ಕರಟಕ ದಮನಕ ಚಿತ್ರದ ಸ್ಟಿಲ್ 
ಸಿನಿಮಾ ಸುದ್ದಿ

‘ಕರಟಕ ದಮನಕ'ದಲ್ಲಿನ ನನ್ನ ಪಾತ್ರ ಈ ಹಿಂದೆ ಮಾಡಿದ್ದಕ್ಕಿಂತಲೂ ಭಿನ್ನವಾಗಿದೆ’: ಪ್ರಿಯಾ ಆನಂದ್

ಪುನೀತ್ ರಾಜ್‌ಕುಮಾರ್ ಅಭಿನಯದ ಜೇಮ್ಸ್ ಚಿತ್ರದಲ್ಲಿ ಕೊನೆಯ ಬಾರಿಗೆ ಕಾಣಿಸಿಕೊಂಡಿದ್ದ ಬಹುಭಾಷಾ ನಟಿ ಪ್ರಿಯಾ ಆನಂದ್ ಇದೀಗ ಯೋಗರಾಜ್ ಭಟ್ ಅವರ ಕರಟಕ ದಮನಕ ಸಿನಿಮಾದಲ್ಲಿ ನಟಿಸಿದ್ದಾರೆ.

ಪುನೀತ್ ರಾಜ್‌ಕುಮಾರ್ ಅಭಿನಯದ ಜೇಮ್ಸ್ ಚಿತ್ರದಲ್ಲಿ ಕೊನೆಯ ಬಾರಿಗೆ ಕಾಣಿಸಿಕೊಂಡಿದ್ದ ಬಹುಭಾಷಾ ನಟಿ ಪ್ರಿಯಾ ಆನಂದ್ ಇದೀಗ ಯೋಗರಾಜ್ ಭಟ್ ಅವರ ಕರಟಕ ದಮನಕ ಸಿನಿಮಾದಲ್ಲಿ ನಟಿಸಿದ್ದಾರೆ. ಪ್ರಭುದೇವ ಮತ್ತು ನಿಶ್ವಿಕಾ ನಾಯ್ಡು ಜೊತೆಯಲ್ಲಿ ನಿರ್ದೇಶಕ ಮತ್ತು ಹ್ಯಾಟ್ರಿಕ್ ಹೀರೋ ಶಿವರಾಜಕುಮಾರ್ ಅವರೊಂದಿಗೆ ಪ್ರಿಯಾ ಆನಂದ್ ಅವರಿಗೆ ಇದು ಮೊದಲನೇ ಸಹಯೋಗ.

ಈ ಕುರಿತು ಮಾತನಾಡುವ ಪ್ರಿಯಾ, 'ಕರಟಕ ದಮನಕದಲ್ಲಿ ನನಗೆ ಸಾಕಷ್ಟು ‘ಮೊದಲುಗಳು’ ಇವೆ. ನಾನು ಈ ಮೊದಲು ಕೆಲಸ ಮಾಡಿದ ಛಾಯಾಗ್ರಾಹಕ ಸಂತೋಷ್ ರೈ ಪಾತಾಜೆ ಅವರನ್ನು ಹೊರತುಪಡಿಸಿ, ಹೊಸ ನಟರು ಮತ್ತು ನಿರ್ದೇಶಕರ ಜೊತೆ ಕೆಲಸ ಮಾಡುವುದು ಯಾವಾಗಲೂ ಆಸಕ್ತಿದಾಯಕವಾಗಿರುತ್ತದೆ. ಅವರ ಕೆಲಸದ ಬಗ್ಗೆ ತಿಳಿದಿದ್ದರೂ, ಅವರೊಂದಿಗೆ ಕೆಲಸ ಮಾಡುವುದು ಸಂಪೂರ್ಣ ಹೊಸ ದೃಷ್ಟಿಕೋನವನ್ನು ತರುತ್ತದೆ' ಎಂದರು.

ಕರಟಕ ದಮನಕ ಚಿತ್ರಕ್ಕಾಗಿ ನನ್ನನ್ನು ಸಂಪರ್ಕಿಸಿದಾಗ, ನಿರ್ದೇಶಕ ಯೋಗರಾಜ್ ಭಟ್ ಅವರನ್ನು ಭೇಟಿ ಮಾಡಲು ನಾನು ಹೆದರುತ್ತಿದ್ದೆ. ಅವರ ಮುಂಗಾರು ಮಳೆ ಚಿತ್ರವು ಭಾರತದಾದ್ಯಂತ ಭಾರಿ ಹಿಟ್ ಆಗಿತ್ತು ಮತ್ತು ಅವರ ವ್ಯಕ್ತಿತ್ವವು ನನಗೆ ಭಯ ಹುಟ್ಟಿಸುವಂತಿತ್ತು. ಬಳಿಕ ಯೋಗರಾಜ್ ಭಟ್ ಅವರು ಅದ್ಭುತವಾದ ಹಾಸ್ಯ ಪ್ರಜ್ಞೆಯನ್ನು ಹೊಂದಿರುವ ಅತ್ಯಂತ ಶಾಂತ ನಿರ್ದೇಶಕರಲ್ಲಿ ಒಬ್ಬರು ಎಂದು ನನಗೆ ಶೀಘ್ರದಲ್ಲೇ ತಿಳಿಯಿತು. ಇದು ಒತ್ತಡವನ್ನು ಕಡಿಮೆ ಮಾಡಲು ಸಹಾಯ ಮಾಡಿದೆ ಎನ್ನುತ್ತಾರೆ ಪ್ರಿಯಾ.

