ವಿಮಾನ ಅಪಘಾತದ ನಂತರದ ದೃಶ್ಯ 
ರಾಜ್ಯ

ಮೀರಜ್ ಮಿಗ್ 2000 ಯುದ್ಧ ವಿಮಾನ ಪತನ; ಹೆಚ್ಚಿನ ತನಿಖೆಗೆ ಕಪ್ಪು ಪೆಟ್ಟಿಗೆ ಫ್ರಾನ್ಸ್ ಗೆ ರವಾನೆ

ಕಳೆದ ಫೆಬ್ರವರಿ 1ರಂದು ನಗರದಲ್ಲಿ ಪತನಗೊಂಡಿದ್ದ ಮಿರೇಜ್-2000 ವಿಮಾನದ ಕಪ್ಪು ಪೆಟ್ಟಿಗೆಯನ್ನು...

ಬೆಂಗಳೂರು: ಕಳೆದ ಫೆಬ್ರವರಿ 1ರಂದು ನಗರದಲ್ಲಿ ಪತನಗೊಂಡಿದ್ದ ಮಿರೇಜ್-2000 ತರಬೇತಿ ಯುದ್ಧ ವಿಮಾನದ ಕಪ್ಪು ಪೆಟ್ಟಿಗೆಯನ್ನು ದಾಖಲೆಗಳನ್ನು ಪರಿಶೀಲಿಸಲು ಫ್ರಾನ್ಸ್ ಗೆ ಕೊಂಡೊಯ್ಯಲಾಗುತ್ತಿದೆ. ಇಬ್ಬರು ಪೈಲಟ್ ಗಳ ಸಾವಿಗೆ ಕಾರಣವಾದ ವಿಮಾನ ಅಪಘಾತದ ಬಗ್ಗೆ ಹೆಚ್ಚಿನ ವಿವರಗಳನ್ನು ಕಲೆಹಾಕಲು ಅಪಘಾತದ ತನಿಖೆ ನಡೆಸುತ್ತಿರುವ ಭಾರತೀಯ ವಾಯುಪಡೆ ಕಪ್ಪು ಪೆಟ್ಟಿಗೆಯನ್ನು ಫ್ರಾನ್ಸ್ ಗೆ ಕಳುಹಿಸುತ್ತಿದೆ.

ಕಪ್ಪು ಪೆಟ್ಟಿಗೆಗೆ ಸಹ ಸ್ವಲ್ಪ ಹಾನಿಯಾಗಿರುವುದರಿಂದ ಅದನ್ನು ಜಾಗರೂಕತೆಯಿಂದ ಭಾರತೀಯ ವಾಯುಪಡೆ ಫ್ರಾನ್ಸ್ ಗೆ ಕಳುಹಿಸಲಿದೆ. ವಿಮಾನ ಅಪಘಾತಕ್ಕೆ ನಿಖರ ಕಾರಣವೇನೆಂದು ಈ ಕಪ್ಪು ಪೆಟ್ಟಿಗೆಯಿಂದ ತಿಳಿದುಬರಲಿದೆ. ಇದಕ್ಕಾಗಿ ಫ್ರಾನ್ಸ್ ಗೆ ಭಾರತೀಯ ವಾಯುಸೇನೆಯ ಅಧಿಕಾರಿಯೊಬ್ಬರು ಸಹ ತೆರಳಲಿದ್ದಾರೆ.

ಭಾರತೀಯ ವಾಯುಪಡೆ ಮತ್ತು ಹಿಂದೂಸ್ತಾನ್ ಏರೊನಾಟಿಕ್ಸ್ ಲಿಮಿಟೆಡ್ ನ ಅಧಿಕಾರಿಗಳ ಸಮ್ಮುಖದಲ್ಲಿ ಫ್ರಾನ್ಸ್ ನ ಸಂಸ್ಥೆಗಳು ಕಪ್ಪು ಪೆಟ್ಟಿಗೆಯ ತನಿಖೆ ನಡೆಸಲಿದ್ದಾರೆ. ಈ ಮಧ್ಯೆ ಭಾರತೀಯ ವಾಯುಪಡೆ ರಾಷ್ಟ್ರೀಯ ವಿಮಾನ ತನಿಖೆ ಕೇಂದ್ರ, ಏರ್ ವೈಸ್ ಮಾರ್ಷಲ್ ತಿವಾರಿಯವರನ್ನು ನೇಮಿಸಿ ಹೆಚ್ ಎಎಲ್ ಜೊತೆ ಸೇರಿ ನ್ಯಾಯಾಲಯದಲ್ಲಿ ಘಟನೆ ಬಗ್ಗೆ ನಿಸ್ಪಕ್ಷಪಾತ ತನಿಖೆ ನಡೆಸಲಾಗುವುದು ಎಂದು ಹೇಳಿದ್ದಾರೆ.

