ದಿಗಂತ್ ಮತ್ತು ತರುಣ್ ಚಂದ್ರ 
ಸಿನಿಮಾ ಸುದ್ದಿ

ಆನಂದ್ ಮಿಶ್ರಾ ಚೊಚ್ಚಲ ನಿರ್ದೇಶನ ಥ್ರಿಲ್ಲರ್ ಸಿನಿಮಾದಲ್ಲಿ ದಿಗಂತ್- ತರುಣ್ ಚಂದ್ರ!

ಗಾಳಿಪಟ ನಟ ದಿಗಂತ್ ಮತ್ತು ಲವ್ ಗುರು ನಾಯಕ ತರುಣ್ ಚಂದ್ರ ಆನಂದ್ ಮಿಶ್ರಾ ಚೊಚ್ಚಲ ನಿರ್ದೇಶನದ ಥ್ರಿಲ್ಲರ್ ಸಿನಿಮಾದಲ್ಲಿ ಅಭಿನಯಿಸಲಿದ್ದಾರೆ.

ಗಾಳಿಪಟ ನಟ ದಿಗಂತ್ ಮತ್ತು ಲವ್ ಗುರು ನಾಯಕ ತರುಣ್ ಚಂದ್ರ ಆನಂದ್ ಮಿಶ್ರಾ ಚೊಚ್ಚಲ ನಿರ್ದೇಶನದ ಥ್ರಿಲ್ಲರ್ ಸಿನಿಮಾದಲ್ಲಿ ಅಭಿನಯಿಸಲಿದ್ದಾರೆ.

ಸದ್ಯಕ್ಕೆ ಸಿನಿಮಾಗೆ ಟ್ರಿನ್ ಟ್ರಿನ್ ಎಂಬ ತಾತ್ಕಾಲಿಕ ಟೈಟಲ್ ಇಡಲಾಗಿದೆ. ಕೊರಿಯನ್ ಮತ್ತು ಹಾಲಿವುಡ್ ಚಲನಚಿತ್ರಗಳಿಂದ ಪ್ರಬಾವಿತರಾಗಿ ಸಿನಿಮಾ ಕಥೆ ಬರೆದಿರುವುದಾಗಿ ನಿರ್ದೇಶಕ ಆನಂದ್ ಮಿಶ್ರಾ ತಿಳಿಸಿದ್ದಾರೆ.

ಮುಂಬಯಿ ಮೂಲದ ಆನಂದ್ ಹಲವು ರಿಯಾಲಿಟಿ ಶೋ ಗಳನ್ನುನಿರ್ಮಿಸಿದ್ದಾರೆ. ವಿವಿಧ ಚಾನೆಲ್ ಗಳಿಗೆ ಕಾರ್ಯಕ್ರಮ ನಿರ್ಮಿಸಿ ಕೊಟ್ಟಿದ್ದಾರೆ. ಬಾಲಿವುಡ್ ಗೆ ಕೆಲವು ಮ್ಯೂಸಿಕ್ ವಿಡಿಯೋಗಳು, ವಾಣಿಜ್ಯ ಜಾಹೀರಾತು, ಮತ್ತು ಸಣ್ಣಕತೆಗಳನ್ನು ನಿರ್ದೇಶಿಸಿದ್ದಾರೆ.

ನಿರ್ಮಾಪಕ ಕಮರ್ ಅವರು ತಮ್ಮ ಹೋಮ್ ಬ್ಯಾನರ್ ಕಮರ್ ಫ್ಯಾಕ್ಟರಿ ಅಡಿಯಲ್ಲಿ ಪ್ರಾಜೆಕ್ಟ್ ನಿರ್ಮಿಸುತ್ತಿದ್ದಾರೆ. "ಇದು ಕಮರ್ ಅವರೊಂದಿಗಿನ ನನ್ನ ಮೊದಲ ಚಿತ್ರವಾಗಿದೆ, ಆದರೆ, ನಾನು ಈ ಹಿಂದೆ ಒಂದೆರಡು  ಶೋಗಳಿಂದಾಗಿ ನಿರ್ಮಾಪಕರೊಂದಿಗೆ ಸಂಬಂಧ ಹೊಂದಿದ್ದೇನೆ  ಎಂದು ಆನಂದ್ ತಿಳಿಸಿದ್ದಾರೆ.

ಬಾಕ್ಸ್ ಕ್ರಿಕೆಟ್ ಲೀಗ್ ಮತ್ತು ಇಂಡಿಯನ್ ಬೌಲಿಂಗ್ ಲೀಗ್, ಇದರಲ್ಲಿ ಕನ್ನಡದ ವಿವಿಧ ಕಲಾವಿದರು ಮತ್ತು ಸ್ಟಾರ್ ಗಳು ಭಾಗವಹಿಸಿದ್ದರು. ಸ್ಯಾಂಡಲ್‌ವುಡ್ ನನಗೆ ಹೊಸದಲ್ಲ ಎಂದು ತಿಳಿಸಿದ್ದಾರೆ.

