IAS ಅಧಿಕಾರಿ ಜ್ಞಾನೇಂದ್ರ, ಮಧ್ಯವರ್ತಿ ಬಸವರಾಜ ಕನ್ನಾಳೆ  Online Desk
ರಾಜ್ಯ

ಚಿನ್ನ ಖರೀದಿಗಷ್ಟೇ ಅಲ್ಲ, ಪ್ರೇಯಸಿ ಜೊತೆ ಪ್ರವಾಸಕ್ಕೂ IAS ಅಧಿಕಾರಿ ಜ್ಞಾನೇಂದ್ರ ಕುಮಾರ್‌ಗೆ ಹಣ ನೀಡಿದ್ದ ಕನ್ನಾಳೆ; CID ತನಿಖೆಯಲ್ಲಿ ಬಯಲು!

ಬೀದರ್‌ನಲ್ಲಿರುವ ತನ್ನ ಮಾಲೀಕತ್ವದ ಭಗವತಿ ಎಂಟರ್‌ರ್ಪ್ರೈಸಸ್ ಮೂಲಕ ಕನ್ನಾಳಿ ಜ್ಞಾನೇಂದ್ರ ಕುಮಾರ್ ಮತ್ತು ಪ್ರೇಯಸಿಗೆ ಟಿಕೆಟ್‌ಗಳನ್ನು ಖರೀದಿಸಿ ನೀಡಿದ್ದಾನೆ.

ಬೆಂಗಳೂರು: ಕರ್ನಾಟಕ ಲೋಕಸೇವಾ ಆಯೋಗ (KPSC) ನಡೆಸಿದ್ದ ಪಶುವೈದ್ಯಾಧಿಕಾರಿ ಹುದ್ದೆಗಳ ನೇಮಕಾತಿ ಹಗರಣದಲ್ಲಿ ಜೈಲು ಪಾಲಾಗಿರುವ ಐಎಎಸ್ ಅಧಿಕಾರಿ ಜ್ಞಾನೇಂದ್ರ ಕುಮಾರ್ ಹಾಗೂ ಬಿಜೆಪಿ ಮುಖಂಡ ಬಸವರಾಜ್ ಕನ್ನಾಳೆ ಅಕ್ರಮಗಳು ಇದೀಗ ಬಗೆದಷ್ಟೂ ಬಯಲಾಗುತ್ತಿವೆ.

ಜ್ಞಾನೇಂದ್ರ ಕುಮಾರ್ ತನ್ನ ಪ್ರೇಯಸಿಗೆ ಚಿನ್ನ ಖರೀದಿಸಲು ಹಣ ಹಾಕಿದ್ದ ಕನ್ನಾಳೆ ಇದೀಗ ಅವರಿಬ್ಬರ ಸುತ್ತಾಟಕ್ಕೂ ಹಣ ನೀಡಿರುವುದು ಸಿಐಡಿ ತನಿಖೆಯಲ್ಲಿ ಬಯಲಾಗಿದೆ.

ಜ್ಞಾನೇಂದ್ರ ಕುಮಾರ್ ಹಾಗೂ ಆತನ ಪ್ರೇಯಸಿ ಉತ್ತರ ಪ್ರದೇಶ ಪ್ರಸಿದ್ಧ ಸ್ಥಳ ಸೇರಿದಂತೆ ದೇಶದ ವಿವಿಧೆಡೆಗೆ ಪ್ರಯಾಣಿಸಲು 23 ವಿಮಾನದ ಟಿಕೆಟ್‌ಗಳು ಸೇರಿ ಇತರ ಖರ್ಚು-ವೆಚ್ಚಗಳಿಗೆ ಸುಮಾರು ₹11 ಲಕ್ಷವನ್ನು ಬಸವರಾಜ ಕನ್ನಾಳೆಯೇ ಭರಿಸಿರುವುದು ತನಿಖೆಯಿಂದ ತಿಳಿದುಬಂದಿದೆ.

ಬೀದರ್‌ನಲ್ಲಿರುವ ತನ್ನ ಮಾಲೀಕತ್ವದ ಭಗವತಿ ಎಂಟರ್‌ರ್ಪ್ರೈಸಸ್ ಮೂಲಕ ಕನ್ನಾಳಿ ಜ್ಞಾನೇಂದ್ರ ಕುಮಾರ್ ಮತ್ತು ಪ್ರೇಯಸಿಗೆ ಟಿಕೆಟ್‌ಗಳನ್ನು ಖರೀದಿಸಿ ನೀಡಿದ್ದಾನೆ.