'ಕುಟುಂಬದ ಪ್ರೀತಿಯು ಎಲ್ಲರಿಗೂ ಹತ್ತಿರವಾಗುವಂತೆ ಮಾಡುತ್ತದೆ. ನನಗೆ ಪುನೀತ್ ರಾಜ್‌ಕುಮಾರ್ (ಅಪ್ಪು) ಅವರೊಂದಿಗೂ ಇದೇ ರೀತಿಯ ಅನುಭವವಾಗಿತ್ತು ಮತ್ತು ಶಿವರಾಜ್‌ಕುಮಾರ್‌ ಅವರಿಂದಲೂ ಅದೇ ಅನುಭವವನ್ನು ಪಡೆದುಕೊಂಡೆ. ರಾಕ್‌ಲೈನ್ ಪ್ರೊಡಕ್ಷನ್ಸ್‌ನಂತಹ ಬ್ಯಾನರ್‌ನಲ್ಲಿ ಕೆಲಸ ಮಾಡುವ ಅವಕಾಶವೂ ನನಗೆ ಸಿಕ್ಕಿತು. ಪ್ರಭುದೇವ ಅವರೊಂದಿಗೆ ತೆರೆ ಹಂಚಿಕೊಳ್ಳುವ ಅವಕಾಶವನ್ನು ಕಳೆದುಕೊಂಡಿದ್ದರೂ, ಅವರ ಕಾಮಿಕ್ ಟೈಮಿಂಗ್‌ನಿಂದ ನಾನು ಪ್ರಭಾವಿತಳಾಗಿದ್ದೆ ಮತ್ತು ಸೆಟ್‌ಗಳಲ್ಲಿ ಅವರ ಪ್ರದರ್ಶನವನ್ನು ನೋಡಿ ಆನಂದಿಸಿದೆ. ಭವಿಷ್ಯದಲ್ಲಿ ಅವರೊಂದಿಗೆ ಕೆಲಸ ಮಾಡುತ್ತೇನೆಂದು ಭಾವಿಸುತ್ತೇನೆ' ಎಂದು ಅವರು ಹೇಳುತ್ತಾರೆ.

'ಪ್ರತಿಯೊಬ್ಬ ನಟರು ತಮ್ಮ ವಿಶಿಷ್ಟ ಕೌಶಲ್ಯ ಮತ್ತು ಉಪಸ್ಥಿತಿಯನ್ನು ತೆರೆಯ ಮೇಲೆ ತರುತ್ತಾರೆ. ಅಂತಹ ಪ್ರತಿಭಾವಂತ ಸಹ-ನಟರ ಬಗ್ಗೆ ಪ್ರತಿಕ್ರಿಯಿಸುವುದು ಸಹಜವಾಗಿಯೇ ಕಾರ್ಯಕ್ಷಮತೆಯನ್ನು ಹೆಚ್ಚಿಸುತ್ತದೆ. ನಿಶ್ವಿಕಾ ನಾಯ್ಡು ಅವರು ಈ ಚಿತ್ರದ ಮೂಲಕ ನನ್ನ ಮೆಚ್ಚಿನವರಲ್ಲಿ ಒಬ್ಬರಾದರು. ಹೆಚ್ಚಿನ ಕನ್ನಡ ಮತ್ತು ಇತರ ಭಾಷೆಯ ಚಿತ್ರಗಳಲ್ಲಿಯೂ ಅವರನ್ನು ನೋಡಲು ನಾನು ಎದುರು ನೋಡುತ್ತಿದ್ದೇನೆ' ಎಂದು ಹೇಳುತ್ತಾರೆ.

