ಬೆಂಗಳೂರು: ಎಸ್ ಐಆರ್ ನಲ್ಲಿ ಲೋಪವಾಗುತ್ತಿದೆ ಎಂಬ ವಿಪಕ್ಷಗಳ ಆರೋಪ ಕುರಿತು ಗೃಹ ಸಚಿವ ಪ್ರಿಯಾಂಕ್ ಖರ್ಗೆ ಇಂದು ಮಾಧ್ಯಮ ಪ್ರತಿನಿಧಿಗಳಿಗೆ ಪ್ರತಿಕ್ರಿಯೆ ನೀಡಿದ್ದಾರೆ.
ಕಾನೂನು ಮೀರಿ ಯಾರು ಏನು ಮಾಡುವುದಕ್ಕೂ ಆಗುವುದಿಲ್ಲ. ಚುನಾವಣಾ ಆಯೋಗದ ವಿಕ್ಷಕರು ಇರುತ್ತಾರೆ. ಲೋಪ ಆಗಿದ್ದರೆ ಆಯೋಗ ಕ್ರಮ ತೆಗೆದುಕೊಳ್ಳಬಹುದು. ಸರ್ಕಾರ ಯಾರಿಗೂ ಒತ್ತಾಯ ಮಾಡಿ ಎಸ್ ಐಆರ್ ಮಾಡಿಸುತ್ತಿಲ್ಲ ಎಂದರು.
ಸಮುದಾಯ ಭವನ ಕಚೇರಿಯಲ್ಲಿ ಎಸ್ ಐಆರ್ ಮಾಡಿ ಅಂತಾ ಹೇಳಿಲ್ಲ. ಎಸ್ ಐಆರ್ ಬಗ್ಗೆ ಜನರಲ್ಲಿ ಆತಂಕ ಇರೋದು ನಿಜ. ಅದಕ್ಕೆ 12 ಪ್ರಶ್ನೆ ಕೇಳಿದ್ದೇವೆ ಚುನಾವಣಾ ಆಯೋಗ ಉತ್ತರಿಸಿಲ್ಲ. ಎಸ್ ಐ ಆರ್ ಪ್ರಕ್ರಿಯೆ ಬಗ್ಗೆ ಜನರಿಗೆ ಆತಂಕ ಸಂಶಯ ಇದೆ. ರೂಲ್ಸ್ ಮಾಡೋದು ನಾವಲ್ಲ. ಆಯೋಗ ಉತ್ತರ ಕೊಡಬೇಕು ಎಂದರು.
ಎಸ್ಐಆರ್ನಲ್ಲಿನ ತಾರ್ಕಿಕ ವೈರುಧ್ಯಗಳ ಕುರಿತು ನಮ್ಮ ಪ್ರಶ್ನೆಗಳಿಗೆ ಚುನಾವಣಾ ಆಯೋಗ ಉತ್ತರಿಸುತ್ತಿಲ್ಲ; ನ್ಯಾಯಸಮ್ಮತ ಮತದಾರರ ಪಟ್ಟಿ ಪರಿಷ್ಕರಣೆ ಪ್ರಕ್ರಿಯೆ ಅಗತ್ಯ ಎಂದರು.