ಮಾರ್ಚ್ ಮತ್ತು ಜೂನ್ ತಿಂಗಳಲ್ಲಿ ಜ್ಞಾನೇಂದ್ರ ಕುಮಾರ್ ತನ್ನ ಪ್ರೇಯಸಿಗೆ ₹26 ಲಕ್ಷ, ಮತ್ತೊಮ್ಮೆ ₹26 ಲಕ್ಷ ಸೇರಿದಂತೆ ಒಟ್ಟು ₹52 ಲಕ್ಷ ಮೌಲ್ಯದ ಚಿನ್ನ ಮತ್ತು ವಜ್ರಾಭರಣಗಳನ್ನು ಉಡುಗೊರೆಯಾಗಿ ನೀಡಿದ್ದಾರೆ. ಇದಕ್ಕಾಗಿ ₹1.9 ಲಕ್ಷ ನಗದು ಮತ್ತು ಸ್ನೇಹಿತೆಯ ಕ್ರೆಡಿಟ್ ಕಾರ್ಡ್ ಬಳಸಿ ₹1 ಲಕ್ಷ ಸೇರಿದಂತೆ ಒಟ್ಟು ₹2.9 ಲಕ್ಷ ಪಾ ವತಿಸಲಾಗಿತ್ತು. ಬಾಕಿ ಹಣವನ್ನು ಬೀದರ್‌ನ ಕೋ-ಆಪರೇಟಿವ್ ಬ್ಯಾಂಕ್‌ನಲ್ಲಿರುವ ವಿವಿಧ ಖಾತೆಗಳ ಮೂಲಕ ಡಿಕನ್ಸನ್ ರಸ್ತೆಯಲ್ಲಿರುವ ಜ್ಯುವೆಲ್ಲರಿ ಶಾಪ್‌ವೊಂದಕ್ಕೆ ವರ್ಗಾಯಿಸಿದ್ದಾನೆ.

ಈ ಹಣ ವರ್ಗಾವಣೆ ಮಾಡುವ ಸಲುವಾಗಿಯೇ ಆರೋಪಿ ಬಸವರಾಜು ಕನ್ನಾಳೆ ತನ್ನ ಸ್ನೇಹಿತರ ಹೆಸರಿನಲ್ಲಿ ಕೋ-ಆಪರೇಟಿವ್ ಸೊಸೈಟಿಯಲ್ಲಿ ಖಾತೆಗಳನ್ನು ತೆರೆಸಿದ್ದನು. ಇದೀಗ, ಚಿನ್ನಾಭರಣ ಖರೀದಿಸಿದ್ದ ಕುರಿತು ಜುವೆಲ್ಲರಿ ಶಾಪ್‌ನಲ್ಲಿರುವ ಸಿಸಿ ಕ್ಯಾ ಮೆರಾಗಳ ದೃಶ್ಯಗಳನ್ನು ಜಪ್ತಿ ಮಾಡಲಾಗಿದೆ ಎಂದು ಇವರಿಬ್ಬರ ಜಾಮೀನಿಗೆ ಆಕ್ಷೇಪಣೆ ಸಲ್ಲಿರುವ ಸಿಐಡಿ ತನ್ನ ಅರ್ಜಿಯಲ್ಲಿ ಉಲ್ಲೇಖಿಸಿದೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

ಮುಂಬೈ ಕೋಸ್ಟಲ್ ರೋಡ್‌ನಲ್ಲಿ ಭೀಕರ ಅಪಘಾತ; 75 ಅಡಿ ಕೆಳಗೆ ಬಿದ್ದ BMW ಕಾರು, 3 ವಿದ್ಯಾರ್ಥಿಗಳ ಸಾವು! Video

ಮುಂಗಾರು ಹಿಂತೆಗೆತ ಆರಂಭ; ‘Arnab’ ಚಂಡಮಾರುತ ಭೀತಿ, ಈ ರಾಜ್ಯಗಳಲ್ಲಿ ಭಾರಿ ಮಳೆ ಸಾಧ್ಯತೆ!

ಮುಂಬೈ ಗಣೇಶೋತ್ಸವ ವೇಳೆ ದುರಂತ: ವಿದ್ಯುತ್ ತಗುಲಿ 8 ವರ್ಷದ ಬಾಲಕಿ ಸೇರಿ ಇಬ್ಬರ ಸಾವು!

‘ಮಹಿಳೆಯ ದೇಹವೇನು ಸಾರ್ವಜನಿಕ ಜಾಹಿರಾತು ಫಲಕವೇ?’; Katrina Kaif ಪರ ನಟಿ ಖುಷ್ಬೂ ಖಡಕ್ ಮಾತು!

ಬೆಂಗಳೂರಿಗೆ ಗುಡ್‌ನ್ಯೂಸ್; ಮಾನ್ಸೂನ್ ಅಂತ್ಯವಾದರೂ ಭಾರಿ ವರ್ಷಧಾರೆ, ಮಂಗಳವಾರದಿಂದ ಮತ್ತಷ್ಟು ಚುರುಕು!