ಕಮರ್ಷಿಯಲ್ ಎಂಟರ್‌ಟೈನರ್ ಸಿನಿಮಾಗಳ ಬಗ್ಗೆ ಮಾತನಾಡುವ ಪ್ರಿಯಾ, ನಾಯಕರಿಗೆ ಹೆಚ್ಚಿನ ಪ್ರಾಶಸ್ತ್ಯ ಸಿಗುವುದನ್ನು ಒಪ್ಪಿಕೊಳ್ಳುತ್ತಾರೆ. ಆದರೆ, ಸವಾಲನ್ನು ಸ್ವೀಕರಿಸುತ್ತಾರೆ. 'ಕನ್ನಡ ಚಿತ್ರರಂಗದಲ್ಲಿ ಕಮರ್ಷಿಯಲ್ ಚಿತ್ರಗಳು ಪ್ರೇಕ್ಷಕರಿಂದ ಕೆಲವು ನಿರೀಕ್ಷೆಗಳೊಂದಿಗೆ ಬರುತ್ತವೆ. ಅದರ ಹೊರತಾಗಿಯೂ, ಚಿತ್ರಕ್ಕೆ ನನ್ನ ಕಡೆಯಿಂದ ಅತ್ಯುತ್ತಮ ಕೊಡುಗೆ ನೀಡುವುದಕ್ಕೆ ನನಗೆ ಸಂತೋಷವಾಗಿದೆ. ಕರಟಕ ದಮನಕದಲ್ಲಿ ನನ್ನ ಪಾತ್ರವು ನಾನು ಈ ಮೊದಲು ಮಾಡಿದ್ದಕ್ಕಿಂತ ಭಿನ್ನವಾಗಿದೆ. ಬಿಸಿಲಿನಲ್ಲಿ ಉತ್ತರ ಕರ್ನಾಟಕದಲ್ಲಿ ಶೂಟಿಂಗ್ ಮಾಡಿದ್ದು ಒಂದು ವಿಶಿಷ್ಟ ಅನುಭವವಾಗಿದ್ದು, ಅದನ್ನು ನಾನು ಸಂಪೂರ್ಣವಾಗಿ ಆನಂದಿಸಿದೆ. ಮಾರ್ಚ್ 8 ರಂದು ಪ್ರೇಕ್ಷಕರೊಂದಿಗೆ ಬೆಳ್ಳಿತೆರೆಯಲ್ಲಿ ನೋಡಲು ನಾನು ಈಗ ಕಾಯುತ್ತಿದ್ದೇನೆ ಎಂದು ತಿಳಿಸುತ್ತಾರೆ.

'ಕನ್ನಡ ಚಲನಚಿತ್ರಗಳಲ್ಲಿ ಕೆಲಸ ಮಾಡುವುದು ನನಗೆ ಯಾವಾಗಲೂ ಅಸಂಖ್ಯಾತ ನೆನಪುಗಳನ್ನು ನೀಡಿದೆ. ಕರಟಕ ದಮನಕ ನಂತರ, ನಾನು ಇಲ್ಲಿ ಹೆಚ್ಚಿನ ಚಿತ್ರಗಳ ಭಾಗವಾಗಲು ಎದುರು ನೋಡುತ್ತಿದ್ದೇನೆ' ಎಂದು ಮಾತು ಮುಗಿಸುತ್ತಾರೆ ಪ್ರಿಯಾ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಭಾರತದ ನೆಲದಲ್ಲೇ ಸ್ತ್ರೀದ್ವೇಷ ಪ್ರದರ್ಶಿಸಿದ ತಾಲೀಬಾನ್ ವಿದೇಶಾಂಗ ಸಚಿವ!; ಸುದ್ದಿಗೋಷ್ಠಿಗೆ ಮಹಿಳೆಯರಿಗಿಲ್ಲ ಪ್ರವೇಶ; ಭುಗಿಲೆದ್ದ ಅಸಮಾಧಾನ!

'ನನ್ನ ಪ್ರಶಸ್ತಿ ಟ್ರಂಪ್‌ಗೆ ಸಮರ್ಪಿತ...' Noble ಶಾಂತಿ ಪ್ರಶಸ್ತಿ ಗೆದ್ದ ಬೆನ್ನಲ್ಲೇ ಮಾರಿಯಾ ಶಾಕಿಂಗ್ ಹೇಳಿಕೆ!

ಭಾರತದ ಹಿತಾಸಕ್ತಿಗಳ ವಿರುದ್ಧ ಅಫ್ಘಾನಿಸ್ತಾನ ನೆಲ ಬಳಕೆಯಾಗಲ್ಲ, ನೀವು ಆಟ ಆಡಬೇಡಿ- ಪಾಕಿಸ್ತಾನಕ್ಕೆ ಅಫ್ಘಾನ್ ವಿದೇಶಾಂಗ ಸಚಿವರ ನೇರ ಎಚ್ಚರಿಕೆ!

ಚಿಕ್ಕಬಳ್ಳಾಪುರ: 'Miss U Chinna'; ಅಪ್ರಾಪ್ತ ಪ್ರೇಯಸಿಯ ದುಪ್ಪಟ್ಟದಿಂದಲೇ ಯುವಕ ನೇಣಿಗೆ ಶರಣು; Instagram Post Viral

ಬೆಂಗಳೂರಿನಲ್ಲೊಂದು ಹೃದಯ ವಿದ್ರಾವಕ ಘಟನೆ: ಇಬ್ಬರು ಮಕ್ಕಳನ್ನು ಕೊಂದು ತಾಯಿ ಆತ್ಮಹತ್ಯೆ

SCROLL FOR NEXT