ದೇಶ

ಭಾರತ್ ಮಾತಾ ಕೀ ಜೈ ಎಂದು ಹೇಳದವರ ದವಡೆ ಮುರಿಯಿರಿ: ಛತ್ತೀಸ್ ಗಡ ಸಚಿವ

Shilpa D

ರಾಯಪುರ್: ಭಾರತ್ ಮಾತಾ ಕೀ ಜೈ ಎಂದು ಘೋಷಣೆ ಕೂಗುವ ವಿಚಾರ ದಿನಕ್ಕೊಂದು ರೀತಿಯ ತಿರುವು ಪಡೆದುಕೊಳ್ಳುತ್ತಿದೆ.

ಯಾರು ಭಾರತ್ ಮಾತಾ ಕೀ ಜೈ ಎಂದು ಘೋಷಣೆ ಕೂಗುವುದಿಲ್ಲವೋ ಅಂಥವರ ದವಡೆ ಮುರಿಯುವುದಾಗಿ ಛತ್ತೀಸ್ ಗಡ ಸಚಿವ ಬ್ರಿಜ್ ಮೋಹನ್ ಅಗರ್ ವಾಲ್ ಬೆದರಿಕೆ ಹಾಕಿದ್ದಾರೆ.

ಸಾರ್ವಜನಿಕ ಕಾರ್ಯಕ್ರಮವೊಂದರಲ್ಲಿ ಮಾತನಾಡಿದ ಅವರು ಯಾರು ಘೋಷಣೆ ಕೂಗುವುದಿಲ್ಲವೋ ಅಂತವರ ದವಡೆ ಮುರಿಯಿರಿ ಎಂದು ಕರೆ ನೀಡಿದ್ದಾರೆ.

ನೀವು ಹಿಂದೂಸ್ತಾನದಲ್ಲಿ ಜನ್ಮ ತಾಳಿದ್ದರೇ, ಭಾರತದ ನೀರು ಕುಡಿಯುತ್ತಿದ್ದರೇ, ನೀವು ಸತ್ತ ನಂತರ ನಿಮ್ಮ ಅಂತ್ಯ ಸಂಸ್ಕಾರವನ್ನು ಈ ನೆಲದಲ್ಲಿಯೇ ಮಾಡಬೇಕೇಂದಿದ್ದರೇ, ಕಡ್ಡಾಯವಾಗಿ ನೀವು ಭಾರತ್ ಮಾತಾ ಕೀ ಜೈ ಎಂದು ಘೋಷಣೆ ಕೂಗಬೇಕು ಎಂದು ಆಗ್ರಹಿಸಿದ್ದಾರೆ.

SCROLL FOR NEXT