ಕೋಲ್ಕತ್ತಾ: "ಇನ್ನೊಬ್ಬ ಕಪಿಲ್ ದೇವ್ ಇರುವುದು ಅಸಾಧ್ಯ" ಭಾರತ ಕ್ರಿಕೆಟ್ ತಂಡದ ಮಾಜಿ ನಾಯಕ ಮೊಹಮ್ಮದ್ ಅಝರುದ್ದೀನ್ ಹೇಳಿದ್ದಾರೆ. ಭಾರತ ಕ್ರಿಕೆಟರ್ ಹಾರ್ದಿಕ್ ಪಾಂಡ್ಯ ಮತ್ತು ವಿಶ್ವಕಪ್ ವಿಜೇತ ತಂಡದ ನಾಯಕ ಕಪಿಲ್ ನಡುವೆ ಹೋಲಿಕೆಗಳಿದೆ ಎನ್ನುವ ಮಾತು ಕೇಳಿಬರುತ್ತಿರುವ ಹಿನ್ನೆಲೆಯಲ್ಲಿ ಅಝರುದ್ದೀನ್ ಈ ಮಾತು ಹೇಳಿದರು.
"ಕಪಿಲ್ ದೇವ್ ಗೆ ಯಾರನ್ನೂ ಹೋಲಿಸಲು ಸಾಧ್ಯವಿಲ್ಲ, ಏಕೆಂದರೆ ಮತ್ತೊಬ್ಬ ಕಪಿಲ್ ದೇವ್ ಆಗುವುದು ಕಠಿಣ. ಅವರು ಮಾಡಿದ್ದಂತೆ ದಿನವೊಂದಕ್ಕೆ 20-25 ಓವರ್ ಬೌಲ್ ಮಾಡುವುದು ಈಗಿನ ಬಹುತೇಕರಿಗೆ ಅಸಾಧ್ಯ" ಶಾಲಾ ಕಾರ್ಯಕ್ರಮವೊಂದರಲ್ಲಿ ಭಾಗವಹಿಸಿದ್ದ 54 ವರ್ಷದ ಭಾರತ ತಂಡದ ಮಾಜಿ ನಾಯಕ ಹೇಳಿದ್ದಾರೆ.
ದಕ್ಷಿಣ ಆಫ್ರಿಕಾ ವಿರುದ್ದದ ಟೆಸ್ಟ್ ಕುರಿತು ಮಾತನಾಡಿದ ಅವರು "ಕೊನೆಯ ಟೆಸ್ಟ್ ಪಂದ್ಯವನ್ನು ಬೌಲರ್ ಗಳು ಗೆದ್ದು ಕೊಟ್ಟಿದ್ದಾರೆ, ಅವರು ದಕ್ಷಿಣ ಆಫ್ರಿಕಾದ ಬ್ಯಾಟ್ಸ್ ಮನ್ ಗಳನ್ನು ಒತ್ತಡದಲ್ಲಿ ಸಿಲುಕಿಸಿದ್ದರು, ನಾವು ಸರಣಿಯನ್ನು ನಮ್ಮ ಕೈವಶ ಮಾಡಿಕೊಳ್ಳಲು ಸಾಧ್ಯವಾಗಿಲ್ಲದ್ದಕ್ಕೆ ನಾವು ನತದೃಷ್ಟರೆನ್ನಬೇಕು. ನಾವು ಕೊನೆಯ ಟೆಸ್ಟ್ ಗೆದ್ದಿದ್ದು ಒಳ್ಳೆಯ ಕಾರ್ಯವಾಗಿದ್ದು, ನಾವು ನಮ್ಮ ಪ್ರತಿಷ್ಠೆಯನ್ನು ಪುನಃ ಗಳಿಸಿಕಂಡಿದ್ದೇವೆ. ತಂಡವು ಉತ್ತಮ ಪ್ರದರ್ಶನ ನಿಡಿದ್ದು ವಿಕೆಟ್ ಕಬಳಿಸುವ ಮೂಲಕ ಪಂದ್ಯ ಜಯಿಸುವುದು ಅಷ್ಟೇನೂ ಸುಲಭವಾಗಿಲ್ಲ." ಅವರು ಹೇಳಿದ್ದಾರೆ.
