ಪ್ರತಾಪ್ ಮತ್ತು ಅಮೂಲ್ಯ 
ರಾಜ್ಯ

ವೆಡ್ಡಿಂಗ್ ಆ್ಯನಿವರ್ಸರಿ ಆಚರಿಕೊಳ್ಳಲು ಹೋಗಿ ಸ್ಪೇನ್ ನಲ್ಲಿ ಸಿಕ್ಕಾಕೊಂಡ ಬೆಂಗಳೂರು ದಂಪತಿ

ಪ್ರತಾಪ್ ನಂದ ಕುಮಾರ್  ಮತ್ತು ಅವರ ಪತ್ನಿ ಅಮೂಲ್ಯ ಮಾರ್ಚ್ 9 ರಂದು ತಮ್ಮ 5ನೇ ವಿವಾಹ ವಾರ್ಷಿಕೋತ್ಸವ ಆಚರಿಸಿಕೊಳ್ಳಲು ಸ್ಪೇನ್ ಗೆ ತೆರಳಿದ್ದರು. ಭಾರತಕ್ಕೆ ವಾಪಸ್ ಬರಲು ಪ್ರಯತ್ನಿಸುತ್ತಿದ್ದು, ಲಂಡನ್ ಮೂಲಕ ಬರಲು ಅವರಿಗೆ ಸರಿಯಾದ ವೀಸಾ ಇರದ ಹಿನ್ನೆಲೆಯಲ್ಲಿ ಅಲ್ಲಿಯೇ ಸಿಲುಕಿದ್ದಾರೆ. 

ಬೆಂಗಳೂರು: ಬೆಂಗಳೂರಿನ ಜೋಡಿಯೊಂದು ತಮ್ಮ 5 ನೇ ವರ್ಷದ ವಿವಾಹ ವಾರ್ಷಿಕೋತ್ಸವ ಆಚರಿಸಲು ಸ್ಪೇನ್‌ಗೆ ಹೋಗಿ  ಸಿಕ್ಕಿ ಹಾಕಿಕೊಂಡಿದ್ದಾರೆ.

ಪ್ರತಾಪ್ ನಂದ ಕುಮಾರ್  ಮತ್ತು ಅವರ ಪತ್ನಿ ಅಮೂಲ್ಯ ಮಾರ್ಚ್ 9 ರಂದು ತಮ್ಮ 5ನೇ ವಿವಾಹ ವಾರ್ಷಿಕೋತ್ಸವ ಆಚರಿಸಿಕೊಳ್ಳಲು ಸ್ಪೇನ್ ಗೆ ತೆರಳಿದ್ದರು. ಭಾರತಕ್ಕೆ ವಾಪಸ್ ಬರಲು ಪ್ರಯತ್ನಿಸುತ್ತಿದ್ದು, ಲಂಡನ್ ಮೂಲಕ ಬರಲು ಅವರಿಗೆ ಸರಿಯಾದ ವೀಸಾ ಇರದ ಹಿನ್ನೆಲೆಯಲ್ಲಿ ಅಲ್ಲಿಯೇ ಸಿಲುಕಿದ್ದಾರೆ. 

ವಿದ್ಯಾರಣ್ಯಪುರದ ಪ್ರತಾಪ್ ಏರೋ ಸ್ಪೇಸ್ ಎಂಜಿನೀಯರ್ ಆಗಿದ್ದು ದುನಿಯಾ ಟ್ರಾವೆಲ್ಸ್ ಮೂಲಕ ಬುಕ್ ಮಾಡಿದ್ದರು. ಕೊರೋನಾ ಹಿನ್ನೆಲೆಯಲ್ಲಿ ದಂಪತಿ ತಮ್ಮ ಪ್ರವಾಸ ರದ್ದು ಮಾಡಲು ನಿರ್ಧರಿಸಿದ್ದರು, ಆದರೆ ದುನಿಯಾ ಟ್ರಾವೆಲ್ಸ್ ಅವರಿಗೆ ತಪ್ಪು ಮಾಹಿತಿ ನೀಡಿ. ಯಾವುದೇ ತೊಂದರೆಯಾಗುವುದಿಲ್ಲಎಂದು ಕಳುಹಿಸಿತ್ತು, ಸದ್ಯ ದಂಪತಿ ಮ್ಯಾಡ್ರಿಡ್ ನಲ್ಲಿದ್ದಾರೆ,.

ತಾವು ಧರಿಸಿರುವ ಬಟ್ಟೆ ಒರತು ಪಡಿಸಿ ತಮ್ಮ ಬಳಿ ಬಟ್ಟೆಯಾಗಲೀ, ಹಣವಾಗಲೀ ಇಲ್ಲವೆಂದು ಅವರು ವಿಡಿಯೋ ಮೂಲಕ ಹೇಳಿದ್ದಾರೆ.

