ವಿಭೂತಿಪುರ ಕೆರೆ 
ರಾಜ್ಯ

ಬೆಂಗಳೂರು: 472 ಎಕರೆ ಕೆರೆ ಜಮೀನು ಒತ್ತುವರಿ; ಅದರಲ್ಲಿ BBMP ಮರು ಪಡೆದದ್ದು ಎಷ್ಟು?

472 ಎಕರೆ ಕೆರೆ ಭೂಮಿ ಒತ್ತುವರಿಯನ್ನು ಬಿಬಿಎಂಪಿ ಗುರುತಿಸಿದೆ. ಅದರಲ್ಲಿ ಇದುವರೆಗೆ 17.38 ಎಕರೆಯನ್ನು ಮಾತ್ರ ಮರುಪಡೆಯುವಲ್ಲಿ ಯಶಸ್ವಿಯಾಗಿದೆ.

ಬೆಂಗಳೂರು: ನಗರದಾದ್ಯಂತ ವಿವಿಧ ಕೆರೆಗಳಲ್ಲಿ 'ಬ್ರಾಂಡ್ ಬೆಂಗಳೂರು' ಅಡಿಯಲ್ಲಿ ಕೆರೆ ಅಭಿವೃದ್ಧಿಯನ್ನು ಕೈಗೆತ್ತಿಕೊಳ್ಳುತ್ತಿರುವ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ (BBMP) ಕೆರೆ ಇಲಾಖೆಯು ಒತ್ತುವರಿಯಾಗಿರುವ ಭೂಮಿಯನ್ನು ಮರುಪಡೆಯುವ ಜವಾಬ್ದಾರಿಯನ್ನು ಹೊಂದಿದೆ.

472 ಎಕರೆ ಕೆರೆ ಭೂಮಿ ಒತ್ತುವರಿಯನ್ನು ಬಿಬಿಎಂಪಿ ಗುರುತಿಸಿದೆ. ಅದರಲ್ಲಿ ಇದುವರೆಗೆ 17.38 ಎಕರೆಯನ್ನು ಮಾತ್ರ ಮರುಪಡೆಯುವಲ್ಲಿ ಯಶಸ್ವಿಯಾಗಿದೆ. ಕಂದಾಯ ಇಲಾಖೆಯಿಂದ ಕೆರೆ ಜಮೀನಿನ ಸರ್ವೆ ಪೂರ್ಣಗೊಂಡ ಬಳಿಕ ಅಧಿಕಾರಿಗಳು ಒತ್ತುವರಿ ತೆರವು ಕಾರ್ಯ ಆರಂಭಿಸಲಿದ್ದು, ಈಗಾಗಲೇ ಕೆಲ ಒತ್ತುವರಿದಾರರಿಗೆ ನೋಟಿಸ್‌ ನೀಡಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಬಿಬಿಎಂಪಿ ವ್ಯಾಪ್ತಿಯಲ್ಲಿ 183 ಕೆರೆಗಳಿದ್ದು, ಜುಲೈ 21, 2023 ಮತ್ತು ಆಗಸ್ಟ್ 1, 2023 ರಂದು ಸುಪ್ರೀಂ ಕೋರ್ಟ್ ನಿರ್ದೇಶನದ ಮೇರೆಗೆ ಸರ್ಕಾರ ಕೆರೆಗಳ ಸಂರಕ್ಷಣೆಗಾಗಿ ಕೆರೆ ಜಮೀನು ಮತ್ತು ರಾಜಕಾಲುವೆ ಸರ್ವೆ ಕೈಗೊಂಡಿದೆ. ಇಲಾಖೆ ನೋಟಿಸ್ ಕಳುಹಿಸುತ್ತಿದ್ದು, ಒತ್ತುವರಿ ತೆರವು ಮಾಡುತ್ತಿದೆ. 472 ಎಕರೆ ಕೆರೆ ಒತ್ತುವರಿಯಲ್ಲಿ ಕಂದಾಯ ಇಲಾಖೆ ಮತ್ತು ಪೊಲೀಸರ ನೆರವಿನೊಂದಿಗೆ ರೂ. 17.38 ಎಕರೆ ಭೂಮಿ ಮರುಪಡೆಯಲಾಗಿದೆ. ಇನ್ನೂ ಹೆಚ್ಚಿನ ಕೆರೆ ಭೂಮಿ ಒತ್ತುವರಿ ತೆರವುಗೊಳಿಸಲು ಪ್ರಯತ್ನಿಸಲಾಗುತ್ತಿದೆ ಎಂದು ಹಿರಿಯ ಅಧಿಕಾರಿಯೊಬ್ಬರು ಮಾಹಿತಿ ನೀಡಿದ್ದಾರೆ.

ಒತ್ತುವರಿದಾರರ ಪೈಕಿ 288 ಎಕರೆ ಭೂಮಿಯನ್ನು ಸರಕಾರಿ ಸಂಸ್ಥೆಗಳು ಮತ್ತು 188 ಎಕರೆ ಭೂಮಿಯನ್ನು ಖಾಸಗಿ ವ್ಯಕ್ತಿಗಳು ಒತ್ತುವರಿ ಮಾಡಿಕೊಂಡಿದ್ದು, ಇನ್ನು 33 ಕೆರೆಗಳ ಸರ್ವೆ ಮತ್ತು ಗುರುತು ಕಾರ್ಯ ಪೂರ್ಣಗೊಂಡಾಗ ಹೆಚ್ಚಿನ ಒತ್ತುವರಿ ವಿವರ ಹೊರಬೀಳುವ ಸಾಧ್ಯತೆ ಇದೆ ಎಂದು ಹಿರಿಯ ಅಧಿಕಾರಿಯೊಬ್ಬರು ತಿಳಿಸಿದರು.

