ಸ್ಯಾಂಡಲ್ ವುಡ್ ನಟ ಪ್ರಮೋದ್. 
ಸಿನಿಮಾ ಸುದ್ದಿ

ಉತ್ತಮ ಕೆಲಸಕ್ಕೆ ಪ್ರಕೃತಿಯು ಸಹಾಯ ಮಾಡುತ್ತದೆ ಎಂದ ಪ್ರಮೋದ್; ಸಲಾರ್ ಬಗ್ಗೆ ಹೇಳಿದ್ದೇನು:

ನಟ ಪ್ರಮೋದ್ ಕೇವಲ ಐದು ಚಿತ್ರಗಳಲ್ಲಿ ನಟಿಸಿದ್ದರೂ, ಅವರು ಯಾವಾಗಲೂ ನಟನೆಯ ಉತ್ಸಾಹವನ್ನು ಹೊಂದಿರುವ ನಟರಲ್ಲಿ ಒಬ್ಬರು.

ನಟ ಪ್ರಮೋದ್ ಕೇವಲ ಐದು ಚಿತ್ರಗಳಲ್ಲಿ ನಟಿಸಿದ್ದರೂ, ಅವರು ಯಾವಾಗಲೂ ನಟನೆಯ ಉತ್ಸಾಹವನ್ನು ಹೊಂದಿರುವ ನಟರಲ್ಲಿ ಒಬ್ಬರು.

ನಾಟಕ, ನಟನೆ ಮತ್ತು ನೃತ್ಯ ಸಂಯೋಜನೆಯನ್ನು ಶಾಲಾ ದಿನಗಳಿಂದಲೂ ನಾನು ಆನಂದಿಸುತ್ತಿದ್ದೆ ಮತ್ತು ಕೆಲವು ಕಥೆಗಳನ್ನು ಬರೆಯುತ್ತಿದ್ದೆ ಮತ್ತು ನಾಟಕಗಳನ್ನು ಪ್ರದರ್ಶಿಸುತ್ತಿದ್ದೆ. ಬಯೋಟೆಕ್‌ನಲ್ಲಿ ಬಿಎಸ್‌ಸಿ ಮಾಡಿದ ನಂತರ, ನಟನಾಗುವ ನನ್ನ ಉತ್ಸಾಹ ದೃಢವಾಗಿತ್ತು. ನಾನು ಬೆನಕ ಥಿಯೇಟರ್ ಗ್ರೂಪ್‌ಗೆ ಸೇರಿಕೊಂಡೆ ಮತ್ತು ನಂತರ ಸಣ್ಣ ಪರದೆಯನ್ನು ಸೇರಿಕೊಂಡೆ, ಅಲ್ಲಿ ನಾನು ಸುಮಾರು 16 ಧಾರಾವಾಹಿಗಳಲ್ಲಿ ನಟಿಸಿದೆ. ದೊಡ್ಡ ಪರದೆಯತ್ತ ಸಾಗುವ ನನ್ನ ಕನಸು ಗೀತಾ ಬ್ಯಾಂಗಲ್ ಸ್ಟೋರ್ಸ್‌ನೊಂದಿಗೆ ಸಂಭವಿಸಿತು. ಚಿತ್ರವು ಉತ್ತಮವಾಗಿ ಯಶಸ್ಸು ಕಾಣದಿದ್ದರೂ, ನನ್ನ ಅಭಿನಯವು ಗಮನ ಸೆಳೆಯಿತು. ನಂತರ, ಪ್ರೀಮಿಯರ್ ಪದ್ಮಿನಿ ಚಿತ್ರದಲ್ಲಿ ನಟಿಸಲು ಅವಕಾಶ ಸಿಕ್ಕಿತು ಮತ್ತು ನಂತರ 'ಮತ್ತೆ ಉದ್ಭವ' ಸಿನಿಮಾವಾಯಿತು ಎಂದು ಪ್ರಮೋದ್ ಹೇಳುತ್ತಾರೆ.

ಡಾಸಿ ಧನಂಜಯ್ ಅಭಿನಯದ ರೋಹಿತ್ ಪದಕಿ ನಿರ್ದೇಶನದ ರತ್ನನ್ ಪ್ರಪಂಚ ಸಿನಿಮಾ ಪ್ರಮೋದ್ ಅವರಿಗೆ ದೊಡ್ಡ ಬ್ರೇಕ್ ನೀಡಿತು. 'ಆ ಚಿತ್ರದ ಯಶಸ್ಸು ನನಗೆ ಬಾಂಡ್ ರವಿ ಸೇರಿದಂತೆ ಸಾಕಷ್ಟು ಅವಕಾಶಗಳನ್ನು ನೀಡಿತು ಮತ್ತು ಸಹಜವಾಗಿ, ಪ್ರಶಾಂತ್ ನೀಲ್ ಅವರ ಸಲಾರ್ ಸಿನಿಮಾದಲ್ಲಿಯೂ ನಾನು ಪ್ರಮುಖ ಪಾತ್ರದಲ್ಲಿ ನಟಿಸಲಿದ್ದೇನೆ ಎಂದರು.