ಜನವರಿ ಮದ್ಯದಲ್ಲಿ ಸಿನಿಮಾ ಆರಂಭಿಸಲು ನಿರ್ದೇಶಕರು ಪಲಾನ್ ಮಾಡಿದ್ದಾರೆ. ಸದ್ಯ ಸಿನಿಮಾಗಾಗಿ ಸಿದ್ಧತೆ ನಡೆಸಿಕೊಳ್ಳುತ್ತಿದ್ದಾರೆ. ಎಚ್ .ಸಿ ವೇಣು ಛಾಯಾಗ್ರಹಣವಿದ್ದು, ಆನಂದ್ ರಾಜಾ ವಿಕ್ರಮ್ ಸಂಗೀತ ನೀಡಲಿದ್ದಾರೆ.

ಮಾರಿಗೋಲ್ಡ್, ಗಾಳಿಪಟ 2, ಹುಟ್ಟುಹಬ್ಬದ ಶುಭಾಷಯಗಳು, ಮತ್ತು ನಿಮ್ಮ ಖಾತೆಯಲ್ಲಿ ಹಣವಿಲ್ಲ ಚಿತ್ರಗಳ ಚಿತ್ರೀಕರಣ ಮುಗಿಸಿರುವ ದಿಗಂತ್ ಈಗ ಬಿಡುಗಡೆಗೆ ಕಾಯುತ್ತಿದ್ದಾರೆ.

ತೆಲುಗು ಚಿತ್ರದ ಕನ್ನಡ ರಿಮೇಕ್ ಎವಾರುಗಾಗಿ  ದಿಗಂತ್ ಸದ್ಯ ಬ್ಯುಸಿಯಾಗಿದ್ದಾರೆ. ಗೋವಾ ಚಿತ್ರದಲ್ಲಿ (2015) ಕೊನೆಯದಾಗಿ ಕಾಣಿಸಿಕೊಂಡಿದ್ದ ತರುಣ್ ಚಂದ್ರ, ಕೆಲವು ವರ್ಷಗಳಿಂದ ಯಾವುದೇ ಸಿನಿಮಾಗಳಲ್ಲಿ ನಟಿಸಿರಲಿಲ್ಲ. ಆನಂದ್ ಮಿಶ್ರಾ ಅವರ ಟ್ರಿನ್ ಟ್ರಿನ್ ಮೂಲಕ ಪುನರಾಗಮಿಸುತ್ತಿದ್ದಾರೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಅಮೆರಿಕ ನಿಯೋಜಿತ ರಾಯಭಾರಿ ಸೆರ್ಗಿಯೊ ಗೋರ್- ಮೋದಿ, ಜೈಶಂಕರ್ ಭೇಟಿ; Tariff ಒತ್ತಡದ ನಡುವೆ ಭಾರತ-ಅಮೆರಿಕ ಸಂಬಂಧ ಸುಧಾರಣೆಯ ಸೂಚನೆ?

ಅಫ್ಘಾನಿಸ್ತಾನ ನಮ್ಮೊಂದಿಗೆ ಗಡಿ ಹಂಚಿಕೊಂಡಿರುವ ನೆರೆ ರಾಷ್ಟ್ರ- S Jaishankar; ಭಾರತದೊಂದಿಗೆ POK ವಿಲೀನದ ಸುಳಿವು; ಚೀನಾಗೂ ಶಾಕ್!

ಅಬ್ಬಬ್ಬಾ ರೋಮಾಂಚನ: ಅದ್ಭುತ ಸೃಷ್ಟಿಸಿದ ರಿಷಬ್ ಶೆಟ್ಟಿಗೆ ರಾಷ್ಟ್ರಪ್ರಶಸ್ತಿ ಕೊಡಲೇಬೇಕು - ತಮಿಳು ನಿರ್ದೇಶಕ ಅಟ್ಲೀ

Pakistan: ಇಸ್ರೇಲ್ ವಿರೋಧಿ ಪ್ರತಿಭಟನಾ ಜಾಥಾ, ಪೋಲೀಸರ ಗುಂಡೇಟಿಗೆ 11 ಮಂದಿ ಬಲಿ! Video

ಉತ್ತರ ಪ್ರದೇಶಕ್ಕೆ ಭೇಟಿ ನೀಡಿದ ತಾಲಿಬಾನ್ ಸಚಿವನಿಗೆ ಅದ್ಧೂರಿ ಸ್ವಾಗತ, ಸರ್ಕಾರದ ಭದ್ರತೆ; ಯೋಗಿಗೆ ನಾಚಿಕೆಯಾಗಬೇಕು- SP ಸಂಸದ ಶಫೀಕರ್

SCROLL FOR NEXT