ರಾಜ್ಯ

ನಮಗೂ ಪರಿಹಾರ ನೀಡಿ: ಹೈಕೋರ್ಟ್ ಮೆಟ್ಟಿಲೇರಿದ ಅರ್ಚಕರು

Shilpa D

ಬೆಂಗಳೂರು: ರಾಜ್ಯದ ದೇಗುಲಗಳಲ್ಲಿ ಕಾರ್ಯ ನಿರ್ವಹಿಸುವ ಅರ್ಚಕರಿಗೆ ಪರಿಹಾರ ನೀಡಲು ಸರ್ಕಾರಕ್ಕೆ ನಿರ್ದೇಶಿಸುವಂತೆ ಕರ್ನಾಟಕ ಹಿಂದೂ ಧಾರ್ಮಿಕ ಸಂಸ್ಥೆ ಹೈಕೋರ್ಟ್ ಮೊರೆ ಹೋಗಿದ್ದರ ಹಿನ್ನೆಲೆಯಲ್ಲಿ ಸರ್ಕಾರದ ಮುಖ್ಯ ಕಾರ್ಯದರ್ಶಿ ಮತ್ತು ಆಯುಕ್ತರಿಗೆ ಕರ್ನಾಟಕ ಉಚ್ಛ ನ್ಯಾಯಾಲಯ ನೊಟೀಸ್ ಜಾರಿಗೊಳಿಸಿದೆ.

ಸಾರ್ವಜನಿಕ ಹಿತಾಸಕ್ತಿ ಅರ್ಜಿ ವಿಚಾರಣೆ ನಡೆಸಿದ ನ್ಯಾಯಮೂರ್ತಿ  ಎ.ಎಸ್. ಓಕಾ ಮತ್ತು ನ್ಯಾಯಮೂರ್ತಿ ಕೆ.ಎನ್ ಫಣೀಂದ್ರ ಅವರಿದ್ದ ವಿಭಾಗೀಯ ಪೀಠ ನೊಟೀಸ್ ನೀಡಿದೆ. ಅರ್ಚಕರಿಗೆ ದೇವರ ಪೂಜೆಗೆ ಹಣ ನೀಡದೇ ಇರುವುದು ದೇವಾಲಯಗಳ ವ್ಯವಸ್ಥೆಗೆ ದೊಟ್ಟ ಪೆಟ್ಟುಕೊಟ್ಟಂತಾಗಿದೆ ಎಂದು ಶ್ರೀಹರಿ ಕುತ್ಸಾರ ಪಿಐಎಲ್ ಸಲ್ಲಿಸಿದ್ದರು.

ರಾಜ್ಯದಲ್ಲಿ ಸುಮಾರು 35,500 ದೇಗುಲಗಳಿದ್ದು ಅವುಗಳನ್ನು ಎ ಮತ್ತು ಬಿ ಹಾಗೂ ಸಿ ವರ್ಗಗಳಾಗಿ ವಿಂಗಡಿಸಲಾಗಿದೆ. ರಾಜ್ಯ ಸರ್ಕಾರ 327.39 ಕೋಟಿ ರು. ಅನುದಾನ ನೀಡಿದೆ. ಸಿ ಕೆಟಗರಿ ದೇವಾಲಯಗಳ ಅರ್ಚಕರಿಗೆ ಯಾವುದೇ ವೇತನ ಇರುವುದಿಲ್ಲ ಹೀಗಾಗಿ ಅವರಿಗೆ ಪರಿಹಾರ ನೀಡಬೇಕು ಎಂದು ಕೋರಿದ್ದಾರೆ.

SCROLL FOR NEXT