ಜೋಗ ಜಲಪಾತ ವೀಕ್ಷಿಸುತ್ತಿರುವ ರಾಜ್ಯಪಾಲ ಗೆಹ್ಲೋಟ್ 
ರಾಜ್ಯ

ರಾಜ್ಯಪಾಲ ಗೆಹ್ಲೋಟ್ ನಿರ್ಗಮನದ ಬಳಿಕ ಧುಮ್ಮಿಕ್ಕಿ ಹರಿದ ಜೋಗ ಜಲಪಾತ!

ಕೆಪಿಸಿಎಲ್ ಅಧಿಕಾರಿಗಳು ಮಾಡಿದ ಎಡವಟ್ಟಿನಿಂದ ಭೋರ್ಗರೆಯುವ ಜೋಗ ಜಲಾಪಾತ ನೋಡಲು ಹೋದ ರಾಜ್ಯಪಾಲ ಥಾವರ್​ಚಂದ್ ಗೆಹ್ಲೋಟ್​ಗೆ ನಿರಾಸೆಯಾಗುವಂತಾಗಿದೆ.

ಶಿವಮೊಗ್ಗ: ಕೆಪಿಸಿಎಲ್ ಅಧಿಕಾರಿಗಳು ಮಾಡಿದ ಎಡವಟ್ಟಿನಿಂದ ಭೋರ್ಗರೆಯುವ ಜೋಗ ಜಲಾಪಾತ ನೋಡಲು ಹೋದ ರಾಜ್ಯಪಾಲ ಥಾವರ್​ಚಂದ್ ಗೆಹ್ಲೋಟ್​ಗೆ ನಿರಾಸೆಯಾಗುವಂತಾಗಿದೆ.

ಎರಡು ದಿನದ ಶಿವಮೊಗ್ಗ ಪ್ರವಾಸ ಕೈಗೊಂಡಿದ್ದ ರಾಜ್ಯಪಾಲರು ನಿನ್ನೆ ಜೋಗ ಜಲಪಾತಕ್ಕೆ ಭೇಟಿ ನೀಡಲು ನಿರ್ಧರಿಸಿದ್ದರು.

ಬುಧವಾರ ಶಿವಮೊಗ್ಗ ಜಿಲ್ಲೆಗೆ ಗೆಹ್ಲೋಟ್ ಆಗಮಿಸಿದ್ದು, ಕೆಲ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದರು. ನಂತರ ಗುರುವಾರ ಜೋಗ್ ಫಾಲ್ಸ್'ಗೆ  ಭೇಟಿ ನೀಡುವುದಾಗಿ ತಿಳಿಸಿ ಜಲಪಾತದ ಬಳಿಯೇ ಇರುವ ಬಾಂಬೆ ಗೆಸ್ಟ್ ಹೌಸ್ ನಲ್ಲಿ ರಾತ್ರಿ ತಂಗಿದ್ದರು. ಗುರುವಾರ ಬೆಳಿಗ್ಗೆಯೇ ಜಲಪಾತಕ್ಕೆ ಭೇಟಿ ನೀಡಿದ್ದರು.

ರಾಜ್ಯಪಾಲರು ಜೋಗ ಜಲಪಾತ ನೋಡಲು ಬರುತ್ತಿದ್ದಾರೆಂದು ತಿಳಿಯುತ್ತಿದ್ದಂತೆ ಅಧಿಕಾರಿಗಳು ಲಿಂಗನಮಕ್ಕಿ ಜಲಾಶಯದಿಂದ ಬೆಳ್ಳಂಬೆಳಗ್ಗೆ ನೀರು ಬಿಟ್ಟಿದ್ದರು. ಆದರೆ, ಜಲಾಶಯದಿಂದ ಜಲಪಾತದ ಭಾಗಕ್ಕೆ ನೀರು ಹರಿದು ಬರಲು 3 ಗಂಟೆಯಷ್ಟು ಸಮಯಬೇಕು. ಅಷ್ಟರಲ್ಲಿ ಬೆಳಗ್ಗೆ ಸುಮಾರು 7.30ರ ಸುಮಾರಿಗಾಗಲೇ ರಾಜ್ಯಪಾಲರು ಜೋಗ ಜಲಪಾತ ನೋಡಲು ಬಂದಿದ್ದಾರೆ.

ಆ ವೇಳೆಗೆ ಜಲಾಶಯದಿಂದ ಬಿಟ್ಟ ನೀರು ಜಲಪಾತ ತಲುಪದೆ ಕ್ಷೀಣ ಸ್ಥಿತಿಯಲ್ಲಿದ್ದ ಜಲಪಾತವನ್ನು ನೋಡುವುದಕ್ಕಷ್ಟೇ ಗೆಹ್ಲೋಟ್ ತೃಪ್ತಿಪಡಬೇಕಾಯಿತು. 10 ನಿಮಿಷ ಜಲಪಾತದ ವೀಕ್ಷಣಾ ಪ್ರದೇಶದಲ್ಲಿದ್ದುಕೊಂಡು ರಾಜ್ಯಪಾಲರು ಜಲಪಾತ ವೀಕ್ಷಿಸಿ. ಅಲ್ಲಿಂದ ಹೊರಟರು.

