ಕಪಿಲ್ ದೇವ್ 
ಕ್ರಿಕೆಟ್

ಮುಂಬೈಯಲ್ಲಿ ದುಬಾರಿ ಬಾಡಿಗೆ: ಬೆಂಗಳೂರಿನಲ್ಲಿ ಭಾರತೀಯ ಕ್ರಿಕೆಟಿಗರ ಸಂಘದ ಕಚೇರಿ ಸ್ಥಾಪನೆ ಸಾಧ್ಯತೆ 

ವಾಣಿಜ್ಯ ನಗರಿ ಮುಂಬೈಯಲ್ಲಿನ ಭಾರತೀಯ ಕ್ರಿಕೆಟಿಗರ ಸಂಘದ  ಕಚೇರಿಗಾಗಿ ದುಬಾರಿ ಬಾಡಿಗೆ ವ್ಯಯವಾಗುತ್ತಿರುವುದರಿಂದ ಬೆಂಗಳೂರಿನಲ್ಲಿ ಅದರ ಕಚೇರಿ ಸ್ಥಾಪನೆಯಾಗುವ ಸಾಧ್ಯತೆ ಇದೆ.

ಮುಂಬೈ: ವಾಣಿಜ್ಯ ನಗರಿ ಮುಂಬೈಯಲ್ಲಿನ ಭಾರತೀಯ ಕ್ರಿಕೆಟಿಗರ ಸಂಘದ  ಕಚೇರಿಗಾಗಿ ದುಬಾರಿ ಬಾಡಿಗೆ ವ್ಯಯವಾಗುತ್ತಿರುವುದರಿಂದ ಬೆಂಗಳೂರಿನಲ್ಲಿ ಅದರ ಕಚೇರಿ ಸ್ಥಾಪನೆಯಾಗುವ ಸಾಧ್ಯತೆ ಇದೆ.

ಸುಪ್ರೀಂ ಕೋರ್ಟ್ ನೇಮಕ ಮಾಡಿದ ಲೋಧಾ ಸಮಿತಿಯ ಶಿಫಾರಸುಗಳ ಪ್ರಕಾರ ರೂಪುಗೊಂಡ ಭಾರತದ ಮೊಟ್ಟಮೊದಲ ಆಟಗಾರರ ಸಂಘವಾದ ಐಸಿಎಗೆ ತನ್ನ ಕಾರ್ಯಾಚರಣೆಯನ್ನು ಆರಂಭಿಸಲು ಬಿಸಿಸಿಐ ಭಾನುವಾರ 2 ಕೋಟಿ ರೂಪಾಯಿಯನ್ನು ಬಿಡುಗಡೆ ಮಾಡಿದೆ.

ಮುಂಬೈಯಲ್ಲಿ ಕಚೇರಿಗಾಗಿ ದುಬಾರಿ ವೆಚ್ಚವಾಗುತ್ತಿದ್ದು, ಕಚೇರಿಗೆ ಸೂಕ್ತ ಜಾಗ ಸಿಗದೆ ಇರುವುದರಿಂದ ಮುಂದಿನ ಹತ್ತು- ಹದಿನೈದು ದಿನಗಳಲ್ಲಿ ಬೆಂಗಳೂರಿನಲ್ಲಿ ಕಚೇರಿಯನ್ನು ಸ್ಥಾಪಿಸಲು ಎದುರು ನೋಡಲಾಗುತ್ತಿದೆ ಎಂದು ಇಂದು ನಡೆದ ಸಭೆಯ ಬಳಿಕ ಭಾರತೀಯ ಕ್ರಿಕೆಟಿಗರ ಸಂಘದ ಅಧ್ಯಕ್ಷ ಅಶೋಕ್ ಮಲ್ಹೋತ್ರಾ ತಿಳಿಸಿದರು.

ಐಸಿಎ ತಾತ್ಕಾಲಿಕವಾಗಿ 15-20 ಕೋಟಿ ಬಜೆಟ್ ನ್ನು ಸಿದ್ಧಪಡಿಸಿತ್ತು. ಪ್ರಾಥಮಿಕ ಹಂತದಲ್ಲಿ 5 ಕೋಟಿ ಪಡೆಯಲು ಬಯಸಲಾಗಿತ್ತು. ಆದರೆ, 2 ಕೋಟಿಯನ್ನು ಪಡೆದುಕೊಂಡಿದೆ. ಖಜಾಂಚಿ ಕೃಷ್ಣಮೂರ್ತಿ ಬೆಂಗಳೂರು ಮೂಲದವರಾಗಿದ್ದು, ಪರ್ಯಾಯವಾಗಿ ಅಲ್ಲಿ ಕಚೇರಿ ಸ್ಥಾಪಿಸಲು ಐಸಿಎ ಮುಂದಾಗಿದೆ. 

ನಿಧಿ ಸಂಗ್ರಹ ಕುರಿತಂತೆ ಪ್ರತಿಕ್ರಿಯಿಸಿದ ಹಿರಿಯ ಅಧಿಕಾರಿಯೊಬ್ಬರು, ಸಭೆಯಲ್ಲಿ ಅನೇಕ ಮಾರ್ಗಗಳ ಕುರಿತಂತೆ ಚರ್ಚೆ ನಡೆಸಲಾಗಿದೆ. ಆದರೆ,  ಕಚೇರಿ ಸ್ಥಾಪನೆಗೆ ಕೆಲ ದಿನಗಳ ಅಗತ್ಯವಿರುವುದಾಗಿ ತಿಳಿಸಿದರು.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಇಬ್ಬರು ಕೇಂದ್ರ ಸಚಿವರು ಸೇರಿದಂತೆ 75 ಸದಸ್ಯರ GBA ಸೆ. 2 ರಿಂದ ಅಸ್ತಿತ್ವಕ್ಕೆ: ಯತೀಂದ್ರ ಸಿದ್ದರಾಮಯ್ಯಗೂ ಸ್ಥಾನ!

ಜಮ್ಮುವಿನಾದ್ಯಂತ ಭಾರಿ ಮಳೆ: ಅಪಾರ ಪ್ರಮಾಣದ ಹಾನಿ, 10 ಮಂದಿ ಸಾವು: ಕೊಚ್ಚಿ ಹೋದ ರಸ್ತೆ, ಸೇತುವೆಗಳು!

ಫೈಟರ್ ಜೆಟ್‌ ಇಂಜಿನ್ ಖರೀದಿ: ಅಮೆರಿಕಾದ GE ಸಂಸ್ಥೆಯೊಂದಿಗೆ $1 ಬಿಲಿಯನ್ ಮೊತ್ತದ ಒಪ್ಪಂದಕ್ಕೆ ಭಾರತ ಸಿದ್ಧತೆ!

ಡಿಕೆಶಿ ಕ್ಷಮೆ ಕೇಳಬಾರದಿತ್ತು; ಮುಲಾಜಿಲ್ಲದೆ ಕಾಂಗ್ರೆಸ್ ಪಕ್ಷದ ಸದಸ್ಯತ್ವಕ್ಕೆ ರಾಜೀನಾಮೆ ಬಿಸಾಕಬೇಕಿತ್ತು- ಆರ್. ಅಶೋಕ್

ಸುಂಕ ಸಮರ: Trump 4 ಬಾರಿ ಕರೆ ಮಾಡಿದರೂ ಉತ್ತರಿಸದ PM Modi; ಅಮೆರಿಕ ನಿಯೋಗಕ್ಕೂ No Entry!

SCROLL FOR NEXT