ಸಾಂದರ್ಭಿಕ ಚಿತ್ರ 
ದೇಶ

ಸ್ವದೇಶಿ ನಿರ್ಮಿತ ಧನುಷ್ ಫಿರಂಗಿ ಶೀಘ್ರದಲ್ಲೇ ಭಾರತೀಯ ಸೇನೆಗೆ ಸೇರ್ಪಡೆ

ಸ್ವದೇಶಿ ಬೊಪೋರ್ಸ್ ಎಂದೇ ಗುರುತಿಸಲ್ಪಡುವ ಅತ್ಯಂತ ಸುಧಾರಿತ ತಂತ್ರಜ್ಞಾನ ಹೊಂದಿರುವ ಧನುಶ್ ಫಿರಂಗಿ ಸೇನೆಗೆ ನಿಯೋಜನೆ...

ಜಬಲ್ ಪುರ್: ಶೀಘ್ರವೇ ಭಾರತೀಯ ಭೂಸೇನೆಗೆ ಸ್ವದೇಶಿ ನಿರ್ಮಿತ ಧನುಷ್ ಫಿರಂಗಿ ನಿಯೋಜನೆಗೊಳ್ಳಲಿದೆ.

ಬೊಪೋರ್ಸ್ ಫಿರಂಗಿ ಹಗರಣದ ಹಿನ್ನಲೆಯಲ್ಲಿ ಕಳೆದ 28 ವರ್ಷಗಳಿಂದ ಅತ್ಯಾಧುನಿಕ ಫಿರಂಗಿಗಳಿಲ್ಲದೇ ಭೂಸೇನೆ ಪರದಾಡುತ್ತಿತ್ತು. ಆದರೆ, ಈ ಪರದಾಟ ಶೀಘ್ರದಲ್ಲೇ ನಿವಾರಣೆಯಾಗಲಿದೆ. ಏಕೆಂದರೆ, ಸ್ವದೇಶಿ ಬೊಪೋರ್ಸ್ ಎಂದೇ ಗುರುತಿಸಲ್ಪಡುವ ಅತ್ಯಂತ ಸುಧಾರಿತ ತಂತ್ರಜ್ಞಾನ ಹೊಂದಿರುವ ಧನುಷ್ ಫಿರಂಗಿ ಸೇನೆಗೆ ನಿಯೋಜನೆಗೊಳ್ಳಲಿದೆ.

ಕೋಲ್ಕೊತಾದ ಶಸ್ತ್ರಾಸ್ತ್ರ ಉತ್ಪಾದನಾ ಮಂಡಳಿ ಇದನ್ನು ಅಭಿವೃದ್ಧಿ ಪಡಿಸಿದ್ದು, ಪ್ರತಿ ಫಿರಂಗಿಗೆ 14 ಕೋಟಿ ವೆಚ್ಚವಾಗಲಿದೆ.ಧನುಷ್ ಫಿರಂಗಿ 38 ಕಿ.ಮೀ ನಷ್ಟು ದೂರಕ್ಕೆ ಗುಂಡನ್ನು ಹಾರಿಸುವ ಸಾಮರ್ಥ್ಯ ಹೊಂದಿದೆ. ಬೊಪೋರ್ಸ್ ಫಿರಂಗಿಗಿಂತ ಧನುಷ್ ಗುಂಡಿನ ದಾಳಿಯ ವ್ಯಾಪ್ತಿಯನ್ನು 11 ಕಿ.ಮೀನಷ್ಟು ಹೆಚ್ಚಿಸಲಾಗಿದೆ. 

2015ರ ನವೆಂಬರ್ ಹೊತ್ತಿಗೆ ಸೇನೆಗೆ ಧನುಷ್ ಫಿರಂಗಿಯನ್ನು ನಿಯೋಜಿಸಲಾಗುವುದು ಎಂದಿರುವ ಜಬಲ್ ಪುರದಲ್ಲಿರುವ ಫಿರಂಗಿ ತಯಾರಿಕೆ ಘಟಕದ ಹಿರಿಯ ಜನರಲ್ ಮ್ಯಾನೇಜರ್ ಎನ್.ಕೆ ಸಿನ್ಹಾ 45 ಕ್ಯಾಲಿಬರ್ ನೊಂದಿಗೆ 155.ಮಿ.ಮೀ ವ್ಯಾಸದ ನಳಿಕೆ ಹೊಂದಿರುವ ಈ ತೋಪಿಗೆ ಧನುಷ್ ಎಂದು ನಾಮಕರಣ ಮಾಡಲಾಗಿದೆ ಎಂದು ತಿಳಿಸಿದ್ದಾರೆ.

