ಸಂಗ್ರಹ ಚಿತ್ರ 
ಜೀವನಶೈಲಿ

ಕಾರು ಅಪಘಾತಗಳಿಗೆ ಚಾಲಕರ ನಿದ್ರಾ ಕೊರತೆಯೇ ಪ್ರಮುಖ ಕಾರಣ!

ಇತ್ತೀಚಿನ ದಿನಗಳಲ್ಲಿ ಸಹಸ್ರಾರು ಜನರು ಉತ್ತಮ ಗುಣಮಟ್ಟದ ನಿದ್ರೆ. ಅಗತ್ಯವನ್ನು ಕಡೆಗಣಿಸುವುದು ಸಾಮಾನ್ಯವಾಗಿ ಹೋಗಿದೆ. ಆದರೆ, ನಿದ್ರೆಯನ್ನು ತಡೆದರೆ ಆಗುವ ದುಷ್ಪರಿಣಾಮಗಳು ಅಪಾರ ಎಂಬುದು ಎಲ್ಲರಿಗೂ ತಿಳಯಬೇಕಾಗಿದೆ. ಇತ್ತೀಚಿನ ದಿನಗಳಲ್ಲಿ...

ಇತ್ತೀಚಿನ ದಿನಗಳಲ್ಲಿ ಸಹಸ್ರಾರು ಜನರು ಉತ್ತಮ ಗುಣಮಟ್ಟದ ನಿದ್ರೆ. ಅಗತ್ಯವನ್ನು ಕಡೆಗಣಿಸುವುದು ಸಾಮಾನ್ಯವಾಗಿ ಹೋಗಿದೆ. ಆದರೆ, ನಿದ್ರೆಯನ್ನು ತಡೆದರೆ ಆಗುವ ದುಷ್ಪರಿಣಾಮಗಳು ಅಪಾರ ಎಂಬುದು ಎಲ್ಲರಿಗೂ ತಿಳಯಬೇಕಾಗಿದೆ. ಇತ್ತೀಚಿನ ದಿನಗಳಲ್ಲಿ ಸಂಭವಿಸುತ್ತಿರುವ ಬಹುತೇಕ ಅಪಘಾತಗಳಿಗೆ ನಿದ್ರಾ ಕೊರತೆಯೇ ಕಾರಣವಾಗಿದೆ. ಕಾರು ಅಪಘಾತಗಳಿಗ ಚಾಲಕನ ನಿದ್ರಾ ಕೊರತೆಯೇ ಪ್ರಮುಖ ಕಾರಣವೆಂದು ಸಂಶೋಧನೆಯೊಂದು ಹೇಳಿದೆ. 
ಸತತವಾಗಿ ನಿದ್ರಾ ಕೊರತೆಯಿರುವ ಜನರಲ್ಲಿ ನಿದ್ರಾ ಮಂಪರಿನ ಸ್ಥಿತಿ, ಶಕ್ತಿಯ ಕೊರತೆ, ಇರಿಸು-ಮುರಿಸು ಮತ್ತು ಕೆಲವೊಮ್ಮೆ ಕಿನ್ನತೆಗಳು ಕಾಡುತ್ತವೆ. 
ದಿನದ 24 ಗಂಟೆಗಳಲ್ಲಿ ಕನಿಷ್ಟ 7 ಗಂಟೆಯಾದರೂ ವ್ಯಕ್ತಿ ನಿದ್ರೆ ಮಾಡಬೇಕು. ಇದಕ್ಕೂ ಕಡಿಮೆ ನಿದ್ರೆ ಮಾಡುವವರು ನಿದ್ರಾ ಕೊರತೆಯಿಂದ ಬಳಲುತ್ತಾರೆ. ಇದರಿಂದ ಕಾರು ಅಪಘಾತಗಳು ಹೆಚ್ಚಾಗಿ ಸಂಭವಿಸುತ್ತವೆ. ನಾಲ್ಕು ಗಂಟೆಗಿಂತಲೂ ಕಡಿಮೆ ನಿದ್ರೆ ಮಾಡುವ ಕಾರು ಚಾಲಕು ಅಪಾಯದಲ್ಲಿ ಸಿಲುಕಿಕೊಳ್ಳುವ ಸಂಭವ ಹೆಚ್ಚಾಗಿರುತ್ತದೆ. 
ಇದರ ಬಗ್ಗೆ ಚಾಲಕರಿಗೆ ಹೆಚ್ಚಾಗಿಯೇ ತಿಳಿದಿರುತ್ತದೆ. ಕಾರು ಅಪಘಾತಕ್ಕೆ ಚಾಲಕ ಎಷ್ಟು ಗಂಟೆಗಳ ಕಾಲ ನಿದ್ರೆ ಮಾಡುತ್ತಾನೆಂಬುದೂ ಕೂಡ ಕಾರಣವಾಗಿರುತ್ತದೆ. 
ಈ ಬಗ್ಗೆ ಈ ಹಿಂದೆ ಕೂಡ ಅಮೆರಿಕಾದ ಸಾರಿಗೆ ಇಲಾಖೆ ಸಂಶೋಧನೆ ನಡೆಸಿತ್ತು. ಇದರಲ್ಲಿ 5,470 ಅಪಘಾತಗಳ ಮಾದರಿಗಳನ್ನು ಸಂಗ್ರಹ ಮಾಡಿತ್ತು. ಸಂಶೋಧನೆಯ ವರದಿಯಲ್ಲಿ ನಿದ್ರಾ ಕೊರತೆಯಿಂದ ಬಳರುತ್ತಿದ್ದ ಬಹುತೇಕ ಚಾಲಕರು ಅಪಘಾತಕ್ಕೀಡಾಗಿರುವುದು ಕಂಡು ಬಂದಿತ್ತು. 24 ಗಂಟೆಗಳಲ್ಲಿ 6, 5 ಮತ್ತು ನಾಲ್ಕು ಗಂಟೆಗಳ ಕಾಲ ನಿದ್ರೆ ಮಾಡುವವರು ಅಪಘಾತದಂತಹ ದುರ್ಘಟನೆಗಳಿಗೆ ಜವಾಬ್ದಾರರಾಗಿರುತ್ತದೆ. 
ಇದಲ್ಲದೆ, ದಿನದಲ್ಲಿ ಕೇವಲ ನಾಲ್ಕು ಗಂಟೆಗಳ ಕಾಲ ನಿದ್ರೆ ಮಾಡುವ ದ್ವಿಚಕ್ರ ವಾಹನ ಸವಾರರು ಕೂಡ ಅಪಾಯವನ್ನು ಎದುರಿಸುತ್ತಾರೆ. ನಿದ್ರಿಸುವ ಸಮಯ ಹಾಗೂ ಕೆಲಸ ಸಮಯವನ್ನು ಬದಲಿಸಿಕೊಂಡು ಹಾಗೂ 3ಕ್ಕೂ ಹೆಚ್ಚು ಗಂಟೆಗಳ ಕಾಲ ವಿಶ್ರಾಂತಿ ಇಲ್ಲದೆ ಚಾಲನೆ ಮಾಡುವವರು ಅಪಾಯದಲ್ಲಿ ಸಿಲುಕುತ್ತಾರೆ. 
ದೈನಂದಿನ ಜೀವನದಲ್ಲಿ ಹೆಚ್ಚು ಕಾರ್ಯಕ್ಷಮತೆಯಿಂದ ಕೂಡಿರಲು ರಾತ್ರಿ ವೇಳೆ ಉತ್ತಮ ನಿದ್ರೆ ಅತ್ಯಂತ ಮುಖ್ಯವಾಗಿರುತ್ತದೆ. ನಾಕಷ್ಟು ನಿದ್ರೆ ಇಲ್ಲದಿರುವುದರಿಂದ ಗಂಭೀರ ಪ್ರತಿಕೂಲ ಪರಿಣಾಮಗಳನ್ನು ಎದುರಿಸಬೇಕಾಗುತ್ತದೆ. ತೂಕ ಹೆಚ್ಚುವುದು, ರಕ್ತದೊತ್ತಡ, ರೋಗ ನಿರೋಧಕ ಶಕ್ತಿ ಕುಂದುವುದು, ಮಧುಮೇಹ, ಭಾವನೆಗಳಲ್ಲಿ ಬದಲಾವಣೆ, ಕಳಪೆ ನೆನಪಿನ ಶಕ್ತಿ ಮತ್ತು ಏಕಾಗ್ರತೆಯಲ್ಲಿ ಕೊರತೆಯ ಮುಂತಾದ ಸಮಸ್ಯೆಗಳು ಕಾಣಿಸಿಕೊಳ್ಳುತ್ತದೆ. 

