ಸಂಗ್ರಹ ಚಿತ್ರ 
ರಾಜ್ಯ

ವಿಶ್ವವಿಖ್ಯಾತ ಗೋಳಗುಮ್ಮಟಕ್ಕಿಲ್ಲ ಯುನೆಸ್ಕೋ ಸ್ಥಾನಮಾನ!

ವಿಭಿನ್ನ ಕಟ್ಟಡ ಶೈಲಿ, ವಿಸ್ಮಯವೆಂಬಂತೆ ಗೋಚರಿಸುವ ಪಿಸುಗುಟ್ಟುವ ಗ್ಯಾಲರಿ. ಇಷ್ಟೇ ಅಲ್ಲ ಅನೇಕ ವಿಸ್ಮಯಗಳಿಂದ ವಿಶ್ವ ವಿಖ್ಯಾತಿ ಪಡೆದಿರುವ ವಿಜಯಪುರದ ಗೋಳಗುಮ್ಮಟ ವೀಕ್ಷಣೆಗೆ ದೇಶ ವಿದೇಶಗಳಿಂದ ಪ್ರವಾಸಿಗರು ಬರುತ್ತಾರೆ. ಆದರೆ, ಈ ಗೋಳಗುಮ್ಮಟ ಮಾತ್ರ ಯುನೆಸ್ಕೋ ಸ್ಥಾನಮಾನದಿಂದ ದೂರ ಉಳಿದಿದೆ.

ಬೆಂಗಳೂರು: ವಿಭಿನ್ನ ಕಟ್ಟಡ ಶೈಲಿ, ವಿಸ್ಮಯವೆಂಬಂತೆ ಗೋಚರಿಸುವ ಪಿಸುಗುಟ್ಟುವ ಗ್ಯಾಲರಿ. ಇಷ್ಟೇ ಅಲ್ಲ ಅನೇಕ ವಿಸ್ಮಯಗಳಿಂದ ವಿಶ್ವ ವಿಖ್ಯಾತಿ ಪಡೆದಿರುವ ವಿಜಯಪುರದ ಗೋಳಗುಮ್ಮಟ ವೀಕ್ಷಣೆಗೆ ದೇಶ ವಿದೇಶಗಳಿಂದ ಪ್ರವಾಸಿಗರು ಬರುತ್ತಾರೆ. ಆದರೆ, ಈ ಗೋಳಗುಮ್ಮಟ ಮಾತ್ರ ಯುನೆಸ್ಕೋ ಸ್ಥಾನಮಾನದಿಂದ ದೂರ ಉಳಿದಿದೆ.

ಹಾಸನ ಜಿಲ್ಲೆಯ ಬೇಲೂರಿನ ಚೆನ್ನಕೇಶವ ದೇವಾಲಯ, ಹಳೇಬೀಡು ಹೊಯ್ಸಳೇಶ್ವರ ದೇವಾಲಯ ಮತ್ತು ಮೈಸೂರು ಜಿಲ್ಲೆಯ ಟಿ ನರಸೀಪುರದ ಸೋಮನಾಥಪುರ ದೇವಾಲಯಗಳು ಈ ವರ್ಷ ಯುನೆಸ್ಕೋ ಪಾರಂಪರಿಕ ತಾಣಗಳ ಪಟ್ಟಿಯಲ್ಲಿ ಸ್ಥಾನ ಪಡೆದುಕೊಂಡಿವೆ. ಆದರೆ, ಗೋಳಗುಮ್ಮಟ ಮಾತ್ರ ಇನ್ನೂ ಯುನೆಸ್ಕೋ ಪಟ್ಟಿಗೆ ಸೇರ್ಪಡೆಯಾಗಿಲ್ಲ.

ಗೋಲ್ ಗುಂಬಜ್ 350 ವರ್ಷಗಳ ಹಿಂದೆ ನಿರ್ಮಿಸಲಾದ ಪುರಾತನ ಮತ್ತು ಐತಿಹಾಸಿಕ ಸ್ಮಾರಕಗಳಲ್ಲಿ ಒಂದಾಗಿದ್ದರೂ, ಯುನೆಸ್ಕೋ ಪಟ್ಟಿಯಲ್ಲಿ ಸ್ಥಾನ ಪಡೆಯುವಲ್ಲಿ ವಿಫಲವಾಗಿದೆ.

