ಸ್ಮೃತಿ ಮಂಧಾನಾ 
ಕ್ರಿಕೆಟ್

'ಸ್ಮೃತಿ ಮಂಧಾನಾ ದೀರ್ಘಕಾಲದಿಂದ ಕಾಯುತ್ತಿದ್ದಾರೆ': ಏಕೆ ಕೆಳಗಿಳಿಯುತ್ತಿಲ್ಲ? ಎಂದು ಜನ ಕೇಳುವಂತಾಗದಿರಲಿ; ಭಾರತದ ಮಾಜಿ ಆಟಗಾರ್ತಿ!

ನಾಯಕತ್ವದ ಸುಗಮ ಹಸ್ತಾಂತರ ಖಚಿತಪಡಿಸಿಕೊಳ್ಳಲು, 30 ವರ್ಷದ ಮಂಧಾನಾ ಅವರಿಗೆ ನಾಯಕತ್ವದ ಜವಾಬ್ದಾರಿಯನ್ನು ವಹಿಸಬೇಕು ಮತ್ತು ಯುವ ಆಟಗಾರ್ತಿಯೊಬ್ಬರನ್ನು ಉಪನಾಯಕಿಯನ್ನಾಗಿ ನೇಮಿಸಬೇಕು ಎಂದರು.

ಭಾರತೀಯ ಮಹಿಳಾ ಕ್ರಿಕೆಟ್ ತಂಡದ ಮಾಜಿ ಆಟಗಾರ್ತಿ ಡಯಾನಾ ಎಡುಲ್ಜಿ, ಹರ್ಮನ್‌ಪ್ರೀತ್ ಕೌರ್ ಅವರಿಂದ ತಂಡದ ನಾಯಕತ್ವವನ್ನು ಸ್ಮೃತಿ ಮಂಧನಾ ವಹಿಸಿಕೊಳ್ಳಬೇಕು ಎಂದಿದ್ದಾರೆ. ಹರ್ಮನ್‌ಪ್ರೀತ್ ಅವರ ವಯಸ್ಸನ್ನು ಅವರು ಇದಕ್ಕೆ ಕಾರಣವಾಗಿ ಉಲ್ಲೇಖಿಸಿದ್ದಾರೆ. ಸದ್ಯ ಭಾರತ ತಂಡದ ನಾಯಕಿಯಾಗಿರುವ ಹರ್ಮನ್‌ಪ್ರೀತ್ ಅವರಿಗೆ 37 ವರ್ಷವಾಗಿದ್ದು, ಮುಂದಿನ ವಿಶ್ವಕಪ್ ನಡೆಯುವ ವೇಳೆಗೆ ಅವರಿಗೆ 40 ವರ್ಷ ಸಮೀಪಿಸಿರುತ್ತದೆ ಎಂದು ಎಡುಲ್ಜಿ ಗಮನಸೆಳೆದಿದ್ದಾರೆ.

ನಾಯಕತ್ವದ ಸುಗಮ ಹಸ್ತಾಂತರವನ್ನು ಖಚಿತಪಡಿಸಿಕೊಳ್ಳಲು, 30 ವರ್ಷದ ಮಂಧಾನಾ ಅವರಿಗೆ ನಾಯಕತ್ವದ ಜವಾಬ್ದಾರಿಯನ್ನು ವಹಿಸಬೇಕು ಮತ್ತು ಯುವ ಆಟಗಾರ್ತಿಯೊಬ್ಬರನ್ನು ಉಪನಾಯಕಿಯನ್ನಾಗಿ ನೇಮಿಸಬೇಕು ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ.