ಬಾಂಡ್ ರವಿ ಡಿಸೆಂಬರ್ 9 ರಂದು ಬಿಡುಗಡೆಯಾಗಲಿದ್ದು, ಚಿತ್ರವು ಕಂಟೆಂಟ್-ಆಧಾರಿತ ಕಮರ್ಷಿಯಲ್ ಸಿನಿಮಾವಾಗಿದೆ. ಇದು ಹಿಂದೆಂದೂ ಹೇಳಿರದ ಪ್ರೇಮಕಥೆಯನ್ನು ತೋರಿಸುತ್ತದೆ. ಕನಿಷ್ಠ ಇತ್ತೀಚಿನ ದಿನಗಳಲ್ಲಿ ನಾನು ಕೇಳಿಲ್ಲ. ನಾನು ನಿರ್ವಹಿಸಿದ ಜೈಲು ಹಕ್ಕಿಯ ಪಾತ್ರವೂ ವಿಶಿಷ್ಟವಾಗಿದೆ. ಭಾವನೆಗಳು, ಆಕ್ಷನ್, ಪ್ರೀತಿ ಮತ್ತು ನಾಟಕದ ಅಂಶಗಳು ಬಾಂಡ್ ರವಿಯನ್ನು ಸಂಪೂರ್ಣ ಮನರಂಜನೆ ಮತ್ತು ವಾಸ್ತವಕ್ಕೆ ಹತ್ತಿರವಾಗಿಸುತ್ತದೆ ಎನ್ನುತ್ತಾರೆ ಪ್ರಮೋದ್.

ಬಾಂಡ್ ರವಿಯ ಹೊರತಾಗಿ ಬಿಡುಗಡೆಗೆ ಸಿದ್ಧವಾಗಿರುವ ಇಂಗ್ಲಿಷ್ ಮಂಜ ಮತ್ತು ಮಲ್ಟಿಸ್ಟಾರರ್ 'ಭುವನಂ ಗಗನಂ' ಸಿನಿಮಾದಲ್ಲಿ ಕೂಡ ಪ್ರಮೋದ್ ನಟಿಸಿದ್ದಾರೆ. ಪ್ರಭಾಸ್ ನಾಯಕನಾಗಿ ನಟಿಸಿರುವ ಸಲಾರ್ ಕುರಿತು ಮಾತನಾಡುತ್ತಾ, ಇದು ನನಗೆ ಸಿಕ್ಕಿದ 'ದೊಡ್ಡ ಅವಕಾಶ'. ಒಳ್ಳೆಯತನ ಮತ್ತು ಕಠಿಣ ಪರಿಶ್ರಮವು ಒಂದು ಹಂತದಲ್ಲಿ ಖಂಡಿತವಾಗಿಯೂ ಫಲ ನೀಡುತ್ತದೆ ಎಂದು ನಾನು ಯಾವಾಗಲೂ ನಂಬಿದ್ದೇನೆ. ಆದರೆ, ಉದ್ಯಮದಲ್ಲಿ ಉಳಿಯುವ ಮಹತ್ವವನ್ನು ನಾನು ಅರ್ಥಮಾಡಿಕೊಂಡಿದ್ದೇನೆ. ಮತ್ತು ಸಿನಿಮಾದಲ್ಲಿ ಉಳಿಯಲು ಇತರ ಗಿಮಿಕ್‌ಗಳನ್ನು ಕಲಿಯುವುದು ಅತ್ಯಗತ್ಯ. ಆದರೆ, ರತ್ನನ್ ಪ್ರಪಂಚದೊಂದಿಗೆ ನಾನು ನನ್ನ ಮೊದಲ ನಂಬಿಕೆಗೆ ಹಿಂತಿರುಗಿದೆ ಮತ್ತು ಪ್ರಕೃತಿಯು ಒಳ್ಳೆಯ ಕೆಲಸವನ್ನು ಬೆಂಬಲಿಸುತ್ತದೆ ಎಂದು ನಾನು ನಂಬುತ್ತೇನೆ.

