ಸಂಗ್ರಹ ಚಿತ್ರ 
ಕ್ರಿಕೆಟ್

ಗ್ರೇಗ್ ಚಾಪೆಲ್ ಸಂಚು ಬಯಲು ಮಾಡಿದ್ದ ವಿರೇಂದ್ರ ಸೆಹ್ವಾಗ್!

ಭಾರತೀಯ ಕ್ರಿಕೆಟ್ ಅನ್ನು ಹಾಳುಮಾಡಲು ಅಂದಿನ ಕೋಚ್ ಗ್ರೇಗ್ ಚಾಪೆಲ್ ನಡೆಸುತ್ತಿದ್ದ ಸಂಚನ್ನು ನಾನೇ ಮೊದಲು ಬಹಿರಂಗ ಮಾಡಿದ್ದೆ ಎಂದು ಮಾಜಿ ಕ್ರಿಕೆಟಿಗ ವಿರೇಂದ್ರ ಸೆಹ್ವಾಗ್ ಹೇಳಿದ್ದಾರೆ.

ನವದೆಹಲಿ: ಭಾರತೀಯ ಕ್ರಿಕೆಟ್ ಅನ್ನು ಹಾಳುಮಾಡಲು ಅಂದಿನ ಕೋಚ್ ಗ್ರೇಗ್ ಚಾಪೆಲ್ ನಡೆಸುತ್ತಿದ್ದ ಸಂಚನ್ನು ನಾನೇ ಮೊದಲು ಬಹಿರಂಗ ಮಾಡಿದ್ದೆ ಎಂದು ಮಾಜಿ ಕ್ರಿಕೆಟಿಗ ವಿರೇಂದ್ರ ಸೆಹ್ವಾಗ್ ಹೇಳಿದ್ದಾರೆ.
ಭಾರತ ತಂಡದ ಮಾಜಿ ಕೋಚ್ ಗ್ರೆಗ್ ಚಾಪೆಲ್ ಹಾಗೂ ಸೌರವ್ ಗಂಗೂಲಿ ಕಿತ್ತಾಟದ ಪ್ರಕರಣದ ಕುತೂಹಲಕಾರಿ ಸತ್ಯವನ್ನು ವೀರೇಂದ್ರ ಸೆಹ್ವಾಗ್ ಬಹಿರಂಗಗೊಳಿಸಿದ್ದಾರೆ. ದೆಹಲಿಯಲ್ಲಿ ನಡೆದ ಕಾರ್ಯಕ್ರಮದವೊಂದರಲ್ಲಿ ಪಾಲ್ಗೊಂಡು ಮಾತನಾಡಿದ ಸೆಹ್ವಾಗ್, ಸೌರವ್ ಗಂಗೂಲಿಯನ್ನು ತಂಡದಿಂದ ಹೊರಹಾಕಲು ಚಾಪೆಲ್ ನಡೆಸುತ್ತಿದ್ದ ಸಂಚಿನ ಬಗ್ಗೆ ಗಂಗೂಲಿಗೆ ಮಾಹಿತಿ ನೀಡಿದ್ದು ನಾನೇ ಎಂದು ಹೇಳಿಕೊಂಡಿದ್ದಾರೆ.
'ಜಿಂಬಾಬ್ವೆ ಪ್ರವಾಸದ ವೇಳೆ ನಾನು ಹೊಟ್ಟೆ ನೋವಿನ ಕಾರಣ ನೀಡಿ ಪದೇ ಪದೇ ಮೈದಾನ ತೊರೆದು ಪೆವಿಲಿಯನ್ ಗೆ ತೆರಳಿದೆ. ಆ ವೇಳೆ ಶೌಚಾಲಯದ ಬಳಿ ಚಾಪೆಲ್ ಬಿಸಿಸಿಐಗೆ ರಹಸ್ಯ ಈ-ಮೇಲ್ ಕಳುಹಿಸುತ್ತಿದ್ದನ್ನು ನೋಡಿದೆ. ಆದರೆ ಅದೇನು ಎಂದು ಸ್ಪಷ್ಟವಾಗಿ ಗೊತ್ತಾಗಲಿಲ್ಲ. ಮೈದಾನಕ್ಕೆ ವಾಪಸಾದ ಕೂಡಲೇ ಗಂಗೂಲಿಗೆ ಆ ಬಗ್ಗೆ ತಿಳಿಸಿ, ಚಾಪೆಲ್ ಅನುಮಾನ ಬರುವ ರೀತಿಯಲ್ಲಿ ಏನೋ ಮಾಡುತ್ತಿದ್ದಾರೆ ಎಂದು ಹೇಳಿದೆ' ಎಂದಿದ್ದಾರೆ.
ಆ ಪ್ರವಾಸದಲ್ಲೇ ಸೌರವ್ ಗಂಗೂಲಿಯನ್ನು ತಂಡದಿಂದ ಹೊರಹಾಕುವಲ್ಲಿ ಚಾಪೆಲ್ ಯಶಸ್ವಿಯಾಗಿದ್ದರು. ಗಂಗೂಲಿ ಮಾತ್ರವಲ್ಲ, ಸಚಿನ್ ತೆಂಡೂಲ್ಕರ್, ಹರ್ಭಜನ್ ಸಿಂಗ್, ಜಹೀರ್ ಖಾನ್ ಸಹ ಚಾಪೆಲ್ ಹೇಗೆ ಭಾರತೀಯ ಕ್ರಿಕೆಟ್ ಅನ್ನು ಹಾಳು ಮಾಡಿದರು ಎಂದು ಹಲವು ವೇದಿಕೆಗಳಲ್ಲಿ ವಿವರಿಸಿದ್ದಾರೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

'ಪಾಕಿಸ್ತಾನದೊಂದಿಗೆ ಯುದ್ಧ ನಿಲ್ಲಿಸಲು ಟ್ರಂಪ್ 24 ಗಂಟೆ ಕಾಲಾವಕಾಶ ನೀಡಿದ್ದರು, ಮೋದಿ ಕೇವಲ 5 ಗಂಟೆಗಳಲ್ಲಿ ಪಾಲಿಸಿದರು': ರಾಹುಲ್ ಗಾಂಧಿ

'ಧಮ್ ಇದ್ರೆ.. ಸನಾತನಧರ್ಮ, ಬಿಹಾರಿಗಳ ಕುರಿತ ಹೇಳಿಕೆ ಮತ್ತೆ ಹೇಳ್ತೀರಾ?': MK Stalin ಗೆ ಬಿಜೆಪಿ-ಜೆಡಿಯು ಸವಾಲು!

80 ಸಾವಿರ ಹಣವಿದ್ದ ಬ್ಯಾಗ್ ನಾಪತ್ತೆ, ಮೇಲಿಂದ ಕೋತಿಯಿಂದ ಹಣದ ಸುರಿಮಳೆ! Video

Dharmasthala: Mahesh Shetty Thimarodi ಮನೆ ಮಹಜರು, ಪತ್ನಿ-ಮಕ್ಕಳ ಮೊಬೈಲ್ ವಶಕ್ಕೆ, 3 ತಲ್ವಾರ್ ಕೂಡ ಪತ್ತೆ!

ಕಟ್ಟಡ ಕುಸಿತಕ್ಕೂ ಕೆಲವೇ ಕ್ಷಣಗಳ ಮುನ್ನ 22 CRPF ಸೈನಿಕರ ರಕ್ಷಣೆ; Indian Army ಹೆಲಿಕಾಪ್ಟರ್ ರೋಚಕ ಕಾರ್ಯಾಚರಣೆ! Video

SCROLL FOR NEXT