ಸಾಂದರ್ಭಿಕ ಚಿತ್ರ 
ಜಿಲ್ಲಾ ಸುದ್ದಿ

ನಾಳೆ ಧಾರವಾಡದಲ್ಲಿ ಪ್ರಶಸ್ತಿ ವಾಪ್ಸಿ ಲೇಖಕರ ಸಮಾಗಮ

ಡಾ. ಎಂ.ಎಂ. ಕಲಬುರ್ಗಿ ಹತ್ಯೆ ನಂತರ ರಾಜ್ಯ ಹಾಗೂ ದೇಶಾದ್ಯಂತ ಪ್ರಶಸ್ತಿ ವಾಪ್ಸಿ ಚಳವಳಿಯಾಗಿ ರೂಪುಗೊಂಡಿದ್ದು, ಪ್ರಶಸ್ತಿಗಳನ್ನು ಮರಳಿಸಿದ ಲೇಖಕರ..

ಧಾರವಾಡ:  ಡಾ. ಎಂ.ಎಂ. ಕಲಬುರ್ಗಿ ಹತ್ಯೆ ನಂತರ ರಾಜ್ಯ  ಹಾಗೂ ದೇಶಾದ್ಯಂತ  ಪ್ರಶಸ್ತಿ ವಾಪ್ಸಿ ಚಳವಳಿಯಾಗಿ ರೂಪುಗೊಂಡಿದ್ದು, ಪ್ರಶಸ್ತಿಗಳನ್ನು ಮರಳಿಸಿದ ಲೇಖಕರ ಸಮಾಗಮ ಇದೇ ಮೊದಲ ಬಾರಿಗೆ ನ. 27ರಂದು ಧಾರವಾಡದಲ್ಲಿ ಆಗುತ್ತಿದೆ. ಡಾ. ಎಂ.ಎಂ. ಕಲಬುರ್ಗಿ ಹತ್ಯಾ ವಿರೋಧಿ ಹೋರಾಟ ವೇದಿಕೆ ನ. 27ರಂದು ಸಂಜೆ   5.30ಕ್ಕೆ ವಿದ್ಯಾವರ್ಧಕ ಸಂಘದಲ್ಲಿ ಹಮ್ಮಿಕೊಂಡಿರುವ `ಅಸಹಿಷ್ಣುತೆ ಮುಕ್ತ ಸಮಾಜದೆಡೆಗೆ ಸಂವಾದದಲ್ಲಿ ಪ್ರಶಸ್ತಿ ವಾಪಸ್  ಮಾಡಿದ ಮಹಾರಾಷ್ಟ್ರ, ಗುಜರಾತ್, ಗೋವಾ ಹಾಗೂ ಕರ್ನಾಟಕದ ಸಾಹಿತಿಗಳು ಆಸಕ್ತ ಲೇಖಕರೊಂದಿಗೆ ಸಂವಾದ  ನಡೆಸಲಿದ್ದಾರೆ. ಸಾಹಿತಿ ಬಾಳಣ್ಣ ಸೀಗಿಹಳ್ಳಿ ಬುಧವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ , ಅಸಹಿಷ್ಣುತೆ ಹಿನ್ನೆಲೆ ಯಲ್ಲಿ ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಹಿಂದಿರುಗಿಸಿದ ಗುಜರಾತ್ ನ ಜಿಎನ್ ದೇವಿ, ಅನಿಲ್ ಜೋಶಿ ಹಾಗೂ ಕನ್ನಡದ ಲೇಖಕರಾದ ರಹಮತ್ ತರೀಕೆರೆ, ಕೆ. ನೀಲಾ,  ಸಂಗಮೇಶ ಮೆಣಸಿನಕಾಯಿ ಅವರು `ನಾನೇಕೆ ಪ್ರಶಸ್ತಿ ಹಿಂತಿರುಗಿಸಿದೆ?' ಎಂಬ ಕುರಿತು ಮಾತನಾಡಲಿದ್ದಾರೆ ಎಂದರು.
ಸಂವಾದದಲ್ಲಿ ಯಾರ್ಯಾರು?: ಹಿರಿಯ ಸಾಹಿತಿ ಡಾ. ರಾಜೇಂದ್ರ ಚೆನ್ನಿ ಅವರ ಸಂಯೋ ನೆಯಲ್ಲಿ ನಡೆಯುವ ಸಂವಾದದಲ್ಲಿ ಗುಜರಾತ್ ನ ರಮೇಶ್ ಓಜಾ, ಉತ್ತಮ ಪರ್ಮಾರ, 
ಕಣಾಜಿ ಪಟೇಲ್, ಮನಿಷಿ ಜನಿ, ಪರೇಶ ನಾಯ್ಕ್ , ಪ್ರೊ.ಸುರೇಖಾ ದೇವಿ, ಮಹಾರಾಷ್ಟ್ರದ ಸಜೀವ ಖಾಂಡೇಕರ, ವೈಶಾಲಿ ನಾರ್ಕರ, ಸಂದೇಶ ಭಂಡಾರ, ಅನೀಶ್ ಮಾಲೇಕರ, ಗಣೇಶ ವಿಸ್ಪುತೇಯ , ಗೋವಾದ ದಾಮೋದರ ಮಾಂಜೋ, ದತ್ತ ನಾಯ್ಕ್  ಎನ್. ಶಿವದಾಸ, ದಿಲೀಪ್ ಬೋರ್ಕರ, ಅರುಣ ಸಖಾರದಂಡೆ, ಅರವಿಂದ ಮಾಲಗಿತ್ತಿ,  ಹುಡಗಿ, ಕಾಶೀ ನಾಥ ಅಂಬಲಗಿ, ಅರುಣ, ಮುದ್ದು ತೀರ್ಥಹಳ್ಳಿ, ಚಿಕ್ಕಪ್ಪನಹಳ್ಳಿ ಷಣ್ಮುಖ, ಉಗಮ ಶ್ರೀನಿವಾಸ, ಕೆ. ಅಕ್ಷತಾ, ಸತೀಶ ಜವರೇಗೌಡ ಭಾಗವಹಿಸಲಿದ್ದಾರೆ ಎಂದು ಬಾಳಣ್ಣ ಸೀಗಿಹಳ್ಳಿ ತಿಳಿಸಿದರು.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