ಕಂದಾಯ ಇಲಾಖೆಯ ಸರ್ವೇಯರ್‌ಗಳಿಂದ ಕೆರೆ ಜಮೀನು ಸರ್ವೆ ಮತ್ತು ಅತಿಕ್ರಮಣ ಪ್ರದೇಶಗಳನ್ನು ಗುರುತಿಸುವ ಕಾರ್ಯವನ್ನು ಪೂರ್ಣಗೊಳಿಸಲು ಬಿಬಿಎಂಪಿ ಕಾಯುತ್ತಿದೆ. ಬೆಂಗಳೂರು ದಕ್ಷಿಣ ತಾಲ್ಲೂಕು ಮತ್ತು ಬೆಂಗಳೂರು ನಗರ ಜಿಲ್ಲೆಯ ಆನೇಕಲ್ ತಾಲ್ಲೂಕಿನಲ್ಲಿ ಭೂ ದಾಖಲೆಗಳ ಸಹಾಯಕ ನಿರ್ದೇಶಕರು (ಎಡಿಎಲ್‌ಆರ್) ಇನ್ನೂ ಕಾರ್ಯವನ್ನು ಪ್ರಾರಂಭಿಸಿಲ್ಲ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಬೆಂಗಳೂರಿನ 183 ಕೆರೆಗಳ ಪೈಕಿ 136 ಕೆರೆಗಳ ಸರ್ವೆ ಮತ್ತು ಗುರುತು ಮಾಡುವ ಕಾರ್ಯವನ್ನು ಕಂದಾಯ ಸರ್ವೇಯರ್‌ಗಳು ಪೂರ್ಣಗೊಳಿಸಿದ್ದಾರೆ. ಬೆಂಗಳೂರು ದಕ್ಷಿಣ ಮತ್ತು ಆನೇಕಲ್ ತಾಲೂಕುಗಳಲ್ಲಿರುವ 33 ಕೆರೆಗಳ ಕೆರೆಗಳ ಬಫರ್ ಜೋನ್ ಗುರುತಿಸುವಿಕೆ ಮತ್ತು ಒತ್ತುವರಿ ತೆರವು ಇನ್ನೂ ಗುರುತಿಸಿಲ್ಲ ಎಂದು ಅವರು ಹೇಳಿದರು.

ಹಲವು ಪ್ರಕರಣಗಳಲ್ಲಿ ಒತ್ತುವರಿ ತೆರವು ವಿರುದ್ಧ ನ್ಯಾಯಾಲಯದ ತಡೆ ತೆರವು ಸಾಧ್ಯವಾಗದ ಕಾರಣ ಪಾಲಿಕೆ ಕಾನೂನು ತಂಡಕ್ಕೆ ದೊಡ್ಡ ನಿರಾಸೆಯಾಗಿದೆ ಮತ್ತು ಬಿಬಿಎಂಪಿ ಕಾನೂನು ವಿಭಾಗದಲ್ಲಿ ದೊಡ್ಡ ಬದಲಾವಣೆಗೆ ಮುಖ್ಯ ಆಯುಕ್ತರೊಂದಿಗೆ ವಿಷಯ ಹಂಚಿಕೊಳ್ಳಲು ಕೆರೆ ವಿಭಾಗವು ಚಿಂತಿಸುತ್ತಿದೆ. 136 ಕೆರೆಗಳ ಸಮೀಕ್ಷೆಯಲ್ಲಿ ಬಿಬಿಎಂಪಿ 29 ಕೆರೆಗಳ ಒತ್ತುವರಿ ತೆರವು ಮಾಡಿದ್ದು, 31 ಕೆರೆಗಳಲ್ಲಿ ಸರ್ಕಾರಿ ಒತ್ತುವರಿ ಎಂದು ದಾಖಲಾಗಿದೆ ಎಂದು ಮೂಲಗಳು ತಿಳಿಸಿವೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಜಮ್ಮು-ಕಾಶ್ಮೀರ: ಮಸೂದ್ ಅಜರ್ ಆಡಿಯೋ ಬೆನ್ನಲ್ಲೇ ಭಾರತದ ಗಡಿಗೆ ನುಗ್ಗಲು 'ಪಾಕ್ ಡ್ರೋನ್' ಗಳು ಯತ್ನ!

1st ODI: ಕೊಹ್ಲಿ ಅರ್ಧಶತಕ: ನ್ಯೂಜಿಲ್ಯಾಂಡ್ ವಿರುದ್ಧದ ಪಂದ್ಯದಲ್ಲಿ ಭಾರತಕ್ಕೆ ರೋಚಕ ಜಯ!

ಕಾಂಗ್ರೆಸ್ ಶಾಸಕಿ ನಯನಾ ಮೋಟಮ್ಮಗೆ ಅಶ್ಲೀಲ ಕಾಮೆಂಟ್! ಕಿಡಿಗೇಡಿಗಳಿಗೆ ಕೊಟ್ಟ ವಾರ್ನಿಂಗ್ ಏನು?

ಮಿಲಿಟರಿ ದಾಳಿಗೆ ಟ್ರಂಪ್, ನೆತನ್ಯಾಹು ಸಜ್ಜು: ತಿರುಗೇಟು ನೀಡಿದ ಇರಾನ್! ಹೇಳಿದ್ದೇನು ಗೊತ್ತಾ?

ಪಾಕಿಸ್ತಾನದಲ್ಲಿ 'ಗುಂಡಿಟ್ಟು' ಹಿಂದೂ ರೈತನ ಕಗ್ಗೊಲೆ! ಹೈದರಾಬಾದಿನಲ್ಲಿ ಆರೋಪಿಗಳ ಬಂಧನ

SCROLL FOR NEXT