ಬೊಪೋರ್ಸ್ ಫಿರಂಗಿಯು 28.ಕಿ.ಮೀ ದಾಳಿ ವ್ಯಾಪ್ತಿ ಹೊಂದಿತ್ತು. 39 ಕ್ಯಾಲಿಬರ್ ನೊಂದಿಗೆ 155ಮಿ.ಮೀ ವ್ಯಾಸದ ಫಿರಂಗಿಯನ್ನು ತಯಾರಿಸಿಕೊಡುವಂತೆ ಸೇನೆ, ಸದ್ಯ ಬ್ರಿಟನ್ ಮಾಲೀಕತ್ವದಲ್ಲಿರುವ ಬೊಪೋರ್ಸ್ ಕಂಪನಿ ಬಿಎಇಗೆ ಮನವಿ ಸಲ್ಲಿಸಿತ್ತು. ಸೇನೆ ಮನವಿಯನ್ನು ಬಿಎಇ ತಿರಸ್ಕರಿಸಿತ್ತು.

ಈ ಹಿನ್ನಲೆಯಲ್ಲಿ ಫಿರಂಗಿಯ ಸ್ವದೇಶಿ ನಿರ್ಮಾಣಕ್ಕೆ ಕೈಹಾಕಿ, 2012ರ ಸೆಪ್ಟೆಂಬರ್ 22ರಂದು ಫಿರಂಗಿ ನಿರ್ಮಾಣಕ್ಕೆ ಚಾಲನೆ ನೀಡಲಾಗಿತ್ತು. ಸೇನೆಯ ವಿಶೇಷ ಪರಿಣಿತರನ್ನು ಸೂಚನೆಯ ಮೇರೆಗೆ ಯುದ್ಧ ಭೂಮಿಯ ಅಗತ್ಯಕ್ಕೆ ತಕ್ಕಂತೆ ಫಿರಂಗಿಯನ್ನು ತಯಾರಿಸಲಾಗಿದೆ ಎಂದು ಅವರು ಹೇಳಿದ್ದಾರೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಅಮೆರಿಕ ನಿಯೋಜಿತ ರಾಯಭಾರಿ ಸೆರ್ಗಿಯೊ ಗೋರ್- ಮೋದಿ, ಜೈಶಂಕರ್ ಭೇಟಿ; Tariff ಒತ್ತಡದ ನಡುವೆ ಭಾರತ-ಅಮೆರಿಕ ಸಂಬಂಧ ಸುಧಾರಣೆಯ ಸೂಚನೆ?

ಅಫ್ಘಾನಿಸ್ತಾನ ನಮ್ಮೊಂದಿಗೆ ಗಡಿ ಹಂಚಿಕೊಂಡಿರುವ ನೆರೆ ರಾಷ್ಟ್ರ- S Jaishankar; ಭಾರತದೊಂದಿಗೆ POK ವಿಲೀನದ ಸುಳಿವು; ಚೀನಾಗೂ ಶಾಕ್!

ಅಬ್ಬಬ್ಬಾ ರೋಮಾಂಚನ: ಅದ್ಭುತ ಸೃಷ್ಟಿಸಿದ ರಿಷಬ್ ಶೆಟ್ಟಿಗೆ ರಾಷ್ಟ್ರಪ್ರಶಸ್ತಿ ಕೊಡಲೇಬೇಕು - ತಮಿಳು ನಿರ್ದೇಶಕ ಅಟ್ಲೀ

Pakistan: ಇಸ್ರೇಲ್ ವಿರೋಧಿ ಪ್ರತಿಭಟನಾ ಜಾಥಾ, ಪೋಲೀಸರ ಗುಂಡೇಟಿಗೆ 11 ಮಂದಿ ಬಲಿ! Video

ಉತ್ತರ ಪ್ರದೇಶಕ್ಕೆ ಭೇಟಿ ನೀಡಿದ ತಾಲಿಬಾನ್ ಸಚಿವನಿಗೆ ಅದ್ಧೂರಿ ಸ್ವಾಗತ, ಸರ್ಕಾರದ ಭದ್ರತೆ; ಯೋಗಿಗೆ ನಾಚಿಕೆಯಾಗಬೇಕು- SP ಸಂಸದ ಶಫೀಕರ್

SCROLL FOR NEXT