ರಾಜ್ಯ

ಕೋವಿಡ್ ಸೋಂಕಿತರಿಗೆ ಸೈಕಲ್‌ನಲ್ಲಿ ಅಗತ್ಯ ವಸ್ತುಗಳನ್ನು ತಲುಪಿಸಿ ಯುವಕರಿಗೆ ಮಾದರಿಯಾದ ದಿನೇಶ್ ಪೈ

Raghavendra Adiga

ಉಡುಪಿ: ತನ್ನ 60 ನೇ ವಯಸ್ಸಿನಲ್ಲಿ, ದಿನೇಶ್ ಪೈ ತನ್ನ ಬೈಸಿಕಲ್ ನಲ್ಲಿ ಉಡುಪಿಯ ಗೋಪಾಲಪುರ ಮತ್ತು ಸುಬ್ರಹ್ಮಣ್ಯ ನಗರ ವಾರ್ಡ್‌ಗಳ ಸುತ್ತ ಸುತ್ತುವ ಅಗತ್ಯವಿಲ್ಲ ಆದರೆ ಅವರು ಇಂದೂ ಸಹ ಕೋವಿಡ್ -19 ಸೋಂಕು ತಗುಲಿದ  ಕುಟುಂಬಗಳನ್ನು ಗುರುತಿಸಿ, ಅವುಗಳನ್ನು ಪರಿಶೀಲಿಸಿ ಮತ್ತು ದಿನಸಿಗಳನ್ನು ತಲುಪಿಸುತ್ತಿದ್ದಾರೆ. ವಿಶೇಷವಾಗಿ ಹಿರಿಯ ನಾಗರಿಕರಿಗೆ ಸುರಕ್ಷಿತವಾಗಿರಲು ರಿವರ್ಸ್ ಕ್ವಾರಂಟೈನ್ ಗೆ ಸೂಚಿಸಿದವರಿಗೆ ಇವರು ನೆರವಾಗುತ್ತಾರೆ.

ಉಡುಪಿ ಸಿಎಮ್‌ಸಿಯ ನಾಮನಿರ್ದೇಶಿತ ಕೌನ್ಸಿಲರ್ ಆಗಿರುವ ಪೈ ಸುಮಾರು 10 ವರ್ಷಗಳ ಹಿಂದೆ ನಡೆಸಿದ ತೆರೆದ ಹೃದಯ ಶಸ್ತ್ರಚಿಕಿತ್ಸೆಯ ಕುರಿತು ಕಾಳಜಿ ತೀರುವುದಿಲ್ಲ.ಬದಲಾಗಿ, ಅವರು ಹೊರಗೆ ಹೋಗಿ ಅಗತ್ಯ ವಸ್ತುಗಳನ್ನು ತಲುಪಿಸದಿದ್ದರೆ ಹಸಿವಿನಿಂದ ಬಳಲುವವರ ಬಗ್ಗೆ ಚಿಂತಿಸುತ್ತಾರೆ. ಕೋವಿಡ್ -19 ರೋಗಿಗಳ ಪ್ರಾಥಮಿಕ ಸಂಪರ್ಕಗಳು ತಪ್ಪು ಮಾಡಲು ಸಾಧ್ಯವಿಲ್ಲ ಎಂದು ಅವರು ನಮಗೆ ನೆನಪಿಸುತ್ತಾರೆ. ಆದ್ದರಿಂದ ಪ್ರತಿದಿನ ಬೆಳಿಗ್ಗೆ 8 ರಿಂದ ಮಧ್ಯಾಹ್ನ 1 ರವರೆಗೆ ಕೋವಿಡ್ ವಾರಿಯರ್ ನ ಪಾತ್ರ ನಿರ್ವಹಿಸುವ ಪೈ ದಿನಸಿ ವಸ್ತುಗಳನ್ನು ಖರೀದಿಸುತ್ತಾರೆ ಮತ್ತು ರೋಗಿಗಳು ವಾಸಿಸುವ ಮನೆಗಳಿಗೆ ಭೇಟಿ ನೀಡುತ್ತಾರೆ.

ಇನ್ನು ಪೈ ಅವರು ಕೊರೋನಾ ಸೋಂಕಿತರಲ್ಲದೆ ಬೇರೆಯವರಿಗೆ ಸಹ ನೆರವಾಗಿದ್ದಾರೆ. ಅಗತ್ಯವಿರುವವರಿಗೆ 50 ಕ್ಕೂ ಹೆಚ್ಚು ದಿನಸಿ ಕಿಟ್‌ಗಳನ್ನು ಒದಗಿಸಿದ್ದಾರೆ. ಲಾಕ್‌ಡೌನ್‌ನಿಂದ ಯಾರ ಆದಾಯದ ಮೂಲವು ಬರಿದಾಗಿದೆ ಎನ್ನುವುದನ್ನು  ಕಂಡುಹಿಡಿಯಲು ಅವರು ಒಂದು ಸಮೀಕ್ಷೆಯನ್ನು ಮಾಡುತ್ತಾರೆ ಮತ್ತು ಅವರಿಗೆ ಸಹಾಯ ಮಾಡಲು ತಲುಪುತ್ತಾರೆ. ಉಡುಪಿಯ ಬಟ್ಟೆ ಅಂಗಡಿಯಲ್ಲಿ ಕೆಲಸ ಮಾಡುವ ಪ್ರಭಾಕರ್ ಶೆಟ್ಟಿಗಾರ್ ಅವರು ಲಾಕ್ ಡೌನ್ ವಿಧಿಸಿದಾಗಿನಿಂದ ನಿರುದ್ಯೋಗಿಯಾಗಿದ್ದಾರೆ.  .ಪೈ ಅವರ ಮನೆ ಬಾಗಿಲಿಗೆ ಆಗಮಿಸಿ ಅವರ ಜೀವನ ಚೆನ್ನಾಗಿರುತ್ತದೆ ಎನ್ನುವ ಭರವಸೆ ನೀಡಲು ಮುಂದಾಗುತ್ತಾರೆ.

‘‘ತಾತ್ಕಾಲಿಕವಾಗಿ ಉದ್ಯೋಗ ಕಳೆದುಕೊಂಡಿದ್ದನ್ನು ಬಿಟ್ಟರೆ ನಿಮ್ಮ ಸಮಸ್ಯೆ ಏನು?ನಿಮಗೆ ಸಹಾಯ ಮಾಡಲು ನಾನು ಇದ್ದೇನೆ. ”ಶೆಟ್ಟಿಗಾರ್ ಅವರಿಗೆ ಪೈ  ಹೇಳಿದ್ದನ್ನು ಪ್ರಭಾಕರ್ ನೆನೆದರು . ‘‘ ನಾವು ಪೈ ಅವರನ್ನು ಸಮಾಜ ಸೇವಕರಾಗಿ ತಿಳಿದಿದ್ದೆವು, ಆದರೆ ಅವರ ಕೆಲಸದ ಶೈಲಿ ಅಸಾಧಾರಣವಾಗಿದೆ. ’’ ಮೇಸನ್‌ನ ಜಯಕರ್ ಅಮೀನ್ ಪತ್ರಿಕೆಗೆ  ತಿಳಿಸಿದರು, ಪೈ ಇಲ್ಲದಿದ್ದರೆ, ಅವರ ವಾರ್ಡ್‌ಗಳಲ್ಲಿರುವ ಅನೇಕ ಜನರು ಅಸಹನೀಯ ದುಃಖವನ್ನು ಎದುರಿಸಬೇಕಾಗಿತ್ತು ಎಂದು ಅವರು ಹೇಳಿದ್ದಾರೆ.

SCROLL FOR NEXT