'ಸ್ಮೃತಿ ಮಂಧನಾ ಅವರು ನಾಯಕತ್ವಕ್ಕಾಗಿ ದೀರ್ಘಕಾಲದಿಂದ ಕಾಯುತ್ತಿದ್ದಾರೆ, ಹಾಗಾಗಿ ಈಗ ಅವರನ್ನು ನಾಯಕಿಯನ್ನಾಗಿ ಮಾಡಬೇಕು. ಮುಂದಿನ ವಿಶ್ವಕಪ್ ವೇಳೆಗೆ ಹರ್ಮನ್‌ಪ್ರೀತ್ ಕೌರ್ ಅವರಿಗೆ ಸುಮಾರು 40 ವರ್ಷ ವಯಸ್ಸಾಗಿರುತ್ತದೆ; ಆದ್ದರಿಂದ ಸ್ಮೃತಿಗೆ ದೀರ್ಘಕಾಲದವರೆಗೆ ನಾಯಕತ್ವದ ಜವಾಬ್ದಾರಿ ನೀಡುವುದು ಮತ್ತು ಇಬ್ಬರು ಯುವ ಆಟಗಾರ್ತಿಯರನ್ನು ಉಪನಾಯಕಿಯರನ್ನಾಗಿ ರೂಪಿಸುವುದು ಉತ್ತಮ. ಹರ್ಮನ್‌ಪ್ರೀತ್ ಅವರು ಅತ್ಯುತ್ತಮ ಸ್ಥಿತಿಯಲ್ಲಿರುವಾಗಲೇ ಘನತೆಯಿಂದ ಹುದ್ದೆಯಿಂದ ಕೆಳಗಿಳಿಯಬೇಕು; 'ಅವರು ಏಕೆ ಕೆಳಗಿಳಿಯುತ್ತಿಲ್ಲ?' ಎಂದು ಕೇಳುವ ಬದಲು ಜನರು 'ಅವರು ಏಕೆ ಕೆಳಗಿಳಿದರು?' ಎಂದು ಕೇಳುವಂತಾಗಬೇಕು' ಎಂದು ಎಡುಲ್ಜಿ 'ಮಿಡ್-ಡೇ'ಗೆ ತಿಳಿಸಿದರು.

ಮಹಿಳಾ ಟಿ20 ಕ್ರಿಕೆಟ್ ವೇಗವಾಗಿ ಬದಲಾಗುತ್ತಿರುವ ಈ ಸಂದರ್ಭದಲ್ಲಿ, ಭಾರತದ ಪ್ರಮುಖ ಬ್ಯಾಟರ್ ಮಂಧಾನಾ ಅವರ ಪರಿಷ್ಕೃತ 'ಪವರ್ ಗೇಮ್' ಮತ್ತು ಸ್ಪಿನ್ನರ್‌ಗಳ ವಿರುದ್ಧದ ಅವರ ಪ್ರಾಬಲ್ಯವು ಯುವ ಆಟಗಾರ್ತಿಯರಿಗೆ ಮಾದರಿಯಾಗಿದೆ ಎಂದು ಮಾಜಿ ನಾಯಕಿ ಅಂಜುಮ್ ಚೋಪ್ರಾ ಅಭಿಪ್ರಾಯಪಟ್ಟಿದ್ದಾರೆ.

ಇತ್ತೀಚೆಗೆ ಮುಕ್ತಾಯಗೊಂಡ ಏಷ್ಯಾ ಕಪ್‌ನಲ್ಲಿ, ಹಾಂಗ್ ಕಾಂಗ್ ವಿರುದ್ಧದ ಪಂದ್ಯದಲ್ಲಿ ಶತಕ ಸಿಡಿಸುವ ಮೂಲಕ ಮಂಧಾನಾ ಎಲ್ಲ ಮಾದರಿಯ ಕ್ರಿಕೆಟ್‌ನಲ್ಲಿ ಅತಿ ಹೆಚ್ಚು ರನ್ ಗಳಿಸಿದ ಆಟಗಾರ್ತಿಯರ ಪಟ್ಟಿಯಲ್ಲಿ ಅಗ್ರಸ್ಥಾನಕ್ಕೇರಿದರು ಹಾಗೂ ದಿಗ್ಗಜ ಆಟಗಾರ್ತಿ ಮಿಥಾಲಿ ರಾಜ್ ಅವರನ್ನು ಹಿಂದಿಕ್ಕಿದರು.

'ಕಳೆದ ಎರಡೂವರೆ ವರ್ಷಗಳಲ್ಲಿ ಅವರು ತನ್ನ 'ಪವರ್ ಗೇಮ್' ಅನ್ನು ಹೇಗೆ ಸುಧಾರಿಸಿಕೊಂಡಿದ್ದಾರೆ ಎಂಬುದನ್ನು ನೋಡುವುದು ನಿಜಕ್ಕೂ ಸಂತೋಷದಾಯಕ ವಿಷಯ. ಎಷ್ಟು ಸುಲಭವಾಗಿ ಮತ್ತು ಆತ್ಮವಿಶ್ವಾಸದಿಂದ ಅವರು ಚೆಂಡನ್ನು ಬೌಂಡರಿ ಆಚೆಗೆ ಕಳುಹಿಸುತ್ತಿದ್ದಾರೆ ಎಂಬುದು ಗಮನಾರ್ಹ; ಇದು ಅತ್ಯಂತ ಆಶಾದಾಯಕ ಬೆಳವಣಿಗೆಯಾಗಿದೆ' ಎಂದು ಚೋಪ್ರಾ ಸುದ್ದಿಸಂಸ್ಥೆ ಪಿಟಿಐ ಜೊತೆಗಿನ ಸಂಭಾಷಣೆಯಲ್ಲಿ ಹೇಳಿದರು.