ರಾಜ್ಯಪಾಲರು ಸ್ಥಳದಿಂದ ಹೊರಟ ಬಳಿಕ ಲಿಂಗನಮಕ್ಕಿ ಆಣೆಕಟ್ಟೆಯ ನೀರು ಬಂದು ಜೋಗ ಆಕರ್ಷಕವಾಗಿ ಕಾಣಿಸಿತು. ಅಧಿಕಾರಿಗಳ ಎಡವಟ್ಟಿನಿಂದ ಧುಮ್ಮುಕ್ಕಿ ಹರಿಯುವ ಜೋಗವನ್ನು ನೋಡಲು ರಾಜ್ಯಪಾಲರಿಗೆ ಅವಕಾಶ ಸಿಗದಂತಾಯಿತು.

ಈ ನಡುವೆ ಯಾವುದೇ ಮಾಹಿತಿಗಳನ್ನೂ ನೀಡದೆ ಅಧಿಕಾರಿಗಳು ಹೆಚ್ಚಿನ ನೀರು ಹರಿಬಿಟ್ಟಿದ್ದು, ಸ್ಥಳೀಯರಲ್ಲಿ ಆತಂಕವನ್ನು ಸೃಷ್ಟಿಸಿತ್ತು.

ಹೆಚ್ಚುವರಿ ನೀರು ಬಿಡುವುದಕ್ಕೂ ಮುನ್ನ ಅಧಿಕಾರಿಗಳು ಜನರಿಗೆ ಮಾಹಿತಿ ನೀಡಬೇಕೆಂದು ಅಂಬುಗಳಲೆ ನಿವಾಸಿಗಳು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಈ ಕುರಿತು ಪ್ರತಿಕ್ರಿಯೆ ನೀಡಲು ಸಾಕಷ್ಟು ಬಾರಿ ಶರಾವತಿ ಜಲವಿದ್ಯುತ್ ಯೋಜನೆಯ ಮುಖ್ಯ ಎಂಜಿನಿಯರ್ (ಸಿವಿಲ್) ಲಿಂಗನಮಕ್ಕಿ ಅವರನ್ನು ಸಂಪರ್ಕಿಸಲು ಪ್ರಯತ್ನ ನಡೆಸಲಾಗಿತ್ತಾದರೂ ಅವರು ಸಂಪರ್ಕಕ್ಕೆ ಸಿಕ್ಕಿಲ್ಲ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಭ್ರಷ್ಟರಿಗೆ ಬೆಳ್ಳಂಬೆಳಗ್ಗೆ ಲೋಕಾಯುಕ್ತ ಶಾಕ್: ಏಕ ಕಾಲದಲ್ಲಿ ರಾಜ್ಯದ 10 ಕಡೆ ದಾಳಿ- ಪರಿಶೀಲನೆ

Kabaddi World Cup 2025: ಭಾರತದ ಸಿಂಹಿಣಿಯರ ಮುಡಿಗೇರಿದ ವಿಶ್ವಕಪ್‌ ಕಿರೀಟ, ಸತತ 2ನೇ ಬಾರಿಗೆ ಪ್ರಶಸ್ತಿ ಗೆದ್ದ ಭಾರತ

ಬ್ರಾಹ್ಮಣನೊಬ್ಬ ತನ್ನ ಮಗಳನ್ನು ನನ್ನ ಮಗನಿಗೆ ದಾನ ಮಾಡುವವರೆಗೆ ಮೀಸಲಾತಿ ಮುಂದುವರೆಯಲಿ: IAS ಅಧಿಕಾರಿ ವಿವಾದಾತ್ಮಕ ಹೇಳಿಕೆ

ಆಫ್ರಿಕಾದಲ್ಲಿ ಜ್ವಾಲಾಮುಖಿ ಸ್ಫೋಟ: ಭಾರತದತ್ತ ಬರುತ್ತಿರುವ ಬೂದಿ ಹೊಗೆ, ವಿಮಾನಗಳ ಹಾರಾಟಕ್ಕೆ ಅಡ್ಡಿ

ಸಿದ್ದರಾಮಯ್ಯ, ಡಿಕೆ ಶಿವಕುಮಾರ್ ಫೈಟ್: ಮಲ್ಲಿಕಾರ್ಜುನ ಖರ್ಗೆಗೆ ಪ್ರಾಫಿಟ್; CM ಹುದ್ದೆ ನೀಡುವಂತೆ ಸೋನಿಯಾಗೆ ದಲಿತ ನಾಯಕರ ಪತ್ರ!

SCROLL FOR NEXT