ಬಿಗ್ ಬಾಸ್ ಕನ್ನಡ 10ನೇ ಆವೃತ್ತಿಯಲ್ಲಿನ ಸ್ಪರ್ಧಿಗಳು 
ಸಿನಿಮಾ ಸುದ್ದಿ

ಬಿಗ್ ಬಾಸ್ ಕನ್ನಡ 10: ನಮ್ರತಾ ಗೌಡ ಹೊರಕ್ಕೆ; 6 ಸ್ಪರ್ಧಿಗಳು ಅಂತಿಮ ವಾರಕ್ಕೆ ಪ್ರವೇಶ!

ಕಲರ್ಸ್ ಕನ್ನಡ ವಾಹಿನಿಯಲ್ಲಿ ಮೂಡಿಬರುತ್ತಿರುವ ಜನಪ್ರಿಯ ರಿಯಾಲಿಟಿ ಶೋ 'ಬಿಗ್ ಬಾಸ್ ಕನ್ನಡ 10' ರಿಂದ ನಮ್ರತಾ ಗೌಡ ಅವರ ಪ್ರಯಾಣ ಈ ವಾರಾಂತ್ಯದಲ್ಲಿ ಕೊನೆಗೊಂಡಿದೆ. ವಾರದ ಮಧ್ಯಭಾಗದಲ್ಲಿ ತನಿಷಾ ಕುಪ್ಪಂಡ ಎಲಿಮಿನೇಟ್ ಆಗಿದ್ದರು. ಈಗ ನಮ್ರತಾ ಗೌಡ ಡೊಡ್ಮನೆಯಿಂದ ಹೊರಗೆ ಬಂದಿದ್ದು, ಆರು ಸ್ಪರ್ಧಿಗಳು ಅಂತಿಮ ವಾರಕ್ಕೆ ಪ್ರವೇಶಿಸಿದ್ದಾರೆ.  

ಕಲರ್ಸ್ ಕನ್ನಡ ವಾಹಿನಿಯಲ್ಲಿ ಮೂಡಿಬರುತ್ತಿರುವ ಜನಪ್ರಿಯ ರಿಯಾಲಿಟಿ ಶೋ 'ಬಿಗ್ ಬಾಸ್ ಕನ್ನಡ 10' ರಿಂದ ನಮ್ರತಾ ಗೌಡ ಅವರ ಪ್ರಯಾಣ ಈ ವಾರಾಂತ್ಯದಲ್ಲಿ ಕೊನೆಗೊಂಡಿದೆ. ವಾರದ ಮಧ್ಯಭಾಗದಲ್ಲಿ ತನಿಷಾ ಕುಪ್ಪಂಡ ಎಲಿಮಿನೇಟ್ ಆಗಿದ್ದರು. ಈಗ ನಮ್ರತಾ ಗೌಡ ಡೊಡ್ಮನೆಯಿಂದ ಹೊರಗೆ ಬಂದಿದ್ದು, ಆರು ಸ್ಪರ್ಧಿಗಳು ಅಂತಿಮ ವಾರಕ್ಕೆ ಪ್ರವೇಶಿಸಿದ್ದಾರೆ.  

ಈಗ ಸಂಗೀತಾ, ಪ್ರತಾಪ್, ವರ್ತೂರು ಸಂತೋಷ್, ಕಾರ್ತಿಕ್ ಮತ್ತು ತುಕಲಿ ಸಂತೋಷ್, ವಿನಯ್ ಫಿನಾಲೆ ವೀಕ್‌ಗೆ ಎಂಟ್ರಿ ಕೊಟ್ಟಿದ್ದಾರೆ. ವಾರದ ಮಧ್ಯದಲ್ಲಿ ಇವರಲ್ಲಿ ಒಬ್ಬರನ್ನು ಎಲಿಮಿನೇಟ್ ಮಾಡಲಾಗುತ್ತದೆ. ಅಂತಿಮವಾಗಿ ಐದು ಸ್ಪರ್ಧಿಗಳು ಫೈನಲ್ ಗೆ ಬರಲಿದ್ದಾರೆ.

