ರಾಜ್ಯ

ಗೌರಿ ಹತ್ಯೆ ಪ್ರಕರಣ: ದಾಬೋಲ್ಕರ್ ಹತ್ಯೆ ಪ್ರಕರಣ ಆರೋಪಿ ವಶಕ್ಕೆ ಪಡೆದ ಎಸ್ಐಟಿ

Manjula VN
ಬೆಂಗಳೂರು: ಮಹಾರಾಷ್ಟ್ರದಲ್ಲಿ ನಡೆದ ನರೇಂದ್ರ ದಾಬೋಲ್ಕರ್ ಹತ್ಯೆ ಪ್ರಕರಣದಲ್ಲಿ ಬಂಧನಕ್ಕೊಳಗಾಗಿರುವ ಆರೋಪಿ ಶರತ್ ಕಲಸ್ಕರ್ ನನ್ನು ಎಸ್ಐಟಿ ಅಧಿಕಾರಿಗಳು ಗುರುವಾರ ವಶಕ್ಕೆ ಪಡೆದುಕೊಂಡಿದ್ದಾರೆ. 
ಪತ್ರಕರ್ತೆ ಗೌರಿ ಲಂಕೇಶ್ ಹತ್ಯೆ ಪ್ರಕರಣದ ತನಿಖೆ ನಡೆಸುತ್ತಿರುವ ಎಸ್ಐಟಿ ತಂಡ ಮಹಾರಾಷ್ಟ್ರದ ಎಟಿಎಸ್ ವಶದಲ್ಲಿದ್ದ ಆರೋಪಿ ಕಲಸ್ಕರ್ ನನ್ನು ವಿಚಾರಣೆಗಾಗಿ 20 ದಿನಗಳ ಕಾಲ ವಶಕ್ಕೆ ಪಡೆದುಕೊಂಡಿದೆ. 
ಇನ್ನು ಸುಧಾನ್ಯ ಗೊಂದಾಲೆಕರ್ ಪೊಲೀಸ್ ಕಸ್ಟರಿ ಗುರುವಾರ ಪೂರ್ಣಗೊಂಡಿದ್ದು, ಹೆಚ್ಚಿವ ವಿಚಾರಣೆಗಾಗಿ ಮತ್ತೆ 10 ದಿನಗಳ ಕಾಲ ವಶಕ್ಕೆ ಪಡೆದುಕೊಂಡಿದ್ದಾರೆಂದು ತಿಳಿದುಬಂದಿದೆ. 
SCROLL FOR NEXT