"ನಮ್ಮ ತಂಡದ ಆಟದ ಬಗೆಗೆ ನನಗೆ ಅತ್ಯಂತ ಸಂತಸವಿದೆ. ನಮ್ಮ ಆಟಗಾರರು ಉತ್ತಮವಾಗಿ ಬ್ಯಾಟಿಂಗ್, ಬೌಲಿಂಗ್ ನಡೆಸಿದ್ದಾರೆ. ಮುಂದಿನ ಏಕದಿನ ಪಂದ್ಯದಲ್ಲಿ ನಮ್ಮವರು ಉತ್ತಮವಾಗಿ ಆಡುವುದಲ್ಲದೆ ಸರಣಿ ಗೆಲ್ಲುವರೆನ್ನುವ ವಿಶ್ವಾಸವಿದೆ." ಮೊಹಮ್ಮದ್ ಅಝರುದ್ದೀನ್ ಹೇಳಿದ್ದಾರೆ
ಭುವನೇಶ್ವರ ಕುಮಾರ್ ಹಾಗೂ ಅಜಿಂಕ್ಯ ರೆಹಾನೆ ಕುರಿತಂತೆ ಮಾತನಾಡಿದ ಮಾಜಿ ನಾಯಕ "ಅವರಿಗೆ ಅವಕಾಶ ನೀಡಬಹುದಿತ್ತು. ಅವರು ಆಡಬಹುದಿತ್ತು ಎಂದು ನಾನು ಭಾವಿಸುತ್ತೇನೆ, ಆದರೆ ನಾಯಕ ಮತ್ತು ಭಾರತ ಕ್ರಿಕೆಟ್ ತಂಡದ ಆಲೋಚನೆ ಬೇರೆಯಾಗಿದೆ. ಆದರೆ ದೇಶದ ಪ್ರತಿಯೊಬ್ಬರೂ ಅವರು ಆಡಬೇಕಾಗಿತ್ತು ಎಂದು ಭಾವಿಸುತ್ತಾರೆ" ಎಂದರು. ಹಾಗೆಯೇ ವಿರಾಟ್ ಕೊಹ್ಲಿ ನಾಯಕತ್ವದ ಕುರಿತೂ ಅವರು ಮೆಚ್ಚುಗೆ ಸೂಚಿಸಿದ್ದಾರೆ.
ಅಂಡರ್ 19 ವಿಶ್ವಕಪ್ ನಲ್ಲಿ ಭಾರತ ತಂಡ ಪಾಕಿಸ್ತಾನವನ್ನು ಬಗ್ಗು ಬಡಿದು ಫೈನಲ್ಸ್ ತಲುಪಿದ್ದು ನಾಲ್ಕನೇ ಬಾರಿಗೆ ಪ್ರಶಸ್ತಿ ಮುಡಿಗೇರಿಸಿಕೊಳ್ಳುವ ವಿಶ್ವಾಸವಿದೆ ಎಂದು ಅಝರುದ್ದೀನ್ ಹೇಳಿದ್ದಾರೆ. "ಎಲ್ಲಾ ಹುಡುಗರು ಅತ್ಯುತ್ತಮವಾಗಿ ಆಡಿದ್ದಾರೆ. ಅವರು ರಾಷ್ಟ್ರದ ಹೆಮ್ಮೆಯನ್ನು ಹೆಚ್ಚಿಸಿದ್ದಾರೆ. ಅವರು ವಿಶ್ವಕಪ್ ನೊಂದಿಗೆ ಮರಳಿ ಬರುತ್ತಾರೆ ಎಂದು ನಾನು ಭಾವಿಸುತ್ತೇನೆ"
ಶುಭಾನ್ ಗಿಲ್ ಮತ್ತು ಕಮಲೇಶ್ ನಾಗರ್ಕೋಟ್ ಐಪಿಎಲ್ ನಲ್ಲಿ ಆಡುವುದರ ಬಗೆಗೆ ಹೇಳಿದ್ದ ಅಅಝರುದ್ದೀನ್ "ಅವರು ಉತ್ತಮವಾಗಿ ಪ್ರದರ್ಶ್ನ ನೀಡುತ್ತಿರುವಾಗ ಅವರಿಗೆ ಅವಕಾಶಗಳನ್ನು ನೀಡುವುದು ಒಳ್ಳೆಯದು, ಪಾಂಡ್ಯ ಮತ್ತು ಬುಮ್ರಾ ಅವರನ್ನೊಮ್ಮೆ ನೋಡಿ." ಎಂದರು.
Follow KannadaPrabha channel on WhatsApp
Download the KannadaPrabha News app to follow the latest news updates
Subscribe and Receive exclusive content and updates on your favorite topics
Subscribe to KannadaPrabha YouTube Channel and watch Videos