ಮೊದಲ ಮೊಬೈಲ್ ಪೋಸ್ಟ್ ಆಫೀಸ್ 
ರಾಜ್ಯ

ಬೆಂಗಳೂರು: ಮೊದಲ ಮೊಬೈಲ್ ಪೋಸ್ಟ್ ಆಫೀಸ್ ಗೆ ಚಾಲನೆ

ಮೊದಲ ಮೊಬೈಲ್ ಅಂಚೆ ಕೇರಿಗೆ ಮುಖ್ಯ ಪೋಸ್ಟ್‌ಮಾಸ್ಟರ್ ಜನರಲ್ ರಾಜೇಂದ್ರ ಎಸ್ ಕುಮಾರ್ ಅವರು ಮಂಗಳವಾರ ಚಾಲನೆ ನೀಡಿದ್ದು, ಅಬ್ಬಿಗೆರೆ ಇಂಡಸ್ಟ್ರಿಯಲ್ ಏರಿಯಾದಲ್ಲಿ ಕೈಗಾರಿಕೆಗಳ ಮನೆ ಬಾಗಿಲಿಗೆ ಪಾರ್ಸೆಲ್ ಬುಕ್ಕಿಂಗ್...

ಬೆಂಗಳೂರು: ಮೊದಲ ಮೊಬೈಲ್ ಅಂಚೆ ಕೇರಿಗೆ ಮುಖ್ಯ ಪೋಸ್ಟ್‌ಮಾಸ್ಟರ್ ಜನರಲ್ ರಾಜೇಂದ್ರ ಎಸ್ ಕುಮಾರ್ ಅವರು ಮಂಗಳವಾರ ಚಾಲನೆ ನೀಡಿದ್ದು, ಅಬ್ಬಿಗೆರೆ ಇಂಡಸ್ಟ್ರಿಯಲ್ ಏರಿಯಾದಲ್ಲಿ ಕೈಗಾರಿಕೆಗಳ ಮನೆ ಬಾಗಿಲಿಗೆ ಪಾರ್ಸೆಲ್ ಬುಕ್ಕಿಂಗ್ ನೀಡುವ ಮೂಲಕ `ಪಾರ್ಸೆಲ್ ಬುಕಿಂಗ್ ಆನ್ ವೀಲ್ಸ್' ಯೋಜನೆ ಆರಂಭವಾಗಿದೆ. ಮೊದಲ ದಿನ ಒಟ್ಟು 24 ಪಾರ್ಸೆಲ್‌ಗಳನ್ನು ಬುಕ್ ಮಾಡಲಾಗಿದೆ.

ಗುಲ್ಬರ್ಗ, ದೆಹಲಿ, ಹೈದರಾಬಾದ್ ಮತ್ತು ರಾಂಚಿ ಸೇರಿದಂತೆ 11 ನಗರಗಳಿಗೆ ಪಾರ್ಸೆಲ್‌ಗಳನ್ನು ಕಾಯ್ದಿರಿಸಿದ ಮೊದಲ ವಾಹನಕ್ಕೆ ರಾಜೇಂದ್ರ ಎಸ್ ಕುಮಾರ್ ಅವರು ಚಾಲನೆ ನೀಡಿದರು.

"ನಾವು ಕಾರ್ಯನಿರ್ವಹಿಸುವ ಮಾರ್ಗದಲ್ಲಿ ಪಾರ್ಸೆಲ್‌ಗಳನ್ನು ಉಚಿತವಾಗಿ ತೆಗೆದುಕೊಳ್ಳಲಾಗುವುದು ಮತ್ತು ಅಂಚೆ ಕಚೇರಿಗೆ ಕೊಂಡೊಯ್ಯಲಾಗುವುದು. ಅವುಗಳನ್ನು ನಿಯಮಿತ ರೀತಿಯಲ್ಲಿ ವಿಂಗಡಿಸಿ ಕಳುಹಿಸಲಾಗುವುದು. ಸ್ಥಳದಲ್ಲೇ ರಸೀದಿಗಳನ್ನು ನೀಡಲಾಗುವುದು ಮತ್ತು ಪಾರ್ಸೆಲ್ ಅನ್ನು ಸಹ ಟ್ರ್ಯಾಕ್ ಮಾಡಬಹುದು ಎಂದು ಕುಮಾರ್ ತಿಳಿಸಿದ್ದಾರೆ.