ರತ್ನನ್ ಪ್ರಪಂಚ ಸಿನಿಮಾದಲ್ಲಿ ನಾನು ನಿರ್ವಹಿಸಿದ ಪಾತ್ರವು ಪ್ರಶಾಂತ್ ನೀಲ್ ಸೇರಿದಂತೆ ಅನೇಕರಿಗೆ ಇಷ್ಟವಾಯಿತು. ಇದರಿಂದಲೇ ನನ್ನನ್ನು ಸಲಾರ್ ಚಿತ್ರದ ಪಾತ್ರಕ್ಕೆ ಆಯ್ಕೆ ಮಾಡಲು ಕಾಣವಾಯಿತು ಎನ್ನುತ್ತಾರೆ.

ನಾನು ಪ್ರಶಾಂತ್ ನೀಲ್ ಜೊತೆ ಕೆಲಸ ಮಾಡುತ್ತಿರುವೆ ಎಂಬುದೇ ಹೆಚ್ಚು ಮತ್ತು ನಾನು ಯಾವುದೇ ನಿರೀಕ್ಷೆಗಳಿಲ್ಲದೆ ಹೋದೆ. ಆದರೆ, ನನಗೆ ಬಂಪರ್ ಪಾತ್ರದ ಆಫರ್ ಬಂದಿದೆ. ಅದರಲ್ಲಿ ನನಗೆ ಪ್ರಮುಖ ಪಾತ್ರವಿದೆ. ಪ್ರಭಾಸ್ ಮತ್ತು ಪೃಥ್ವಿರಾಜ್ ಸುಕುಮಾರ್ ಅವರಂತಹ ಸೂಪರ್‌ಸ್ಟಾರ್‌ಗಳ ಜೊತೆ ನಟಿಸಲು ನನಗೆ ಅವಕಾಶವಿದೆ. ಕರ್ನಾಟಕವು ರತ್ನನ್ ಪ್ರಪಂಚದಲ್ಲಿ ನನ್ನನ್ನು ಗಮನಿಸಿದೆ. ಅಂತೆಯೇ, ಸಲಾರ್ ನನ್ನನ್ನು ಭಾರತದಾದ್ಯಂತ ಕೊಂಡೊಯ್ಯುತ್ತದೆ ಮತ್ತು ನನ್ನನ್ನು ಪ್ಯಾನ್ ಇಂಡಿಯಾ ಪ್ರೇಕ್ಷಕರಲ್ಲಿ ಕನಿಷ್ಠ ಶೇ 50 ರ ಜನರನ್ನು ತಲುಪಲು ಸಹಾಯ ಮಾಡುತ್ತದೆ. ಸಲಾರ್ ಖಂಡಿತವಾಗಿಯೂ ನನ್ನ ಚಲನಚಿತ್ರದ ವೃತ್ತಿಜೀವನವನ್ನು ಉನ್ನತೀಕರಿಸುತ್ತದೆ ಎಂದು ಅವರು ಹೇಳುತ್ತಾರೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಯುಕ್ರೇನ್-ರಷ್ಯಾ ಶಾಂತಿ ಒಪ್ಪಂದ ಸನಿಹ: ಸುಳಿವು ನೀಡಿದ ಯುಕ್ರೇನ್

2026 T20 ವಿಶ್ವಕಪ್: ಕೊಲಂಬೋದಲ್ಲಿ ಫೆ.15 ರಂದು ಭಾರತ- ಪಾಕ್ ಪಂದ್ಯ

ಕಾರು ಅಪಘಾತದಲ್ಲಿ ಐಎಎಸ್ ಅಧಿಕಾರಿ ಮಹಾಂತೇಶ್ ಬೀಳಗಿ ಸೇರಿ ಮೂವರು ಸಾವು: ಸಿಎಂ, ಡಿಸಿಎಂ ಸಂತಾಪ

CM ಬದಲಾವಣೆ ನಾಲ್ಕರಿಂದ ಐದು ಜನರ ನಡುವೆ ನಡೆದ "ರಹಸ್ಯ ಒಪ್ಪಂದ": ಡಿಕೆಶಿ​ ಸ್ಫೋಟಕ ಹೇಳಿಕೆ

ರಾಸಾಯನಿಕಗಳು, ಎಲೆಕ್ಟ್ರಾನಿಕ್ ಘಟಕಗಳ ಸುಲಭ ಲಭ್ಯತೆಯಿಂದ ಐಇಡಿ ಅಪಾಯ ಹೆಚ್ಚು: NSG

SCROLL FOR NEXT