'ಆಟಗಾರರು ತಮ್ಮ ಕೌಶಲವನ್ನು ಹೇಗೆ ಸುಧಾರಿಸಿಕೊಳ್ಳಬೇಕು ಎಂಬುದರ ಕುರಿತು ನಾವು ಈ ಹಿಂದೆ ಚರ್ಚಿಸುತ್ತಿದ್ದೆವು. ನನ್ನ ಪ್ರಕಾರ, ಇದಕ್ಕಾಗಿ ನೀವು ದೂರದ ಉದಾಹರಣೆಗಳನ್ನು ಹುಡುಕಬೇಕಿಲ್ಲ; ವಿಶೇಷವಾಗಿ ಮಧ್ಯಮ ಕ್ರಮಾಂಕದ ಆಟಗಾರರು ಅಥವಾ ತಂಡಕ್ಕೆ ಹೊಸದಾಗಿ ಸೇರ್ಪಡೆಯಾಗುತ್ತಿರುವ ಯುವ ಆಟಗಾರರ ವಿಷಯದಲ್ಲಿ ಇದು ಹೆಚ್ಚು ಪ್ರಸ್ತುತ. ಎರಡು ವರ್ಷಗಳ ಹಿಂದೆ ಸ್ಮೃತಿ ಟಿ20 ಅಥವಾ 50 ಓವರ್‌ಗಳ ಕ್ರಿಕೆಟ್ ಅನ್ನು ಹೇಗೆ ಆಡುತ್ತಿದ್ದರು ಮತ್ತು ಈಗ ಹೇಗೆ ಆಡುತ್ತಿದ್ದಾರೆ ಎಂಬುದನ್ನು ಗಮನಿಸಿ. ವಿಶೇಷವಾಗಿ ಸ್ಪಿನ್ನರ್‌ಗಳ ವಿರುದ್ಧ ಅವರ ಆಟದಲ್ಲಿ ಅಸಾಧಾರಣವಾದ ಪ್ರಾಬಲ್ಯ ಎದ್ದು ಕಾಣುತ್ತದೆ' ಎಂದರು.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

ದೀದಿ ಬಣಕ್ಕೆ ಫುಟ್‌ಬಾಲ್, ಬಂಡಾಯಗಾರರಿಗೆ ಲಕೋಟೆ: ಟಿಎಂಸಿ ಚಿಹ್ನೆ ಫ್ರೀಜ್ ಬೆನ್ನಲ್ಲೇ ಚುನಾವಣಾ ಆಯೋಗದಿಂದ ಮಹತ್ವದ ಆದೇಶ!

ಮಮತಾ ಬಣಕ್ಕೆ ಮತ್ತೊಂದು ಆಘಾತ; ನಾಮಪತ್ರ ವಾಪಸ್ ಪಡೆದ ನಂದಿಗ್ರಾಮ ಅಭ್ಯರ್ಥಿ!

ಪಾಕಿಸ್ತಾನ: ಖೈಬರ್ ಪಖ್ತುಂಕ್ವಾದ ಪೊಲೀಸ್ ಕೇಂದ್ರದ ಬಳಿ ಕಾರು ಬಾಂಬ್ ಸ್ಫೋಟ; 16 ಮಂದಿ ಸಾವು

ಶೀಘ್ರದಲ್ಲೇ ನಂದಿನಿ ಹಾಲಿನ ದರ ಹೆಚ್ಚಳ? ಲೀಟರ್‌ ಹಾಲಿಗೆ ₹8 ಏರಿಕೆಗೆ ಒಕ್ಕೂಟಗಳ ಪ್ರಸ್ತಾವನೆ!

TMC ಹೆಸರು, ಚಿಹ್ನೆ ಮುಟ್ಟುಗೋಲು: ಚುನಾವಣಾ ಆಯೋಗ ಆದೇಶಕ್ಕೆ ತೀವ್ರ ಆಕ್ರೋಶ; 'ಪ್ರತಿಭಟನೆಯೊಂದಿಗೆ' ಹೊಸ ಹೆಸರು, ಚಿಹ್ನೆ ಸಲ್ಲಿಸಿದ ಮಮತಾ ಬ್ಯಾನರ್ಜಿ!