ಈ ಪ್ರಾಯೋಗಿಕ ಯೋಜನೆಯಲ್ಲಿ ಆರಂಭದಲ್ಲಿ ಅಬ್ಬಿಗೆರೆ ಮತ್ತು ಪೀಣ್ಯ ಕೈಗಾರಿಕಾ ಪ್ರದೇಶಗಳಲ್ಲಿ ಸೇವೆ ನೀಡಲಿದೆ. ಅಂಚೆ ವ್ಯಾನ್ ಪ್ರತಿದಿನ ಬೆಳಗ್ಗೆ 11.30ಕ್ಕೆ ಅಬ್ಬಿಗೆರೆ ಪ್ರದೇಶಕ್ಕೆ ಬರಲಿದ್ದು, ಮಧ್ಯಾಹ್ನ 2.30ರವರೆಗೆ ಲಭ್ಯವಿರುತ್ತದೆ. ಇದಾದ ನಂತರ, ಬುಕಿಂಗ್ ಸಂಗ್ರಹಿಸಲು ವಾಹನವು ಮಧ್ಯಾಹ್ನ 3 ಗಂಟೆಗೆ ಪೀಣ್ಯ ಕೈಗಾರಿಕಾ ಪ್ರದೇಶಕ್ಕೆ ತೆರಳುತ್ತದೆ ಎಂದರು.

ಈ ಮಾರ್ಗದಲ್ಲಿ ಸೇವೆ ಪಡೆಯಲು, 9480884078 ಗೆ ಕರೆ ಮಾಡಬಹುದು.

ಸಾರ್ವಜನಿಕರು ತಮ್ಮ ಪ್ರದೇಶಗಳಲ್ಲಿ ಇದೇ ರೀತಿಯ ಸೇವೆ ಬಯಸುವವರು bd.karbg@indiapost.gov.in ಗೆ ಮೇಲ್ ಮಾಡಿ ತಿಳಿಸಿದರೆ, ಅದರ ಕಾರ್ಯಸಾಧ್ಯತೆಯನ್ನು ಪರಿಶೀಲಿಸಲಾಗುವುದು ಎಂದು ಅಧಿಕೃತ ಪ್ರಕಟಣೆ ತಿಳಿಸಿದೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಜಮ್ಮು-ಕಾಶ್ಮೀರ: ಮಸೂದ್ ಅಜರ್ ಆಡಿಯೋ ಬೆನ್ನಲ್ಲೇ ಭಾರತದ ಗಡಿಗೆ ನುಗ್ಗಲು 'ಪಾಕ್ ಡ್ರೋನ್' ಗಳು ಯತ್ನ!

1st ODI: ಕೊಹ್ಲಿ ಅರ್ಧಶತಕ: ನ್ಯೂಜಿಲ್ಯಾಂಡ್ ವಿರುದ್ಧದ ಪಂದ್ಯದಲ್ಲಿ ಭಾರತಕ್ಕೆ ರೋಚಕ ಜಯ!

ಕಾಂಗ್ರೆಸ್ ಶಾಸಕಿ ನಯನಾ ಮೋಟಮ್ಮಗೆ ಅಶ್ಲೀಲ ಕಾಮೆಂಟ್! ಕಿಡಿಗೇಡಿಗಳಿಗೆ ಕೊಟ್ಟ ವಾರ್ನಿಂಗ್ ಏನು?

ಮಿಲಿಟರಿ ದಾಳಿಗೆ ಟ್ರಂಪ್, ನೆತನ್ಯಾಹು ಸಜ್ಜು: ತಿರುಗೇಟು ನೀಡಿದ ಇರಾನ್! ಹೇಳಿದ್ದೇನು ಗೊತ್ತಾ?

ಪಾಕಿಸ್ತಾನದಲ್ಲಿ 'ಗುಂಡಿಟ್ಟು' ಹಿಂದೂ ರೈತನ ಕಗ್ಗೊಲೆ! ಹೈದರಾಬಾದಿನಲ್ಲಿ ಆರೋಪಿಗಳ ಬಂಧನ

SCROLL FOR NEXT