(ಸಾಂದರ್ಭಿಕ ಚಿತ್ರ) 
ಜಿಲ್ಲಾ ಸುದ್ದಿ

ಕರ ಕಟ್ಟದೆ ರಾಜ್ಯ ಪ್ರವೇಶ ಕೇರಳ ಬಸ್ ಆರ್‍ಟಿಒ ವಶ

ಮೈಸೂರಿನ ಆರ್ ಟಿಒ ಅಧಿಕಾರಿಯ ಸಹಿ ಮಾಡಿರುವ ಹಾಗೆ ನಕಲಿ ತೆರಿಗೆ ಪಾವತಿ ರಸೀದಿಗಳನ್ನು ಸಿದ್ಧಪಡಿಸಿದ್ದ ಕೇರಳ ಮೂಲದ ವೋಲ್ವೋ ಬಸ್ ವೊಂದನ್ನು ಪ್ರಾದೇಶಿಕ ಸಾರಿಗೆ ಅಧಿಕಾರಿಗಳು (ಆರ್ ಟಿಒ) ಗುರುವಾರ ರಾತ್ರಿ ವಶಕ್ಕೆ ಪಡೆದಿದ್ದಾರೆ...

ಬೆಂಗಳೂರು: ಮೈಸೂರಿನ ಆರ್ ಟಿಒ ಅಧಿಕಾರಿಯ ಸಹಿ ಮಾಡಿರುವ ಹಾಗೆ ನಕಲಿ ತೆರಿಗೆ ಪಾವತಿ ರಸೀದಿಗಳನ್ನು ಸಿದ್ಧಪಡಿಸಿದ್ದ ಕೇರಳ ಮೂಲದ ವೋಲ್ವೋ ಬಸ್ ವೊಂದನ್ನು ಪ್ರಾದೇಶಿಕ ಸಾರಿಗೆ ಅಧಿಕಾರಿಗಳು (ಆರ್ ಟಿಒ) ಗುರುವಾರ ರಾತ್ರಿ ವಶಕ್ಕೆ ಪಡೆದಿದ್ದಾರೆ.

ಈ ಕುರಿತು ಸುದ್ಧಿಗೋಷ್ಠಿಯಲ್ಲಿ ಮಾತನಾಡಿದ ರಾಜ್ಯ ಸಾರಿಗೆ ಆಯುಕ್ತ ರಾಮೇಗೌಡ, ಕೇರಳದಿಂದ ರಾಜ್ಯ ಕೈ ಪ್ರವೇಶ ಮಾಡುವಾಗ ಗುಂಡ್ಲುಪೇಟೆ ಚೆಕ್ ಪೋಸ್ಟ್ ನಲ್ಲಿ ರಸ್ತೆ ತೆರಿಗೆ ಪಾವತಿಸಬೇಕು. ತೆರಿಗೆ ಪಾವತಿ ತಪ್ಪಿಸುವ ಉದ್ದೇಶದಿಂದ ಮತ್ತೊಂದು ಮಾರ್ಗದಿಂದ ಮೈಸೂರು ತಲುಪುತ್ತಾರೆ. ನಂತರ ಮೈಸೂರಿನ ಆರ್ ಟಿಒ ಹಿರಿಯ ನಿರೀಕ್ಷಕ ರೂಪಂ ಚಕ್ರವರ್ತಿ ಎಂಬ ಅಧಿಕಾರಿಯ ಹೆಸರಿನಲ್ಲಿ ಸಹಿ ಮಾಡಲಾಗಿದೆ. ಆದರೆ ರಾಜ್ಯದಲ್ಲಿ ಆ ಹೆಸರಿನ ಅಧಿಕಾರಿಯೇ ಇಲ್ಲ ಎಂದು ಹೇಳಿದರು.