'ನಾವು ದಾಳಿ ಮಾಡದೇ ಹೋಗಿದ್ದರೆ ಇಷ್ಟು ಹೊತ್ತಿಗೆ Iran ಅಣ್ವಸ್ತ್ರ ರಾಷ್ಟ್ರವಾಗಿರುತ್ತಿತ್ತು': ಇಸ್ರೇಲ್ ಪ್ರಧಾನಿ ಬೆಂಜಮಿನ್ ನೇತನ್ಯಾಹು

IPL 2026: ತವರಿನಲ್ಲಿ ಮುಂಬೈ ಗೆ ಮುಖಭಂಗ; RCB ಗೆ 18 ರನ್ ಭರ್ಜರಿ ಗೆಲುವು!

7 ತಿಂಗಳ ಮಗುವಿಗಾಗಿ ಕೆಲಸದ ಸಮಯದ ಹೊಂದಾಣಿಕೆ ಕೋರಿದ ಭಾರತೀಯ ಉದ್ಯೋಗಿ; US ಮ್ಯಾನೇಜರ್ ಪ್ರತಿಕ್ರಿಯೆ ಬಗ್ಗೆ ಜಾಲತಾಣಗಳಲ್ಲಿ ಭಾರಿ ಚರ್ಚೆ!

ಗುರಿ ಇಟ್ಟಿದ್ದು ಜಿಹಾದಿ ಬಂಡುಕೋರರಿಗೆ, ಗುರಿಯಾಗಿದ್ದು ಸ್ಥಳೀಯ ಮಾರ್ಕೆಟ್; 100 ಕ್ಕೂ ಹೆಚ್ಚು ನಾಗರಿಕರ ಮಾರಣಹೋಮ!

IPL 2026: ಮುಂಬೈ ವಿರುದ್ದ ಭರ್ಜರಿ ಬ್ಯಾಟಿಂಗ್; ಬಾಬರ್ ಆಜಂ, ಕ್ರಿಸ್ ಗೇಯ್ಲ್ ದಾಖಲೆ ಮುರಿದ Virat Kohli!

SCROLL FOR NEXT