ಅಪಘಾತದ ಬಗ್ಗೆ ನಿಖರ ಮಾಹಿತಿ ನೀಡಬೇಕೆಂದು ಮೃತ ಪೈಲಟ್ ಗಳಾದ ಸ್ಕ್ವಾಡ್ರನ್ ಸಮೀರ್ ಅಬ್ರೊಲ್ ಮತ್ತು ಸಿದ್ಧಾರ್ಥ್ ನೇಗಿ ಒತ್ತಾಯಿಸುತ್ತಿರುವುದರ ಮಧ್ಯೆ ಭಾರತೀಯ ವಾಯುಪಡೆ ಈ ನಿರ್ಧಾರ ಕೈಗೊಂಡಿದೆ. ಭಾರತೀಯ ವಾಯುಪಡೆ ಹಳೆ ಯಂತ್ರಗಳನ್ನು ಬಳಸುತ್ತಿದೆ ಎಂದು ಸಮೀರ್ ಅವರ ಪತ್ನಿ ಗರಿಮ ಅಬ್ರೊಲ್ ಇತ್ತೀಚೆಗೆ ಇನ್ಸ್ಟಾಗ್ರಾಮ್ ನಲ್ಲಿ ಆರೋಪಿಸಿದ್ದಾರೆ.

ಅಬ್ರೊಲ್ ಮತ್ತು ನೆಗಿ ಅವರ ಪೋಷಕರು ಘಟನೆ ಬಗ್ಗೆ ತನಿಖೆ ನಡೆಸುವಂತೆ ರಕ್ಷಣಾ ಸಚಿವೆ ನಿರ್ಮಲಾ ಸೀತಾರಾಮ್ ಅವರಿಗೆ ಮನವಿ ಮಾಡಿದ್ದಾರೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

'ನಮ್ಮ ಪಾತ್ರವಿಲ್ಲ': ಆಫ್ಘನ್ ಸಚಿವರ ಸುದ್ದಿಗೋಷ್ಠಿ ವೇಳೆ ಮಹಿಳಾ ಪತ್ರಕರ್ತೆಯರಿಗೆ ನಿರ್ಬಂಧ ಕುರಿತು 'ಕೇಂದ್ರ' ಸ್ಪಷ್ಟನೆ

'ನಂಗೇ ಕೊಡಿ ಎಂದು ನಾನೇನು ಕೇಳಿಲ್ಲ..': ನೊಬೆಲ್ ಶಾಂತಿ ಪ್ರಶಸ್ತಿ ಕುರಿತು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಮಾತು!

ಬ್ಯಾಂಕ್‌ಗೆ ನಕಲಿ ಗ್ಯಾರಂಟಿ: ರಿಲಯನ್ಸ್‌ ಪವರ್‌ನ ಮುಖ್ಯ ಹಣಕಾಸು ಅಧಿಕಾರಿ ಅಶೋಕ್ ಪಾಲ್ ಬಂಧನ

2nd test, Day 2: 518 ರನ್ ಗಳಿಗೆ ಭಾರತ ಇನ್ನಿಂಗ್ಸ್ ಡಿಕ್ಲೇರ್!

CM ಆಗುವ ಕಾಲ ಹತ್ತಿರ ಬಂದಿದೆ ಎಂದು ನಾನು ಹೇಳಿಲ್ಲ: ಸುದ್ದಿ ತಿರುಚಿ ಪ್ರಸಾರ ಮಾಡಿದರೆ ಮಾನನಷ್ಟ ಮೊಕದ್ದಮೆ ಅನಿವಾರ್ಯ; ಡಿ ಕೆ ಶಿವಕುಮಾರ್

SCROLL FOR NEXT