ಗುರುವಾರ ರಾತ್ರಿ ಬೆಂಗಳೂರಿನ ಸಿಲ್ಕ್ ಬೋರ್ಡ್ ನಲ್ಲಿ ಆರ್ ಟಿಒ ಹಿರಿಯ ನಿರೀಕ್ಷಕ ಜೆ.ಪಿ. ಕೃಷ್ಣಾನಂದ ಹಾಗೂ ಹೆಚ್ಚುವರಿ ಆಯುಕ್ತರಾದ ಗಾಯತ್ರಿದೇವಿ ಅವರು ಪರಿಶೀಲಿಸದ ಸಂದರ್ಭದಲ್ಲಿ ರಸೀದಿಯ ಪೇಪರ್ ಗುಣಮಟ್ಟದಲ್ಲಿನ ವ್ಯತ್ಯಾಸದಿಂದ ನಕಲಿ ಎಂದು ಪತ್ತೆ ಹಚ್ಚಲಾಗಿದೆ. ಕೇರಳದ ವೈಷ್ಣವಿ ಟ್ರಾವೆಲ್ಸ್ ನ ಕೆಎಲ್-13, ಎಎ6750 ನಂಬರಿನ ಬಸ್ಸನ್ನು ವಶಕ್ಕೆ ಪಡೆದಿದ್ದು, ಮೈಕೋ ಲೇಔಟ್ ಠಾಣೆಯಲ್ಲಿ ದೂರು ದಾಖಲಿಸಲಾಗಿದೆ. ಬಸ್ಸಿನ ಚಾಲಕ ಹಾಗೂ ಕ್ಲೀನರ್ ಇಬ್ಬರನ್ನೂ ಪೊಲೀಸರ ವಶಕ್ಕೆ ನೀಡಲಾಗಿದೆ ಎಂದರು.

ಬಸ್ಸಿನ ಲಗೇಜ್ ಕಂಪಾರ್ಟ್ ಮೆಂಟ್ ನಲ್ಲಿದ್ದ 6 ನಕಲಿ ಖಾಲಿ ರಸೀದಿಗಳು, ನಂಬರ್ ಮಿಷನ್, ಎರಡು ಕಲರ್ ಇಂಕ್ ಪ್ಯಾಡ್ ಮತ್ತು ಪೇಪರ್ ಕಟರ್ ಗಳನ್ನು ವಶಪಡಿಸಿಕೊಳ್ಳಲಾಗಿದೆ. ಬಸ್ ಕೇರಳದ ನೆಡುಮಂಗಾಡುವಿನ ಸಾಜಿರ್ ಎಂಬುವವರಿಗೆ ಸೇರಿದ್ದಾಗಿದೆ. ಆದರೆ ಅಜಿತ್ ಎಂಬ ಏಜೆಂಟ್ ಗೆ ಬಸ್ ಲೀಜ್ ಗೆ ನೀಡಿದ್ದು, ಆ ವ್ಯಕ್ತಿ ನಡೆಸುತ್ತಿರಬಹುದು ಎಂದು ಶಂಕಿಸಲಾಗಿದೆ. ತನಿಖೆಯಿಂದ ಮಾತ್ರ ಹೆಚ್ಚಿನ ವಿವರಗಳು ತಿಳಿದುಬರಬೇಕಿದೆ ಎಂದು ಹೇಳಿದರು.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

ಭಾರತ-ರಷ್ಯಾ ಆರ್ಥಿಕ ಬಾಂಧವ್ಯಕ್ಕೆ ಹೊಸ ಬಲ; ಪುಟಿನ್ ಭೇಟಿಯಾದ ಜೈಶಂಕರ್, ಪರಮಾಣು ಸಹಕಾರ ಸೇರಿ ಹಲವು ಅಂಶಗಳ ಕುರಿತು ಚರ್ಚೆ!

3 ದಿನ ಮೊದಲೇ ಮುಂಗಾರು ಅಧಿವೇಶನಕ್ಕೆ ತೆರೆ: 'ವಿರೋಧ ಪಕ್ಷಕ್ಕೆ ಹೆದರಿ ಅಧಿವೇಶನ ರದ್ದು'; ರಾಜ್ಯಪಾಲರಿಗೆ BJP ದೂರು!

ಬಿಜೆಪಿ MLC ಎನ್. ರವಿಕುಮಾರ್‌ ವಿರುದ್ಧ ಜಾಮೀನು ರಹಿತ ಬಂಧನ ವಾರಂಟ್

Cricket: ಪಂತ್‌ರಂತೆ ಆಡಲು ಪ್ರಯತ್ನಿಸಲ್ಲ, ಅವರ ಜೊತೆ ಆಡೋದು ದೊಡ್ಡ ಅನುಭವ: ಫಿಟ್ನೆಸ್ ಅಪ್ಡೇಟ್ ಕೊಟ್ಟ Dhruv Jurel

ಜೈ ಜವಾನ್, ಜೈ ಕಿಸಾನ್: ಐತಿಹಾಸಿಕ ಶತಕದ ಬಳಿಕ ಹೊಸ ಟ್ಯಾಟೂ ರಿವೀಲ್ ಮಾಡಿದ Dhruv Jurel