ಇಕ್ಕಟ್' ಬಿಡುಗಡೆಯಾಗಿ ಮೆಚ್ಚುಗೆಗೆ ಪಾತ್ರವಾಗಿತ್ತು. ಇದೀಗ ಲಾಕ್ ಡೌನ್ ಅನ್ನೇ ಆಧರಿಸಿ ವಿಭಿನ್ನವಾದ ಕಥಾನಕವನ್ನು ಇನ್ ಸಿನಿಮಾದಿಂದ ನಿರೀಕ್ಷಿಸಬಹುದಾಗಿದೆ. 

ಸಿನಿಮಾದ ಫರ್ಸ್ಟ್ ಲುಕ್ ತೀವ್ರ ಕುತೂಹಲ ಸೃಷ್ಟಿಸುತ್ತದೆ. ಪಾವನಾ ಅವರು ಸಿನಿಮಾದಲ್ಲಿ ಬೋಲ್ಡ್ ಆಗಿಯೂ ಬ್ಯೂಟಿಫುಲ್ ಆಗಿಯೂ ಕಾಣಿಸಿಕೊಂಡಿರುವುದರ ಝಲಕ್ 'ಇನ್' ಚಿತ್ರದ ಫರ್ಸ್ಟ್ ಲುಕ್ ನಿಂದ ಸಿಗುತ್ತದೆ.

ಈ ಹಿಂದೆ ರುದ್ರಿ ಸಿನಿಮಾದಲ್ಲಿ ಪಾವನಾ ಹಾಗೂ ನಿರ್ದೇಶಕ ಬಡಿಗೇರ್ ದೇವೇಂದ್ರ ಜೊತೆಯಾಗಿ ಕಾರ್ಯ ನಿರ್ವಹಿಸಿದ್ದರು. ಇನ್ ಚಿತ್ರವನ್ನೂ ಬಡಿಗೇರ್ ದೇವೇಂದ್ರ ಅವರೇ ರಚಿಸಿ, ನಿರ್ದೇಶಿಸುತ್ತಿದ್ದಾರೆ. ನಗರಪ್ರದೇಶದಲ್ಲಿ ಒಬ್ಬಂಟಿ ಜೀವನ ನಡೆಸುತ್ತಿರುವ ಹೆಣ್ಣುಮಕ್ಕಳಿಗೆ ಈ ಚಿತ್ರದಿಂದ ಒಳ್ಳೆಯ ಸಂದೇಶ ದೊರೆಯಲಿದೆ ಅಲ್ಲದೆ ಸ್ಪೂರ್ತಿಉಅನ್ನು ತುಂಬಲಿದೆ ಎಂದು ಪಾವನಾ ವಿಶ್ವಾಸ ವ್ಯಕ್ತಪಡಿಸಿದ್ದಾರೆ.

ಚಿತ್ರಕಥೆಯನ್ನು ಅವರು ಮತ್ತು ಪತ್ರಕರ್ತ ಲೇಖಕ ಶಂಕರ ಪಾಗೋಜಿ ಜೊತೆಯಾಗಿ ರಚಿಸಿದ್ದಾರೆ. ಭರತ್ ನಾಯ್ಕ್ ಈ ಸಿನಿಮಾಗೆ ಸಂಗೀತ ನೀಡಿದ್ದಾರೆ. ಕರುಣಾಕರ್ ಈ ಸಿನಿಮಾದ ನಿರ್ಮಾಪಕರು. ಡಿಸೆಂಬರ್ ಅಂತ್ಯದ ವೇಳೆ ಇನ್ ಸಿನಿಮಾವನ್ನು ಬಿಡುಗಡೆಗೊಳಿಸುವ ಇರಾದೆ ಚಿತ್ರತಂಡದ್ದು.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಇತಿಹಾಸ ಕಲಿಯಬೇಕಿದ್ದರೆ ಕಾಲೇಜಿಗೆ ಹೋಗುತ್ತಾರೆ, ನಿಮ್ಮ ಬೋಧನೆಯ ಅಗತ್ಯವಿಲ್ಲ: ಪ್ರಧಾನಿ ಮೋದಿ ವಿರುದ್ಧ ಪ್ರಿಯಾಂಕ್ ಖರ್ಗೆ ವಾಗ್ದಾಳಿ

MGNREGA Row: ಯಾವಾಗ-ಎಲ್ಲಿ ಬೇಕಾದರೂ ಚರ್ಚೆಗೆ ಸಿದ್ಧ, ಡೈಲಾಗ್‌ ವೀರ HDK ಬಂದರೆ ಒಳ್ಳೆಯದು; ಡಿ.ಕೆ.ಶಿವಕುಮಾರ್

Positive Vibes ಗಾಗಿ ಮನೆಯಲ್ಲಿ ಯಾವ ಗಿಡ ಬೆಳಸಬೇಕು: ಮುಳ್ಳಿನ ಗಿಡಗಳಲ್ಲಿದೆಯೇ ನಕರಾತ್ಮಕ ಶಕ್ತಿ; ಮಲ್ಲಿಗೆ ಮತ್ತು ತುಳಸಿಗೆ ಸೂಕ್ತ ಸ್ಥಳ ಯಾವುದು?

ಬೆಂಗಳೂರು: 6 ವರ್ಷದ ಬಾಲಕಿ ಅಪಹರಿಸಿ ಹತ್ಯೆ ; ಕೊಲೆಗೂ ಮುನ್ನ ಲೈಂಗಿಕ ದೌರ್ಜನ್ಯ - ಶವ ಪರೀಕ್ಷೆ ವೇಳೆ ಸತ್ಯ ಬಹಿರಂಗ!

ಮಹಿಳಾ ಟೆಕ್ಕಿ ಸಾವಿನ ಕೇಸ್ ಗೆ ಬಿಗ್ ಟ್ವಿಸ್ಟ್: ಹತ್ಯೆಗೂ ಮುನ್ನ PU ವಿದ್ಯಾರ್ಥಿಯಿಂದ ರೇಪ್; ಸಾಕ್ಷಿ ನಾಶಕ್ಕೆ ಬೆಂಕಿ ಹಚ್ಚಿದ ಕರ್ನಲ್ ಕುರೈ!

SCROLL FOR NEXT