ಕಳೆದ ವಾರ ನಮ್ರತಾ ಗೌಡ, ಡ್ರೋನ್ ಪ್ರತಾಪ್, ವರ್ತೂರು ಪ್ರಕಾಶ್, ವಿನಯ್ ಗೌಡ ಮತ್ತು ಕಾರ್ತಿಕ್ ಮಹೇಶ್ ಎಲಿಮಿನೇಷನ್ ಪರೀಕ್ಷೆ ಎದುರಿಸಿದರು. ಆದರೆ ಶನಿವಾರದ ಸಂಚಿಕೆಯಲ್ಲಿ, ವರ್ತೂರ್ ಸುರಕ್ಷಿತ ಘೋಷಿಸಲಾಯಿತು. ಬಳಿಕ ಭಾನುವಾರದ ಸಂಚಿಕೆಯಲ್ಲಿ ಪ್ರತಾಪ್, ಕಾರ್ತಿಕ್ ಅವರನ್ನು ಸುರಕ್ಷಿತ ಎಂದು ಘೋಷಿಸಿದ ಕಿಚ್ಚ ಸುದೀಪ್, ನಮ್ರತಾ ಗೌಡ ದೊಡ್ಮನೆಯಿಂದ ಹೊರಗೆ ಹೋಗುವ ವಿಷಯ ಖಚಿತಪಡಿಸಿದರು. 

ಈ ಮಧ್ಯೆ ಸಂಗೀತಾ ಮತ್ತು ಪ್ರತಾಪ್ ಫಿನಾಲೆಗೆ ಪ್ರವೇಶಿಸಲು ನೆಚ್ಚಿನವರು ಎಂದು ಟ್ರೆಂಡ್‌ಗಳು ಸೂಚಿಸುತ್ತವೆ. ವಿನಯ್, ಕಾರ್ತಿಕ್, ವರ್ತೂರ್ ಸಂತೋಷ್ ಮತ್ತು ತುಕಲಿ ಸಂತೋಷ್ ಅವರಲ್ಲಿ ಮೂವರು ಸ್ಪರ್ಧಿಗಳು ಆಟದ ಕೊನೆಯ ಹಂತಕ್ಕೆ ಪ್ರವೇಶಿಸಲಿದ್ದಾರೆ. 'ಬಿಗ್ ಬಾಸ್ ಕನ್ನಡ 10' ರ ಗ್ರ್ಯಾಂಡ್ ಫಿನಾಲೆ ಜನವರಿ 28 ರಂದು ನಡೆಯಲಿದೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

Gaza Hospital Strike: ಹಮಾಸ್ ಸೋಲಿಸುವುದಷ್ಟೇ ನಮ್ಮ ಗುರಿ, ನಾಗರೀಕರನ್ನು ಗೌರವಿಸುತ್ತೇವೆ; ಮೊದಲ ಬಾರಿಗೆ ದಾಳಿ ಕುರಿತು ಇಸ್ರೇಲ್ ವಿಷಾದ

ವಿಧಾನಪರಿಷತ್'ಗೆ ನಾಮನಿರ್ದೇಶನ: ನಾಲ್ವರು MLC ಅಭ್ಯರ್ಥಿಗಳು ಹೆಸರು ಬದಲು, ಪಟ್ಟಿಯಲ್ಲಿ TNIE ಮೈಸೂರು ವಿಭಾಗದ ಮುಖ್ಯಸ್ಥನಿಗೆ ಸ್ಥಾನ

ಬಾನು ಮುಷ್ತಾಕ್‌ ದಸರಾ ಉದ್ಘಾಟನೆಗೆ ಆಕ್ಷೇಪ; ಮುಸ್ಲಿಂ ದ್ವೇಷ ಮನಸ್ಥಿತಿಯನ್ನು ಬದಿಗಿಟ್ಟು, ಸಂವಿಧಾನದ ಆಶಯ ಅರ್ಥ ಮಾಡಿಕೊಳ್ಳಿ: ಸಚಿವ ಹೆಚ್.ಸಿ.ಮಹದೇವಪ್ಪ

ಚಾಮುಂಡೇಶ್ವರಿ ದೇವಿ ಬಗ್ಗೆ ಗೌರವವಿದ್ದು, ಧಾರ್ಮಿಕ ಭಾವನೆಗಳ ಗೌರವಿಸುತ್ತೇನೆ; ಬಾನು ಮುಷ್ತಾಕ್

JC ರಸ್ತೆಯಲ್ಲಿ White-topping ಕಾಮಗಾರಿ: ಆ.30ರವರೆಗೆ ಭಾರಿ ಗಾತ್ರದ ವಾಹನಗಳ ಸಂಚಾರಕ್ಕೆ ನಿರ್ಬಂಧ

SCROLL FOR NEXT