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಇದು ಕೇವಲ ಧ್ವಜವಲ್ಲ ಭಾರತೀಯ ನಾಗರಿಕತೆಯ ಪುನರ್‌ ಜಾಗೃತಿಯ ಧ್ವಜ, ಶತಮಾನಗಳಷ್ಟು ಹಳೆಯ ಗಾಯ ಈಗ ವಾಸಿಯಾಗುತ್ತಿದೆ: ಪ್ರಧಾನಿ ಮೋದಿ

ಅಯೋಧ್ಯೆ ರಾಮ ಮಂದಿರ ನಿರ್ಮಾಣ ಪೂರ್ಣ: ರಾಮ-ಸೀತೆ ವಿವಾಹ ಪರ್ವದಂದೇ ದೇಗುಲದ ಶಿಖರದ ಮೇಲೆ ಧ್ವಜಾರೋಹಣ ನೆರವೇರಿಸಿದ ಪ್ರಧಾನಿ ಮೋದಿ

"Misfit For Army": ಗುರುದ್ವಾರ ಪ್ರವೇಶಿಸಲು ನಿರಾಕರಣೆ, ಕ್ರಿಶ್ಚಿಯನ್ ಸೇನಾ ಅಧಿಕಾರಿಗೆ 'ಸುಪ್ರೀಂ' ತರಾಟೆ!

ಭ್ರಷ್ಟರಿಗೆ ಬೆಳ್ಳಂಬೆಳಗ್ಗೆ ಲೋಕಾಯುಕ್ತ ಶಾಕ್: ಏಕ ಕಾಲದಲ್ಲಿ ರಾಜ್ಯದ 10 ಕಡೆ ದಾಳಿ- ಪರಿಶೀಲನೆ

WPL 2026 auction: ಈ ಬಾರಿಯ 'ಮೋಸ್ಟ್ ಡಿಮ್ಯಾಂಡ್' ಆಟಗಾರ್ತಿ ಯಾರು?

SCROLL FOR NEXT