ಭಾರತೀಯ ಪುರಾತತ್ವ ಸರ್ವೇಕ್ಷಣಾ ಇಲಾಖೆಯುು ಕನಿಷ್ಠ 83 ವಿವಿಧ ಸಣ್ಣ ಮತ್ತು ದೊಡ್ಡ ಸ್ಮಾರಕಗಳನ್ನು ಸಂರಕ್ಷಿತ ಸ್ಮಾರಕಗಳೆಂದು ಘೋಷಿಸಿದೆ. "ಇವುಗಳಲ್ಲಿ, ಪ್ರಸಿದ್ಧ ಪಿಸುಗುಟ್ಟುವ ಗ್ಯಾಲರಿ, ಗೋಲ್ ಗುಂಬಜ್ ಸೇರಿದಂತೆ ಕನಿಷ್ಠ ಹತ್ತು ದೊಡ್ಡ ಸ್ಮಾರಕಗಳಿವೆ. ಈ ಸ್ಮಾರಕವು ಯುನೆಸ್ಕೋ ಪಾರಂಪರಿಕ ತಾಣಗಳ ಪಟ್ಟಿಯಲ್ಲಿ ಸ್ಥಾನ ಪಡೆಯಲು ಅರ್ಹವಾಗಿದೆ ಎಂದು ಹಿರಿಯ ಇತಿಹಾಸಕಾರ ಮತ್ತು ಬರಹಗಾರ ಅಬ್ದುಲ್ಗನಿ ಇಮಾರತ್ವಾಲೆ ಹೇಳಿದರು,

ಹೆಸರುವಾಸಿಯಾದ ಸ್ಮಾರಕವು ಯುನೆಸ್ಕೋದ ಪಾರಂಪರಿಕ ತಾಣಗಳ ಭಾಗವಾಗಲು ವಿಫಲವಾಗದರೆ, ಅದು ಪ್ರಾಚೀನ ನಗರದ ಶ್ರೀಮಂತ, ವೈವಿಧ್ಯಮಯ ಮತ್ತು ಇತಿಹಾಸಕ್ಕೆ ದೊಡ್ಡ ಅನ್ಯಾಯವಾದಂತಾಗಲಿದೆ ಎಂದು ತಿಳಿಸಿದ್ದಾರೆ.

ಯುನೆಸ್ಕೋದ ಪಟ್ಟಿಗೆ ಗೋಲ್ ಗುಂಬಜ್ ಹೆಸರನ್ನು ಸೇರ್ಪಡೆಗೊಳಿಸಲು ಒತ್ತಾಯಿಸಲಾಗುತ್ತದೆ ಎಂದು ಹಿರಿಯ ಎಎಸ್‌ಐ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಜಮ್ಮುವಿನಾದ್ಯಂತ ಭಾರೀ ಮಳೆ: ಪ್ರವಾಹ, ಭೂಕುಸಿತದಿಂದ ಮೂವರು ಸಾವು; ಕೊಚ್ಚಿ ಹೋದ ಸೇತುವೆ; Video

Indian Navyಗೆ ಮತ್ತಷ್ಟು ಬಲ: INS Udaygiri, INS Himgiri ಯುದ್ಧನೌಕೆಗಳು ಸೇರ್ಪಡೆ!

ಬಿಹಾರ: ಇನ್ನು 40-50 ವರ್ಷ ಅಧಿಕಾರದಲ್ಲಿ ಇರ್ತೀವಿ ಅಂತಾ ಅಮಿತ್ ಶಾ ಗೆ ಹೇಗೆ ಗೊತ್ತು? ರಾಹುಲ್ ಗಾಂಧಿ

ಭ್ರಷ್ಟಾಚಾರ ಪ್ರಕರಣ: ಬಂಧಿತ ಶ್ರೀಲಂಕಾ ಮಾಜಿ ಅಧ್ಯಕ್ಷ ವಿಕ್ರಮಸಿಂಘೆಗೆ ಜಾಮೀನು

ನನ್ನ-ಕಾಂಗ್ರೆಸ್ ಮಧ್ಯೆ ಭಕ್ತ-ಭಗವಂತನ ಸಂಬಂಧ ಇದೆ; RSS ಗೀತೆ ಹಾಡಿದ್ದಕ್ಕೆ ನೋವಾಗಿದ್ದರೆ ಕ್ಷಮೆ ಕೇಳುತ್ತೇನೆ: ಡಿ.ಕೆ ಶಿವಕುಮಾರ್; Video

SCROLL FOR NEXT