ಆದಷ್ಟು ಬೇಗ ನನ್ನ ಮಗ, ಸೊಸೆಯನ್ನ ರಾಜ್ಯಕ್ಕೆ ಕರೆತನ್ನಿ ಎಂದು ಪ್ರತಾಪ್ ತಂದೆ ಹಾಗೂ ತಾಯಿ ಸರ್ಕಾರಕ್ಕೆ ಮನವಿ ಮಾಡಿದ್ದಾರೆ. ಯಮಾಡಿ ಸರ್ಕಾರ ಗಮನ ಹರಿಸಿ ಇಬ್ಬರೂ ಭಾರತಕ್ಕೆ ಬರಲು ವ್ಯವಸ್ಥೆ ಮಾಡಬೇಕು ಎಂದು‌ ಮನವಿ ಮಾಡಿಕೊಂಡಿದ್ದಾರೆ.

ವಿದೇಶದಿಂದ ಬಂದವರಿಂದಲೇ ಭಾರತದಲ್ಲಿ ಸೋಂಕು ಹರಡುತ್ತಿದ್ದು, ಈ ನಿಟ್ಟಿನಲ್ಲಿ ವಿಮಾನಗಳು, ರೈಲುಗಳು, ಬಸ್‌ ಸೇವೆಯನ್ನೂ ರದ್ದು ಮಾಡಲಾಗಿದೆ.

ಈ ಸಂಬಂದ ಪ್ರತಿಕ್ರಿಯಿಸಿರುವ ಕೇಂದ್ರ ಸಚಿವ ಡಿವಿ ಸದಾನಂದಗೌಡ ಒಟ್ಟು 36 ಭಾರತೀಯರು ಸ್ಪೇನ್ ನಲ್ಲಿ ಸಿಲುಕಿ ಹಾಕಿಕೊಂಡಿದ್ದಾರೆ.  ಭಾರತೀಯ ರಾಯಭಾರ ಕಚೇರಿಗೆ ನಾವು ಮಾಹಿತಿ ನೀಡಿದ್ದೇವೆ, ಮಾರ್ಚ್ 31ರೊಳಗೆ ಎಲ್ಲಾ ರೀತಿಯ ಸಿದ್ಧತೆ ಮಾಡುತ್ತಾರೆ ಎಂದುವಿಶ್ವಾಸ  ವ್ಯಕ್ತ ಪಡಿಸಿದ್ದಾರೆ. 

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

Theaterisation: 'ಥಿಯೇಟರ್ ಕಮಾಂಡ್‌' ರಚನೆ: ಪ್ರಯತ್ನದಲ್ಲಿ ಪ್ರಗತಿ ಸಾಧಿಸಲಾಗುತ್ತಿದೆಯೇ? ಆಡ್ಮಿರಲ್ ಡಿಕೆ ತ್ರಿಪಾಠಿ ಹೇಳಿದ್ದು ಹೀಗೆ...

'ಪಾಕಿಸ್ತಾನದೊಂದಿಗೆ ಯುದ್ಧ ನಿಲ್ಲಿಸಲು ಟ್ರಂಪ್ 24 ಗಂಟೆ ಕಾಲಾವಕಾಶ ನೀಡಿದ್ದರು, ಮೋದಿ ಕೇವಲ 5 ಗಂಟೆಗಳಲ್ಲಿ ಪಾಲಿಸಿದರು': ರಾಹುಲ್ ಗಾಂಧಿ

'ಧಮ್ ಇದ್ರೆ.. ಸನಾತನಧರ್ಮ, ಬಿಹಾರಿಗಳ ಕುರಿತ ಹೇಳಿಕೆ ಮತ್ತೆ ಹೇಳ್ತೀರಾ?': MK Stalin ಗೆ ಬಿಜೆಪಿ-ಜೆಡಿಯು ಸವಾಲು!

Video: 80 ಸಾವಿರ ಹಣವಿದ್ದ ಬ್ಯಾಗ್ ನಾಪತ್ತೆ, ಮೇಲಿಂದ ಕೋತಿಯಿಂದ ಹಣದ ಸುರಿಮಳೆ! ಸಿಕ್ಕಿದೆಷ್ಟು ಗೊತ್ತಾ?

Dharmasthala: Mahesh Shetty Thimarodi ಮನೆ ಮಹಜರು, ಪತ್ನಿ-ಮಕ್ಕಳ ಮೊಬೈಲ್ ವಶಕ್ಕೆ, 3 ತಲ್ವಾರ್ ಕೂಡ ಪತ್ತೆ!

SCROLL FOR NEXT